ಹೊಸದಿಲ್ಲಿ: 2020ರ ನವೆಂಬರ್ 9 ರಿಂದ 2021ರ ಜನವರಿ 31ರ ಅವಧಿಯಲ್ಲಿ 20,124 ಕೋಟಿ ರೂ. ಮೌಲ್ಯದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಂಚನೆಯನ್ನು ಸರಕಾರವು ಪತ್ತೆ ಹೆಚ್ಚಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಯಲ್ಲಿ ಹೇಳಿದರು.
ದೇಶದೆಲ್ಲೆಡೆ ತೆರಿಗೆ ಇಲಾಖೆಯು ತ್ವರಿತ ಕಾರ್ಯಾಚರಣೆ ನಡೆಸಿದ್ದು, ಜಿಎಸ್ಟಿ ವಂಚನೆಯನ್ನು ಪತ್ತೆ ಹೆಚ್ಚಿದೆ. ನಕಲಿ ಅಥವಾ ಬೋಗಸ್ ಇನ್ವಾಯ್ಸ್ಗಳನ್ನು ಬಳಸಿ ವಂಚನೆ ಮಾಡಲಾಗುತ್ತಿದೆ. ಈ ಬಗ್ಗೆ ತೆರಿಗೆ ಅಧಿಕಾರಿಗಳು ಗಮನ ಹರಿಸಿದ್ದಾರೆ ಎಂದು ಸಚಿವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ವಂಚನೆ ಪತ್ತೆ ಮತ್ತು ನಷ್ಟ ಪರಿಹಾರದ ವಿವರ ನೀಡಿದ ನಿರ್ಮಲಾ ಸೀತಾರಾಮನ್, “ವಿಶೇಷ ಕಾರ್ಯಾಚರಣೆ ಅವಧಿಯಲ್ಲಿ 2,692 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 20,000 ಕೋಟಿ ರೂ.ಗೂ ಅಧಿಕ ಮೌಲ್ಯದ ಜಿಎಸ್ಟಿ/ಐಟಿಸಿ ವಂಚನೆ ಪ್ರಕರಣಗಳು ನಡೆದಿವೆ. ಇದೇ ಅವಧಿಯಲ್ಲಿ 857 ಕೋಟಿ ರೂ. ಹಣವನ್ನು ಸರಕಾರವು ಸ್ವೀಕರಿಸಿದೆ. 282 ಮಂದಿಯನ್ನು ಬಂಧಿಸಲಾಗಿದೆ,” ಎಂದು ಮಾಹಿತಿ ನೀಡಿದರು.
buy atorvastatin 40mg online buy lipitor 40mg order lipitor 80mg