ರವೀಂದ್ರನಾಥ ಠಾಗೂರ್ ಅವರಷ್ಟೇ ಶ್ರೇಷ್ಠವಾದ ಕವಿ ಕುವೆಂಪು

0
54

ಬೆಂಗಳೂರು : ಸಾಹಿತಿ ರವೀಂದ್ರನಾಥ ಠಾಗೂರ್ ಅವರಷ್ಟೇ ಶ್ರೇಷ್ಠವಾದ ಮತ್ತು ಸಮಾನವಾದ ಕವಿ ಕುವೆಂಪು ಎಂದು ಸಾಹಿತಿ ಡಾ.ಎಚ್.ಎಸ್.ಶಿವಪ್ರಕಾಶ್ ತಿಳಿಸಿದರು.

 

 

ಬೆಂಗಳೂರಿನ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ನಗರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕುವೆಂಪು ಅವರ ಮಲೆಗಳಲ್ಲಿ ಮಧುಮಗಳು ಕಾದಂಬರಿಯ ಇಂಗ್ಲೀಷ್ ಅನುವಾದಿತ ಕೃತಿ ದಿ ಬ್ರೈಡ್‍ನಿಂದ ರೈನಿ ಮೌಂಟೈನ್ಸ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,

 

ವಿಶ್ವ ಮಾನವ ಕುವೆಂಪು ಅವರ ಕಾದಂಬರಿಯನ್ನು ಲ್ಯಾಟಿನ್, ಸ್ಪ್ಯಾನಿಶ್ ಮೊದಲಾದ ಭಾಷೆಗಳಿಗೆ ಅನುವಾದ ಮಾಡಬೇಕಿದೆ ಎಂದರು.

 

ಕುವೆಂಪು ಕೃತಿಗಳ ಅನುವಾದದ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ. ಕೃತಿಗಳ ಅನುವಾದಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ, ಸಹಾಯ ನೀಡಬೇಕು ಎಂದು ಹೇಳಿದರು.

LEAVE A REPLY

Please enter your comment!
Please enter your name here