ಅವರ ಮನೆಯಲ್ಲಿ ದರೋಡೆ ಆಯ್ತು..! ಅದಕ್ಕೇ ಅವರು ಹೀರೋ ಆದ್ರು..!

0
69

ಅವರ ಮನೆಯಲ್ಲಿ ದರೋಡೆ ಆಯ್ತು..! ಅದಕ್ಕೇ ಅವರು ಹೀರೋ ಆದ್ರು..!
…ಟೈಟಲ್ ಸ್ವಲ್ಪ ವಿಚಿತ್ರವಾಗಿದೆ. ಆದ್ರು ಇದು ಸತ್ಯ..! ಅವರು ಸಾಕಷ್ಟು ಸಿನಿಮಾಗಳ್ಲಲಿ ಪೋಷಕ ಪಾತ್ರಗಳನ್ನು ಮಾಡಿದವ್ರು. ಶಿವಣ್ಣನಿಂದ ಹಿಡಿದು ಯಶ್ ತನಕ ಎಲ್ಲರ ಸಿನಿಮಾಗಳಲ್ಲೂ ಮಿಂಚಿದ್ದಾರೆ. ಆದ್ರೆ ಹೀರೋ ಆಗೋ ಅವಕಾಶ ಸಿಗಲೇ ಇಲ್ಲ..! ಸಾಕಷ್ಟು ಜನ ಹಂಗ್ ಮಾಡಣ ಸರ್, ಹಿಂಗ್ ಮಾಡಣ ಸರ್ ಅಂತ ಬಂದರಾದ್ರೂ ಮತ್ತೆ ಕಣ್ಣಿಗೆ ಬೀಳಲಿಲ್ಲ..! ಸಿನಿಮಾದಲ್ಲಿ ಬಿಜಿಯಾಗೋಕೆ ಹೀರೋನೇ ಆಗ್ಬೇಕಾ ಅಂತ ಮನಸಲ್ಲೇ ಡಿಸೈಡ್ ಮಾಡ್ಕೊಂಡು ಪೋಷಕ ಪಾತ್ರಗಳಲ್ಲೇ ಬಿಜಿಯಾಗಿದ್ರು ಅವರು..! ಅವತ್ತೊಂದು ದಿನ ಪುನೀತ್ ಜೊತೆ ಒಂದು ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ತು. ಅದಕ್ಕೆ ಓಕೆ ಹೇಳಿ ಇನ್ನೇನು ನಾಳೆ ಬೆಳಗ್ಗೆ ಶೂಟಿಂಗಿಗೆ ಹೊರಡಬೇಕು ಅನ್ನೋ ಅಷ್ಟರಲ್ಲಿ ಅವತ್ತು ರಾತ್ರಿ ಒಂದು ಬಹಳಾ ದೊಡ್ಡ ಅನಾಹುತ ನಡೆದುಹೋಯ್ತು…!
ಶೂಟಿಂಗಿಗೆ ಹೊರಡೋ ಹಿಂದಿನ ದಿನ ಮನೆಗೆ ದರೋಡೆಕೋರರು ನುಗ್ಗಿದ್ರು. ಮನೆಲ್ಲಿದ್ದ ಪ್ರತಿಯೊಬ್ಬರ ಕುತ್ತಿಗೆಗೂ ಚಾಕು ಇಟ್ಟು ಇಡೀ ಮನೆಯನ್ನು ದೋಚಿಬಿಟ್ರು.. ಮೈಯಲ್ಲಿದ್ದ ಅಷ್ಟೂ ಚಿನ್ನ, ನಗದು, ವಸ್ತುಗಳು ಕಣ್ಣೆದುರಿಗೇ ಚೀಲದಲ್ಲಿ ತುಂಬಿಸಿಕೊಂಡು ಪರಾರಿಯಾಗಿಬಿಟ್ರು..!ಯಾರಿಗೂ ಏನು ಮಾಡಬೇಕು ಅಂತ ತೋಚಲೇ ಇಲ್ಲ. ಅಕ್ಷರಶಃ ಕಂಗಾಲಾಗಿ ಹೋಗಿದ್ರು. ಪೊಲೀಸರಿಗೆ ಕಂಪ್ಲೇಂಟ್ ಕೊಡೋದು ಬಿಟ್ಟು ಬೇರೇನೂ ಉಳಿದಿಲ್ಲ..! ಅದನ್ನೂ ಮಾಡಿದ್ರು. ಆದ್ರೆ ಮನೆ ಮಾತ್ರ ಖಾಲಿಖಾಲಿ.. ಅಷ್ಟು ದಿನ ದುಡಿದಿದ್ದು, ಕೂಡಿಟ್ಟಿದ್ದು, ಗಳಿಸಿದ್ದು ಒಂದು ರಾತ್ರಿಯಲ್ಲಿ ದರೋಡೆಕೋರರ ಪಾಲಾಗಿತ್ತು. ಆ ನಟನ ಅಮ್ಮ ಅಂತೂ ನೆನೆದು ನೆನೆದು ಕಣ್ಣೀರಿಟ್ರು..! `ಅಮ್ಮ ಬೇಜಾರ್ ಮಾಡ್ಕೋಬೇಡ’ ಅಂತ ಹೇಳಿ, ಪುನೀತ್ ಸಿನಿಮಾಗೆ ಒಪ್ಪಿಕೊಂಡಿದ್ದರಲ್ಲಿ ಬಂದಿದ್ದ ಅಡ್ವಾನ್ಸ್ ನಲ್ಲಿ ಅರ್ಧ ಅಮ್ಮನ ಕೈಗಿಟ್ಟು ಶೂಟಿಂಗ್ ಗೆ ಹೊರಟು ಹೋದ್ರು..! ಹೀಗೇ ಒಂದಷ್ಟು ದಿನ ಕಳೀತು.. ! ಒಂದು ದಿನ ಪೊಲೀಸ್ ಸ್ಟೇಶನ್ ನಿಂದ ಫೋನ್ ಬಂತು. `ಸರ್ ನಿಮ್ಮನೆ ದರೋಡೆ ಮಾಡಿದವ್ರು ಸಿಕ್ಕಿಬಿದ್ದಿದ್ದಾರೆ, ಬಂದು ನಿಮ್ಮ ವಸ್ತು, ಚಿನ್ನ ವಾಪಸ್ ತಗೊಂಡು ಹೋಗಿ’ ಅಂತ..! ಖುಷಿಗೆ ಪಾರವೇ ಇರಲಿಲ್ಲ..! ಕಮೀಶನರ್ ಆಫೀಸಿಗೆ ಅಮ್ಮ ಮಗ ಇಬ್ಬರೂ ಹೋಗಿ ಅವರ ವಸ್ತುಗಳನ್ನು ವಾಪಸ್ ಪಡೆದ್ರು.. ಆ ಫೋಟೋ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಯ್ತು..!
ಅವತ್ತು ಬೆಳಗ್ಗೆ ಎದ್ದು ಸಿನಿಮಾ ನಿರ್ದೇಶನದ ಯೋಚನೆಯಲ್ಲಿದ್ದ ನಿರ್ದೇಶಕರೊಬ್ಬರ ಕಣ್ಣಿಗೆ ಪತ್ರಿಕೆಯಲ್ಲಿದ್ದ ಆ ಫೋಟೋ ಕಾಣುತ್ತೆ..! ಅರೆರೆ ಈ ಹುಡುಗ ಸೂಪರ್ರಾಗಿದ್ದಾನಲ್ಲ, ಇವನೇ ಯಾಕೆ ನಮ್ಮ ಸಿನಿಮಾ ಹೀರೋ ಮಾಡ್ಕೋಬಾರ್ದು’ ಅಂತ ಅನ್ಕೋತಾರೆ..! ತಕ್ಷಣ ಅಲ್ಲಿ ಇಲ್ಲಿ ಹುಡುಕಿ ಅವರ ನಂಬರ್ ತಗೋತಾರೆ..! ಅವರಿಗೆ ಫೋನ್ ಮಾಡಿ ವಿಷಯ ಹೇಳ್ತಾರೆ.. ಅವರಿಬ್ಬರ ಭೇಟಿಯೂ ಆಗುತ್ತೆ. ಆಗ ಆ ನಿರ್ದೇಶಕ ಹೇಳ್ತಾರೆ, `ಫೋಟೋ ನೋಡಿ ಅರ್ಧ ಡಿಸೈಡ್ ಮಾಡಿದ್ದೆ, ಈಗ ಸಂಪೂರ್ಣ ಡಿಸೈಡ್ ಮಾಡಿದೀನಿ ಸಾರ್, ನೀವೇ ನಮ್ಮ ಸೀನಿಮಾ ಹೀರೋ..! ಕಥೆ ಕೇಳಿಸಿಕೊಂಡ ಆ ನಟನಿಗೂ ಇದೇನೋ ಹೊಸ ತರ ಇದೆ ಅನ್ನಿಸ್ತು..! ಶೂಟಿಂಗ್ ಶುರುವಾಯ್ತು, ಈಗ ರಿಲೀಸಿಗೂ ರೆಡಿ ಆಗಿದೆ..!
ಅಂದಹಾಗೆ ಆ ನಟ ಯಾರು ಗೊತ್ತಾ..? `ರಾಜಾಹುಲಿ’ ಸಿನಿಮಾದಲ್ಲಿದ್ದ `ಅಣ್ತಮ್ಮ ಹರ್ಷ’..! ಆ ನಿರ್ದೇಶಕ ಯಾರು ಗೊತ್ತಾ..? ಈಗ ಹರ್ಷನನ್ನು ಹೀರೋ ಮಾಡಿರೋ `ಗಜಪಡೆ’ ಸಿನಿಮಾದ ಸೀನು..!
ಹರ್ಷ ಮನೆಯಲ್ಲಿ ನಡೆದ ಒಂದು ದರೋಡೆ ಅವರನ್ನು `ಗಜಪಡೆ’ ಸಿನಿಮಾದ ಹೀರೋ ಮಾಡಿಬಿಡ್ತು ಅಂದ್ರೆ ನೀವು ನಂಬಲೇಬೇಕು..! ಯಾರ್ಯಾರ ಅದೃಷ್ಟ ಎಲ್ಲೆಲ್ಲಿರುತ್ತೋ ನೋಡಿ..! ಇದೇ ಫೆಬ್ರವರಿ 5ನೇ ತಾರೀಕು ಗಜಪಡೆ ರಿಲೀಸ್ ಆಗ್ತಿದೆ. ಅಣ್ತಮ್ಮ ಹರ್ಷನಿಗೂ, ಸೀನು ಅವರಿಗೂ ಶುಭವಾಗಲಿ..!

  • ಕೀರ್ತಿ ಶಂಕರಘಟ್ಟ

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

1 ಗಂಡು + 4 ಹೆಣ್ಣು = ಒಟ್ಟು ಐದು ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡಿದ ಮಹಾತಾಯಿ..!

ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಕಟ್ಟಿಗೆಯಾಗಿ ಪರಿವರ್ತನೆ ಹೊಂದುತ್ತಿದ್ದಾನೆ ಈ ಮಾನವ..! ವೈದ್ಯಕೀಯ ಲೋಕಕ್ಕೇ ಸವಾಲಾದ ಬಾಂಗ್ಲಾ ನಾಗರಿಕ..!

LEAVE A REPLY

Please enter your comment!
Please enter your name here