ಮಹದಾಯಿಗಾಗಿ ಕನ್ನಡ ಪರ ಸಂಘಟನೆಗಳು ನಾಳೆ ಬಂದ್ ಕರೆದಿರೋದು ನಿಮಗೆಲ್ಲಾ ಗೊತ್ತೇ ಇದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆ ಬಂದ್ ನಡೆಯುತ್ತದೆ.
ಕೆಎಸ್ಆರ್ಟಿಸಿ, ಬಿಎಂಟಿಸಿ, ಮೆಟ್ರೋ ರೈಲುಗಳು ಸಂಚರಿಸದಂತೆ ಮನವಿ ಮಾಡಲಾಗಿದೆ. ಇವುಗಳ ಸೇವೆ ಸಿಗುವುದು ಅನುಮಾನ. ಐಟಿ ಕಂಪನಿಗಳು ಸಹ ಕೆಲಸ ನಿರ್ವಹಿಸದೆ ಬಂದ್ ಗೆ ಬೆಂಬಲ ಸೂಚಿಸಲಿವೆ. ಕನ್ನಡ ಚಿತ್ರೋದ್ಯಮ ಸಹ ಬೆಂಬಲ ನೀಡಿದ್ದು ಚಿತ್ರ ಪ್ರದರ್ಶನ ಇರುವುದಿಲ್ಲ. ವೈದ್ಯಕೀಯ, ಅಂಬುಲೆನ್ಸ್ ಮತ್ತು ಹಾಲು ಸಾಗಣೆ ವಾಹನಗಳಿಗೆ ನಿರ್ಬಂಧ ಹೇರಿಲ್ಲ.