No menu items!
11.7 C
Munich
Friday, May 1, 2026

ವಿದ್ಯಾರ್ಥಿಯ‌ ಕಣ್ಣಿನ ದೃಷ್ಟಿಯನ್ನೇ ತೆಗೆದ ಶಿಕ್ಷಕ…?

Must read

ವಿದ್ಯಾರ್ಥಿಯ ಕಣ್ಣಿ‌ನ ದೃಷ್ಟಿ ತೆಗೆದ ಆರೋಪ ಚಾಮರಾಜನಗರದ ರಾಮಸಮುದ್ರದ ಬಾಲರ ಪಟ್ಟಣ ಶಾಲೆಯ ಮುಖ್ಯ ಶಿಕ್ಷಕ ಯುಸೇಫ್ ವಿರುದ್ಧ ಕೇಳಿಬಂದಿದೆ.
ಯುಸೇಫ್ ಗಿರಿ ಮಲ್ಲೇಶ್ ಎಂಬ ವಿದ್ಯಾರ್ಥಿಗರ ಸ್ಕೇಳಿನಿಂದ ಹೊಡೆದಿದ್ದಾರೆ. ಈ ವೇಳೆ ಆತನ ಎಡಗಣ್ಣಿಗೆ ಸ್ಕೇಲ್ ತಾಕಿ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ವಿದ್ಯಾರ್ಥಿಯ ಪೋಷಕರು ಆರೋಪಿಸಿದ್ದಾರೆ.


ಜನವರಿಯಲ್ಲಿ ಗಿರಿಮಲ್ಲೇಶ್ ಗಲಾಟೆ ಮಾಡುತ್ತಿದ್ದ ಎಂದು ಶಿಕ್ಷಕ ಸ್ಕೇಲ್ ನಿಂದ ಹೊಡೆದಿದ್ದಾರೆ. ಈ ವೇಳೆ ವಿದ್ಯಾರ್ಥಿ ಕಣ್ಣಿಗೆ ಸ್ಕೇಲ್ ತಾಗಿದೆ. ಬಳಿಕ ತನಗೇನು ನೋವಾಗಿಲ್ಲ ಎಂದು ಗಿರಿಮಲ್ಲೇಶ್ ಸುಮ್ಮನಿದ್ದಾನೆ.ಈಗ ಆತನಿಗೆ ನೋವು ಕಾಣಿಸಿಕೊಂಡಿದೆ. ತಂದೆ ಸೋಮೇಶ್ ಮೈಸೂರಿನ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದು, ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ದೃಷ್ಟಿ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article