ಈ “ಬಂಗಾರದ ಮನುಷ್ಯ”ನ ಬದುಕು ಈಗ `ಚಿಂದಿ’ ಚಿತ್ರಾನ್ನ! ಅಂದೆಂದೋ ಬಂದ ಆ ಗೋಲ್ಡ್ ಮೆಡಲ್ ಇಟ್ಕೊಂಡು ಸುತ್ ಬಂದ್ರೆ ಹೊಟ್ಟೆಗೆ ಹಿಟ್ಟು ಸಿಗುತ್ತಾ? ಆದ್ರೂ ಗೋಲ್ಡ್ ಮೆಡಲಿಸ್ಟ್ ಗೆ ಬೆಲೆ ಬೇಡ್ವೇಂಡ್ರೀ? ಆದ್ರೆ ನಮ್ ದೇಶದಲ್ಲಿ ಸಾಧನೆ ಗೆ ಬೆಲೆ ಸಿಗೋದು ತುಂಬಾನೇ ಕಡಿಮೆ! ಅದಿರಲಿ, ಅಂದಹಾಗೆ ನಾನ್ ಹೇಳೋಕೆ ಹೊರಟಿರೋದು ಯಾವ್ದೇ ಡಿಗ್ರಿಯಲ್ಲಿ ಗೋಲ್ಡ್ ಮೆಡಲ್ ಪಡೆದವರ ಕತೆ ಅಲ್ಲ! ಇದೊಬ್ಬ ಬಾಕ್ಸರ್ ನ ಲೈಫ್ ಸ್ಟೋರಿ!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಅವರು “ಕಮಲ ಕುಮಾರ್”. ಬಾಕ್ಸಿಂಗ್ ನಲ್ಲಿ ಕಮಾಲ್ ಮಾಡಿದಾತ! ಉತ್ತರ ಪ್ರದೇಶದ ಕಾನ್ಪುರದ ಬಾಕ್ಸರ್! ಬಡತನದಲ್ಲಿ ಬೆಳೆದ ಆತನಿಗೆ ಬಾಕ್ಸಿಂಗ್ ನಲ್ಲಿ ಸಾಧನೆ ಮಾಡ್ಬೇಕು ಅನ್ನೋ ಕನಸಿತ್ತು! ಕಷ್ಟ ಪಟ್ಟು ಬಾಕ್ಸಿಂಗ್ ಕಲಿತ! ರಾಷ್ಟ್ರೀಯ ಮಟ್ಟದಲ್ಲಿ ಆಡೋ ಚಾನ್ಸ್ ಕೂಡ ಸಿಗುತ್ತೆ! ಸಿಕ್ಕ ಅವಕಾಶವನ್ನು ಬಳಸಿಕೊಂಡ ಕುಮಾರ್ ಬಾಕ್ಸಿಂಗ್ ನಲ್ಲಿ ಸಾಧನೆಯ ತುತ್ತ ತುದಿಯನ್ನು ತಲುಪೇ ತಲುಪುತ್ತೇನೆಂದು ಕನಸು ಕಂಡ್ರು! ಅವರು ಕಂಡ ಕನಸೇ ತಪ್ಪಾಯ್ತೆನೋ! ಬಾಕ್ಸಿಂಗ್ ನಲ್ಲಿ ಮುಂದುವರೆಯಲು ದುಡ್ಡು ಕೈ ಕೊಡುತ್ತೆ! ಮನೆಯಲ್ಲಿ ತುಂಬಾ ಬಡತನ ಬೇರೆ! ಇಷ್ಟಾದ್ರೂ ರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ಚಿನ್ನದ ಪದಕವನ್ನೂ ಪಡೆದು ಸಾಧನೆ ಮಾಡಿದ್ರು! ರಾಜ್ಯ ಮಟ್ಟದಲ್ಲಿ ಎರಡು ಕಂಚಿನ ಪದಕವನ್ನು ತನ್ನ ಕೊರಳಿಗೆ ಹಾಕಿಸಿಕೊಂಡ್ರು! ಆದ್ರೆ ಈ ಗೋಲ್ಡ್ ಮೆಡಲ್ ಬದುಕಿಗೆ ಊರುಗೋಲು ಆಗ್ಲೇ ಇಲ್ಲ!
ನಮ್ ದೇಶದಲ್ಲಿ ಆದ್ರೆ ಕ್ರಿಕೆಟರ್ ಆಗ್ ಬೇಕು! ಆಡಲಿ ಆಡದೇ ಇರ್ಲಿ! ಬೆಂಚ್ ಬಿಸಿ ಮಾಡ್ತಾ ಕುಳಿತ್ರೂ ದುಡ್ಡೇ ದುಡ್ಡು! ಬೇರೆ ಕ್ರೀಡಾಪಟುಗಳು ಎಷ್ಟೇ ಕಷ್ಟಪಟ್ಟರೂ ಬೆಲೆ ಇಲ್ಲ! ಅದೇ ರೀತಿ ಈ ನ್ಯಾಷನಲ್ ಲೆವೆಲ್ ಬಾಕ್ಸರ್ ಕತೆಯೂ ಆಯ್ತು! ಸರ್ಕಾರ ಕೆಲಸವನ್ನಾದ್ರೂ ಕೊಡ್ತಾ? ಇಲ್ಲ! ಆದ್ರೆ ಕುಟುಂಬ ನಿರ್ವಹಣೆಗಾಗಿ ಬಾಕ್ಸರ್ ದುಡಿಯಲೇ ಬೇಕಾಯಿತು! ಯಾವ ಕೆಲಸವೂ ಸಿಗದೆ ಫೋರ್ತ್ ಕ್ಲಾಸ್, ಅಂದ್ರೆ ನಾಲ್ಕನೇ ದರ್ಜೆಯ ಕೆಲಸವನ್ನು ಆಯ್ಕೆ ಮಾಡ್ಕೊಂಡು “ಕಸ ಸಂಗ್ರಹ” ಮಾಡ್ತಾ ಇದ್ದಾರೆ!
ಹೌದು ಸಾರ್, ನಿತ್ಯ ಬೀದಿ ಬೀದಿಯಲ್ಲಿ ಚಿಂದಿ ಆಯ್ತಾ, ಮನೆ ಮನೆಗೆ ಬಾಗಿಲಿಗೆ ಹೋಗಿ ಕಸ ಸಂಗ್ರಹ ಮಾಡ್ತಾ, ಜೀವನ ತಳ್ತಾ ಇದ್ದಾರೆ! ಇವರ ಹಿರಿಯ ಮಗ ಕೂಡ ರಾಷ್ಟ್ರ ಮಟ್ಟದ ಬಾಕ್ಸರ್ ಆಗಿದ್ದಾನೆ! “ನಾ ಕಂಡ ಕನಸು ಮಗನ ರೂಪದಲ್ಲಾದರೂ ಈಡೇರಲಿ” ಅಂತ ಕಮಲ್ ಕುಮಾರ್ ಚಿಂದಿ ಆಯ್ದು ಕುಟುಂಬ ನಿರ್ವಹಿಸ್ತಾ ಇದ್ದಾರೆ!
ನೋಡಿ ಸಾರ್, ಇಂಥ ಒಬ್ಬ ಬಾಕ್ಸರ್ ಚಿಂದಿ ಆಯ್ತಾ ಇರೋದು ಅವರಿಗೆ ಅವಮಾನ ಅಲ್ಲ! ಅಂಥ ಸಾಧಕರನ್ನು ನಮ್ಮ ಸರ್ಕಾರ ನಡೆಸಿ ಕೊಳ್ತಾ ಇರೋ ಪರಿ ಇದೆಯಲ್ಲಾ ಅದು ನಮ್ಮೆಲ್ಲರಿಗೂ ಅವಮಾನ! ಇಡೀ ದೇಶವೇ ನಾಚಿಕೆ ಪಡೋ ಸಂಗತಿ!
ಆದ್ರೆ ಎಂಎ, ಎಂಕಾಂ, ಎಂಎಸ್ಸಿ, ಎಂಬಿಎ, ಎಂಟೆಕ್…,! ಹಿಂಗೆ ಏನೇನೋ ಸಿಕ್ಕಾಪಟ್ಟೆ ಕ್ವಾಲಿಫಿಕೇಶನ್ ಸರ್ಟಿಫಿಕೇಟ್ ನಮ್ ಕೈಯಲ್ಲಿ ಇರುತ್ತೆ! ಈ ಸರ್ಟಿಫಿಕೇಟ್ ಇಟ್ಕೊಂಡು ಕೆಲಸಕ್ಕಾಗಿ ಅಲ್ಲಿ ಇಲ್ಲಿ ಅಂತ ಸುತ್ತಾಡಿ ಹೈರಾಣ ಆಗ್ಬಿಡ್ತೀವಿ! ಇವತ್ತು ಯಾರನ್ನೇ ಕೇಳಿದ್ರು ಮಾಸ್ಟರ್ ಡಿಗ್ರಿ ಕಾಮನ್! ಎಲ್ಲರೂ ಮಾಸ್ಟರ್ಸ್ ಆಗಿರುವಾಗ ಯಾರಿಗೇ ಅಂತ ಕೆಲಸ ಕೊಡ್ತಾರೆ ಹೇಳಿ? ಮಾಸ್ಟರ್ ಡಿಗ್ರಿ ಅಂತಾನೇ ಅಲ್ಲ ಗುರು, ನಮ್ ಕ್ವಾಲಿಫಿಕೇಶನ್ ಗೆ ತಕ್ಕದಾದ ಜಾಬೇ ಬೇಕು! ಸಣ್ಣ ಪುಟ್ಟ ಜಾಬ್ ಮಾಡ್ತೀವಾ? ಊ್ಞಂ, ಊ್ಞಂ, ನೋ ವೇ..! ಚಾನ್ಸೇ ಇಲ್ಲ! ಆದ್ರೆ ಬದುಕಿನಲ್ಲಿ “ಅನಿವಾರ್ಯತೆ” ಅನ್ನೋದಿದೆಯಲ್ಲಾ ಎಂಥಾ ಕೆಲಸವನ್ನೂ ಮಾಡ್ಸುತ್ತೆ! ಇದಕ್ಕೆ ಗೋಲ್ಡ್ ಮೆಡಲಿಸ್ಟ್ ಬಾಕ್ಸರ್ ಕಮಲ್ ಕುಮಾರ್ ಒಂದು ಎಕ್ಸಾಂಪಲ್ ಮಾತ್ರ!
ಎನಿವೇ, ಇನ್ನಾದರೂ ಕಮಲ್ ಕುಮಾರ್ ಮತ್ತು ಅವರಂಥಹ ಸಾಧಕರಿಗೆ ಸರಿಯಾದ ಪ್ರೋತ್ಸಾಹ ಸಿಗಲಿ ಅಂತ ಹರಸೋಣ!
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : [email protected]