ಸರ್ಕಾರಿ ನೌಕರರು ಎಂದ ಕೂಡಲೇ ತಾವೇನೇ ಮಾಡುದ್ರು ನಡೆಯುತ್ತೆ ಅನ್ನೋ ಭರವಸೆಯಲ್ಲಿ ಏನೆಲ್ಲಾ ಮಾಡ್ತಾರೆ ಅನ್ನೋದಕ್ಕೆ ಈ ಲೇಡಿ ಕಂಡಕ್ಟರ್ ಸೂಕ್ತ ನಿದರ್ಶನ ನೋಡಿ.. ಬಿಎಂಟಿಸಿ ನಿರ್ವಾಹಕಿಯೋರ್ವಳು ಕಾಲೇಜು ವಿದ್ಯಾರ್ಥೀಯೊಂದಿಗೆ ಕಾದಾಟಕ್ಕಿಳಿದು ಹಲ್ಲೆ ನಡೆಸಿದ ಘಟನೆ ಇಂದು ಬೆಂಗಳೂರು ನಗರದ ಗಂಗಮ್ಮನ ಬಸ್ ನಿಲ್ದಾಣದ ಬಳಿ ನಡೆದಿದೆ.
ಕಮ್ಮನಗೊಂಡನಹಳ್ಳಿ ಬಳಿಯಿರುವ ಗಂಗಮ್ಮನಗುಡಿ ಬಸ್ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದ್ದು ಕ್ಷಲ್ಲುಕ ಬಸ್ ಪಾಸ್ ಕಾರಣಕ್ಕಾಗಿ ಲೇಡಿ ಕಂಡಕ್ಟರ್ ಅರುಣಾ ಹಾಗೂ ಕಾಲೇಜು ವಿದ್ಯಾರ್ಥಿ ಪುನೀತ್ ಗೌಡ ನಡುವೆ ಮಾತಿನ ಚಕಮಕಿಯಾಗಿದೆ. ಇಬ್ಬರ ವಾದ ಪ್ರತಿವಾದ ತಾರಕಕ್ಕೆ ಹೋಗುತ್ತಿದ್ದಂತೆ ಇಬ್ಬರೂ ನಡು ರಸ್ತೆಯಲ್ಲೇ ಕಾದಾಟಕ್ಕಿಳಿದಿದ್ದಾರೆ. ಇದೇ ವೇಳೆ ಬಸ್ ನಿರ್ವಾಹಕಿ ವಿದ್ಯಾರ್ಥಿಯ ಮೇಲೆ ಅನುಚಿತ ವರ್ತನೆ ತೋರಿದ್ದಲ್ಲದೇ ಎಲ್ಲರೆದುರೆ ವಿದ್ಯಾರ್ಥಿಯನ್ನು ತಳ್ಳಾಡಿದ್ದಾಳೆ ಹಾಗೂ ಹಲ್ಲಿನಿಂದ ಕಚ್ಚಿ ಗಾಯಗೊಳಿಸಿದ್ದು, ಇದರ ಸಂಪೂರ್ಣ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಇನ್ನು ಗಲಾಟೆ ನಡೆಯುತ್ತಿದ್ದ್ದ ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು ಈ ಇಬ್ಬರ ನಡುವಿನ ಕಾದಾಟವನ್ನು ನಿಯಂತ್ರಿಸದರೂ ಸಹ ಆ ನಿರ್ವಾಹಕಿ ಪೊಲೀಸರ ನಡುವೆಯೇ ವಿದ್ಯಾರ್ಥಿಯ ಮೇಲೆ ತನ್ನ ಗೂಂಡಾಗಿರಿ ತೋರಿಸಿದ್ದಾಳೆ. ಈ ಸಂಬಂಧ ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರ್ವಾಹಕಿ ಅರುಣಾ ವಿರುದ್ದ ಪ್ರಕರಣ ದಾಖಲಾಗಿದೆ.
https://youtu.be/dzINuQX7c1U
Like us on Facebook The New India Times
POPULAR STORIES :
ಕೇಳ್ಬೇಡ ಕಣೇ ಸುಮ್ಕಿರೆ…! Cauvery Issue Comedy Song
ಎಚ್ಚರಿಕೆ.. ದೇಶದ ಪ್ರಮುಖ ನಗರಗಳಲ್ಲಿ ಪಾಕ್ ಉಗ್ರರು ದಾಳಿ ನಡೆಸುವ ಸಾಧ್ಯತೆ..!
ಅರ್ಜುನ್ ತೆಂಡೂಲ್ಕರ್ ರಮೇಶನಾದ್ರೆ..!! ಸುರೇಶ್ ಯಾರು ಗೊತ್ತಾ..?
ಜಿಯೋ ಕಾಲ್ಡ್ರಾಪ್ ಸಮಸ್ಯೆ: ಏರ್ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್ನಲ್ಲಿ ವಿರಾಟ್ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್ಎನ್ಎಲ್ ಗ್ರಾಹಕರಿಗೆ ಉಚಿತ ಅನ್ಲಿಮಿಟೆಡ್ ವಾಯ್ಸ್ ಕಾಲ್..!