ಇದು ನಿಜಕ್ಕೂ ಅನ್ಯಾಯ ಅಲ್ವೇ..??
ಭಾರತದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಮೋಸ ಮಾಡಲಾಗುತ್ತದೆ. ಅದು ಉದ್ಯೋಗ ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ಆದ್ದರಿಂದ ಭಾರತದ ಶಾಸನವು ಸಾಮಾನ್ಯ ಜನರಿಗೆ ಮೋಸ ಮಾಡುತ್ತಿದೆಯೇ ಎನ್ನುವ ಅನುಮಾನ ಮೂಡುತ್ತದೆ. ಅದು ಹೇಗೆ ಅಂತೀರಾ ಕೆಳಗೆ ನೋಡಿ.
1. ಒಬ್ಬ ವ್ಯಕ್ತಿಯು ಒಂದು ಚುನಾವಣೆಗೆ ಎರಡು ಕ್ಷೇತ್ರದಲ್ಲಿ ನಿಲ್ಲಬಹುದು.
ಆದರೆ
ಒಬ್ಬ ಪ್ರಜೆ ಒಂದೇ ದಿನದಲ್ಲಿ ಎರಡು ಪಕ್ಷಕ್ಕೆ ಅಥವಾ, ಎರಡು ಕಡೆ ಮತದಾನ ಮಾಡುವಂತಿಲ್ಲ.
2. ಜೈಲಲ್ಲಿರುವ ವ್ಯಕ್ತಿ ಮತದಾನ ಮಾಡುವಂತಿಲ್ಲ.
ಆದರೆ
ಅಭ್ಯರ್ಥಿ ಜೈಲಲ್ಲಿದ್ದೂ ಚುನಾವಣೆಗೆ ಸ್ಪರ್ಧಿಸಬಹುದು.
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
3. ಸಾಮಾನ್ಯ ವ್ಯಕ್ತಿ ಒಂದು ಸಲ ಜೈಲಿಗೆ ಹೋದರೆ ಮತ್ತೇ ಜೀವನ ಪರ್ಯಂತ ಸರ್ಕಾರಿ ನೌಕರಿ ಸಿಗುವುದಿಲ್ಲ.
ಆದರೆ
ರಾಜಕಾರಣಿಗಳು ಎಷ್ಟೇ ದುಷ್ಕೃತ್ಯ ಎಸಗಿದರೂ ಸಹ ಅವರು ಬಯಸಿದ ಹಾಗೆ ಮಂತ್ರಿಯಾಗಬಹುದು. ಅದೃಷ್ಟವಿದ್ರೆ, ಸಿಎಂ, ಪಿಎಂ, ರಾಷ್ಟ್ರಪತಿಯೂ ಆಗಬಹುದು.
4. ಬ್ಯಾಂಕ್ ನೌಕರಿ ಬೇಕೆಂದರೆ ನಾವು ಡಿಗ್ರಿ ಪಡೆದಿರಲೇಬೇಕು.
ಆದರೆ
ರಾಜಕಾರಣಿಗಳಿಗೆ ಹಣಕಾಸಿನ ಸಚಿವರಾಗಲು ಯಾವುದೇ ಅರ್ಹತೆ ಬೇಕಿಲ್ಲ.
5. ಸೇನೆ ಅಥವಾ ಪೊಲೀಸ್ ಇಲಾಖೆಯಲ್ಲಿ ಕೆಲಸ ಬೇಕೆಂದರೆ ಡಿಗ್ರಿ ಜೊತೆ 10 ಕಿಮೀ ಓಡಬೇಕು.
ಆದರೆ
ರಾಜಕಾರಣಿಗಳು ಅವಿದ್ಯಾವಂತರಾದರೂ, ದಢೂತಿ ದೇಹ ಹೊಂದಿದ್ದರೂ ಸೇನಾ ಸಚಿವರಾಗಬಹುದು.
6. 10ನೇ ಕ್ಲಾಸ್ ಪಾಸಾಗದೇ, ಪಿಯುಸಿ ಮೆಟ್ಟಿಲು ಹತ್ತುವಂತಿಲ್ಲ
ಆದರೆ
ಯಾರ ಇಡೀ ವಂಶವು ಅನಕ್ಷರಸ್ಥರ ಕುಟುಂಬ ಆಗಿರುವುದೋ ಆ ವಂಶದ ವ್ಯಕ್ತಿಯು ಶಿಕ್ಷಣ ಸಚಿವ ಆಗಬಹುದು.
7.ಯಾರ ಮೇಲೆ ಹತ್ತಾರು ಕೇಸುಗಳಿವೆಯೋ ಆ ವ್ಯಕ್ತಿಯು ಪೊಲೀಸರಿಗೆ ಚೀಫ್ ಆಗಬಹುದು. ಅರ್ಥಾತ್ ಗೃಹ ಮಂತ್ರಿಯಾಗಬಹುದು.
ಇಷ್ಟಕ್ಕೂ ಇದನ್ನು ನಾವು ಹೇಳ್ತಿಲ್ಲ ಬದಲಿಗೆ ಮುಂಬೈನ ಉಚ್ಛ ನ್ಯಾಯಾಲಯದ ಸರ್ಕಾರಿ ವಕೀಲರಾದ ದೇಶಪಾಂಡೆ ಎನ್ನುವವರು ಹೇಳುತ್ತಿದ್ದಾರೆ. ಇಷ್ಟಕ್ಕೂ ಇವರ ಮಾತುಗಳನ್ನು ಕೇಳುತ್ತಿದ್ದರೆ ಸತ್ಯ ಎನಿಸುತ್ತದೆ ಅಲ್ಲವೇ..?
Story Courtesy : Whatsapp
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : [email protected]