ಸುಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಿವಾದವೊಂದು ತಲೆ ಎತ್ತಿದೆ.
ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಈ ವಿವಾದ ಎದ್ದಿರುವುದು. ಧಾರ್ಮಿಕ ದತ್ತಿ ಇಲಾಖೆಯಡಿ ಸರ್ಪಸಂಸ್ಕಾರ ಮತ್ತು ಇನ್ನಿತರ ಸೇವೆಗಳನ್ನು ನಡೆಸುವುದಕ್ಕೆ ನೋಟಿಸ್ ಹೊರಡಿಸಿದ್ದು, ಇಲಾಖೆ ಮತ್ತು ದೇವಸ್ಥಾನದ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ.
ಕ್ಷೇತ್ರದಲ್ಲಿನ ಪುರೋಹಿತ ವರ್ಗ ಅನಧಿಕೃತವಾಗಿ ಸೇವಾಪೂಜೆ ಮಾಡಿ ಭಕ್ತರಿಂದ ಹೆಚ್ಚಿನ ಹಣ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ,ಜಾರಿಯಾದ ನೋಟಿಸ್ ಇದೀಗ ವಿವಾದ ಕ್ಕೆ ಎಡಮಾಡಿಕೊಟ್ಟಿದೆ.