ರಾಜ್ಯ ರಾಜಕಾರಣದಲ್ಲಿ ಇಂದು ಬದಲಾವಣೆಯ ಗಾಳಿ ಬೀಸಿದೆ. ಕಾಂಗ್ರೆಸ್ಸಿನ ನಾಲ್ವರು ನಾಯಕರು ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಈ ಅದ್ದೂರಿ ಸಮಾರಂಭ ಬೆಂಗಳೂರಿನ ರಾಜಭವನದಲ್ಲಿ ನಡೆಯಿತು. ರಾಜ್ಯಪಾಲ ವಜುಭಾಯಿ ರುಢಾವಾಲಾರವರು ಡಾ. ಜಿ ಪರಮೇಶ್ವರ್, ಧಾರವಾಡ ಶಾಸಕ ವಿನಯ್ ಕುಲಕರ್ಣಿ, ಹಾನಗಲ್ ಶಾಸಕ ಮನೋಹರ ತಹಶೀಲ್ದಾರ್, ಅರಕಲಗೂಡು ಶಾಸಕ ಎ ಮಂಜುರವರಿಗೆ ಪ್ರಮಾಣವಚನ ಬೋಧಿಸಿದರು.
ಜಿ ಪರಮೇಶ್ವರ ಹಾಗೂ ಮನೋಹರ ತಹಶೀಲ್ದಾರರಿಗೆ ಸಂಪುಟದರ್ಜೆಯ ಸಚಿವ ಸ್ಥಾನ ನೀಡಲಾಗಿದ್ದು, ವಿನಯ್ ಕುಲಕರ್ಣಿ ಮತ್ತು ಎ ಮಂಜುರವರಿಗೆ ರಾಜ್ಯ ಖಾತೆ ನೀಡಲಾಗಿದೆ.
ಇನ್ನು ಜಿ ಪರಮೇಶ್ವರರವರು ಡಿಸಿಎಂ ಸ್ಥಾನವನ್ನು ಸೃಷ್ಠಿಸಿ ಅದನ್ನು ತಮಗೇ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಅವರನ್ನು ಮನವೊಲಿಸಲು ಸಫಲವಾಗಿರುವ ಕಾಂಗ್ರೆಸ್ ಹೈ ಕಮಾಂಡ್, ಗೃಹ ಖಾತೆಯನ್ನು ನೀಡಿದೆ. ಇದಕ್ಕಾಗಿ ಕೆ.ಜೆ ಜಾರ್ಜ್ ರವರಿಗೆ ನಗರಾಭಿವೃದ್ಧಿ ಸಚಿವ ಸ್ಥಾನ ಸ್ಥಾನವನ್ನು ನೀಡಲಾಗಿದೆ.
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : [email protected]
order lipitor online cheap lipitor 20mg sale order lipitor 40mg pill