ಸ್ವಾಮಿ…ಕರೆಂಟ್ ಇಲ್ಲದೇ ಏನೇನಾಗ್ತಿದೆ ಗೊತ್ತಾ…?

1
125

3 ಗಂಟೆ ಆಗ್ತಿದ್ದ ಲೋಡ್ ಶೆಡ್ಡಿಂಗ್ ನಾಲ್ಕು ಗಂಟೆ ಆಗಿದೆ..! ಹೀಗೇ ಮುಂದುವರೆದ್ರೆ ಇದು ಇನ್ನೂ 3-4 ಗಂಟೆ ಜಾಸ್ತಿ ಆದ್ರೂ ಆಶ್ಚರ್ಯ ಇಲ್ಲ..! ಹೆಸರಿಗೆ 4 ಗಂಟೆ ಲೋಡ್ ಶೆಡ್ಡಿಂಗ್ ಇದ್ರೂ ಸಹ, ಕೆಲವು ಏರಿಯಾಗಳಲ್ಲಿ ಅಧಿಕೃತ ಲೋಡ್ ಶೆಡ್ಡಿಂಗ್ ಗಿಂತ ಜಾಸ್ತಿ ಕರೆಂಟ್ ಹೋಗ್ತಿದೆ..! ಆದ್ರೆ ಯಾರೂ ಏನೂ ಮಾಡಕ್ಕಾಗಲ್ಲ..! ಅರೆ, ಕರೆಂಟೇ ಇಲ್ಲ ಅಂದ್ರೆ ಏನೂ ಮಾಡಕ್ಕಾಗಲ್ಲ ಅನ್ನೋದು ಸರ್ಕಾರದ ಅಧಿಕೃತ ಉತ್ತರ..! ಆದ್ರೆ ಈ ಲೋಡ್ ಶೆಡ್ಡಿಂಗ್ ಜನ ಸಾಮಾನ್ಯರಿಗೆ ಅದೆಷ್ಟು ತೊಂದರೆ ಕೊಡ್ತಿದೆ ಗೊತ್ತಾ..? ಕೆಲವು ಉದಾಹರಣೆಗನ್ನು ಕೊಡ್ತೀನಿ ಕೇಳಿ..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ನನ್ನ ಫ್ರೆಂಡ್ ಮಂಜು ನಿನ್ನೆ ತನ್ನ ಬೈಕ್ ವಾಟರ್ ವಾಶ್ ಮಾಡಿಸೋಕೆ ಅಂತ ವಾಶಿಂಗ್ ಸ್ಟೇಶನ್ ಗೆ ಹೋಗಿದ್ದ. ಅವನು ಪ್ರತಿದಿನ ಏನಿಲ್ಲಾ ಅಂದ್ರೂ 25-30 ಬೈಕ್-ಕಾರ್ ವಾಶ್ ಮಾಡ್ತಿದ್ನಂತೆ. ಆದ್ರೆ ಈಗ ಆ ನಂಬರ್ 12-15ಕ್ಕೆ ಇಳಿದಿದೆ. ದಿನದ ಬಹುತೇಕ ಟೈಂ ಕರೆಂಟ್ ಇರಲ್ಲ. ಕೆಲಸದವರೆಲ್ಲಾ ಹೋದಮೇಲೆ ಕರೆಂಟ್ ಬಂದ್ರೆ ನಂಗೇನು ಲಾಭ ಸಾರ್..! ಅಂಗಡಿ ಇಟ್ಟು ಇಷ್ಟು ದಿನಕ್ಕೆ ಯಾವತ್ತೂ ಹಿಂಗಾಗಿಲ್ಲ. ನಮ್ಮಂತವರು ಜನರೇಟರ್ ಎಲ್ಲಾ ಇಟ್ಕೊಂಡು ವಾಟರ್ ವಾಶ್ ಮಾಡಕ್ಕಾಗುತ್ತಾ ಸಾರ್..? ಅಂತ ಪ್ರಶ್ನೆ ಮಾಡ್ತಾನೆ..! ಬಂದ ಕಸ್ಟಮರ್ ಗಳೆಲ್ಲಾ ನಮ್ಮನ್ನು ಬೈಕೊಂಡು ಹೋಗ್ತಾರೆ ಸಾರ್, ಅವರು ನೆಕ್ಸ್ಟ್ ಟೈಂ ನಮ್ಮ ಶಾಪ್ ಗೆ ಬರಲ್ಲ..! ನಾವು ಹೆಂಗ್ ಸಾರ್ ಬದುಕಬೇಕು..? ಸರ್ಕಾರಕ್ಕೆ ಇದು ಬರೀ ಲೋಡ್ ಶೆಡ್ಡಿಂಗ್, ಅವನಿಗೆ ಜೀವನದ ಕತ್ತಲೆ..!
ನ್ಯಾಶನಲ್ ಮಾರ್ಕೆಟ್ಟಲ್ಲಿ ಒಂದು ಮೊಬೈಲ್ ಸರ್ವೀಸ್ ಸೆಂಟರ್ ಇದೆ. ಅಲ್ಲಿರೋ ವಿಜಯ್ ಪುಟ್ಟ ಶಾಪ್ ಒಳಗೆ ಮೊಬೈಲ್ ರಿಪೇರಿಗೆ ಸಂಬಂಧಪಟ್ಟ ಅದು ಇದು ಮಾಡ್ತಾರೆ. ನಿನ್ನೆ ಸಂಜೆ ಒಬ್ಬ ವ್ಯಕ್ತಿ ಆ ಶಾಪ್ ಗೆ ಹೋಗಿ ತನ್ನ ಮೊಬೈಲ್ ಸಿಸ್ಟಂ ಫಾರ್ಮ್ಯಾಟ್ ಮಾಡಬೇಕು ಅಂತ ಕೊಟ್ಟಿದ್ದಾನೆ. ವಿಜಯ್, ಕಂಪ್ಯೂಟರ್ ಮೂಲಕ ಅದನ್ನು ಫಾರ್ಮ್ಯಾಟ್ ಮಾಡಲು ಹಾಕಿದ್ರು. ಅದು ಕನಿಷ್ಟ 30 ನಿಮಿಷ ಟೈಂ ತಗೊಳುತ್ತೆ, ನೀವು ಒಂದು ರೌಂಡ್ ಹಾಕ್ಕೋಂಡ್ ಬನ್ನಿ ಅಂತ ಕಸ್ಟಮರ್ ಗೆ ಹೇಳಿದ್ದಾರೆ. ಆದ್ರೆ ಫೋನ್ ಅಪಡೇಟ್ ಟೈಮಲ್ಲಿ ಕರೆಂಟ್ ಹೋಗಿ, ಮೊಬೈಲ್ ಸಾಫ್ಟ್ ವೇರ್ ಎರರ್ ಆಗಿ ಫೋನ್ ಆನ್ ಆಗಲೇ ಇಲ್ಲ..! ವಿಜಯ್ ಗೆ ಕಸ್ಟಮರ್ ಕಡೆಯಿಂದ ಸಖತ್ ಬೈಗುಳ. ವಿಜಯ್ ಹೇಳೋದೂ ಅದೇ, ಸಾರ್ ಪಟ್ ಅಂತ ಕರೆಂಟ್ ಹೋಯ್ತು. ಯೂಪಿಎಸ್ ಬೇರೆ ಇಲ್ಲ. ನಾನಾದ್ರೂ ಏನ್ ಮಾಡ್ಲಿ..? ಈಗ ಸಿಸ್ಟಂ ಆನ್ ಮಾಡೋಕೇ ಭಯ ಆಗುತ್ತೆ. ಹೀಗೆ ದಿನಕ್ಕೆ 5-6 ಸಲ ಕರೆಂಟ್ ಹೋಗೋದು ಬರೋದು ಮಾಡಿದ್ರೆ, ನನ್ನ ಕಂಪ್ಯೂಟರ್ರೂ ಹಾಳಾಗೋಗುತ್ತೆ. ಯೂಪಿಎಸ್ ಇಟ್ಕೊಂಡು ಎಷ್ಟ್ ಹೊತ್ತು ಅಂತ ಕೆಲಸ ಮಾಡ್ಲಿ..? ಹಿಂಗೇ ಆದ್ರೆ ಒಂದು ತಿಂಗಳಲ್ಲಿ ಅಂಗಡಿ ಮುಚ್ಚಬಿಡ್ತೀನಿ ಸಾರ್ ಅಂದ್ರು..! ಸರ್ಕಾರಕ್ಕೆ ಇದು ಬರೀ ಲೋಡ್ ಶೆಡ್ಡಿಂಗ್, ವಿಜಯ್ ಗೆ ದುಡಿಮೆಗಾದ ಕತ್ತಲು..!
ಬೆಂಗಳೂರಿನ ಏರಿಯಾವೊಂದರಲ್ಲಿ ಒಂದು ಬಡಕುಟುಂಬದ ಹುಡುಗಿ ಪ್ರತಿದಿನ ಕಾಲೇಜಿಗೆ ಹೋಗಿಬಂದು, ಸಂಜೆ ಹತ್ತಾರು ಮಕ್ಕಳಿಗೆ ಕಮ್ಮಿ ಫೀಸ್ ಪಡೆದು ಟ್ಯೂಶನ್ ಹೇಳಿಕೊಡ್ತಿದ್ಲು. ಅವಳು ಅಂದ್ರೆ ಮಕ್ಕಳಿಗೂ ತುಂಬಾ ಇಷ್ಟ. ಅಕ್ಕ ಈಸಿಯಾಗಿ ಅರ್ಥ ಆಗೋ ಹಾಗೆ ಹೇಳಿಕೊಡ್ತಾಳೆ ಅಂತ..! ಪ್ರತಿದಿನ 7 ಗಂಟೆಯಿಂದ 9 ಗಂಟೆ ತನಕ ಅವಳ ಮನೆಯ ಹಾಲ್ ನಲ್ಲಿ ಟ್ಯೂಶನ್ ನಡೀತಿತ್ತು. ಇದರಿಂದ ಅವಳ ಕುಟುಂಬದ ಖರ್ಚಿಗೂ ಒಂದಷ್ಟು ಹಣ ಸಿಗ್ತಿತ್ತು..! ಈಗ ಆ ಟ್ಯೂಶನ್ ನಡೀತಿಲ್ಲ. ..! ಸರಿಯಾಗಿ ಅದೇ ಟೈಮಿಗೆ ಸರ್ಕಾರದ ಕತ್ತಲೆ ಭಾಗ್ಯ ಯೋಜನೆ ಜಾರಿಗೆ ಬರುತ್ತೆ..! ಬೇರೆ ಟೈಮಲ್ಲಿ ಟ್ಯೂಶನ್ ಮಾಡೋದು ಪ್ರಾಕ್ಟಿಕಲಿ ಸಾಧ್ಯವಿಲ್ಲ.! ಮಕ್ಕಳಿಗೆ ಪಾಠವಿಲ್ಲ, ಆ ಹುಡುಗಿಗೆ ಬರ್ತಿದ್ದ ಅಲ್ಪ ದುಡಿಮೆಯೂ ಇಲ್ಲ..! ವಾರೆವಾ, ಸರ್ಕಾರಕ್ಕೆ ಇದು ಬರಿಯ ಲೋಡ್ ಶೆಡ್ಡಿಂಗ್, ಅವಳ ಪಾಲಿಗೆ ಶಿಕ್ಷಣಕ್ಕಾದ ಕತ್ತಲು..!
ನಮ್ಮ ಮನೆಯ ಹತ್ತಿರದ ಒಂದಷ್ಟು ಹುಡುಗರು ಮೊನ್ನೆ ತಾನೇ ಗಣಪತಿ ಕಲೆಕ್ಷನ್ನಿಗೆ ಬಂದಿದ್ರು. ಕೊಟ್ಟ ದುಡ್ಡು ಇಸ್ಕೊಂಡು ಖುಷಿಯಗಿ ಹೋಗಿದ್ರು. ಈ ಸಲ 5 ದಿನ ಇಡ್ತಿದೀವಿ ಸಾರ್, ನೀವೂ ಒಂದಿನ ಪೂಜೆ ಕೊಡಿ. ಆ ಪ್ರೋಗ್ರಾಂ ಮಾಡ್ತೀವಿ, ಈ ಪ್ರೋಗ್ರಾಂ ಮಾಡ್ತೀವಿ ಅಂತ ಫುಲ್ ಜೋಶಲ್ಲಿದ್ದ ಹುಡುಗರು ಇವತ್ತು ಬೆಳಗ್ಗೆ ಸಖತ್ ಬೇಜಾರಲ್ಲಿದ್ರು..! ನಮ್ ಗಣಪತಿ ಪೆಂಡಾಲಿಗೆ ಕರೆಂಟ್ ಕೊಡಲ್ವಂತೆ ಸಾರ್..! ಆಗಿರೋ ಕಲೆಕ್ಷನ್ನಲ್ಲಿ ಜನರೇಟರ್ ತಂದು 5 ದಿನ ಗಣಪತಿ ಇಡೋಕಾಗಲ್ಲ ಸಾರ್..! ಅದುಕ್ಕೆ ಬೆಳಗ್ಗೆ ಕೂರ್ಸಿ ಸಂಜೆ ಎತ್ತಿಬಿಡ್ತೀವಿ ಸಾರ್. ಈ ಸಲ ಗ್ರ್ಯಾಂಡಾಗಿ ಮಾಡ್ಬೇಕು ಅಂತಿದ್ವಿ. ಈ ಗೌರ್ಮೆಂಟೋರಿಂದ ಎಲ್ಲಾ ಹಾಳಾಗೋಯ್ತು ಸಾರ್ ಅಂತ ಬೈದ..! ದೇವ್ರನ್ನೇ ಕತ್ತಲೇಲಿ ಕೂರ್ಸೋರಿಗೆ ಒಳ್ಳೇದಾಗಲ್ಲ ಬಿಡಿ ಸಾರ್ ಅಂತ ಶಾಪಾನೂ ಹಾಕ್ದ..! ಏನ್ ಹೇಳಬೇಕೋ ಗೊತ್ತಾಗಲಿಲ್ಲ. ಆದ್ರೆ ಅನ್ನಿಸ್ತು, ಸರ್ಕಾರಕ್ಕೆ ಇದು ಬರಿಯ ಲೋಡ್ ಶೆಡ್ಡಿಂಗ್, ಆದ್ರೆ ಆ ಹುಡುಗರ ಪಾಲಿಗೆ ದೇವರಿಗಾದ ಕತ್ತಲು..!
ನಮ್ಮ ಅಪಾರ್ಟ್ ಮೆಂಟಲ್ಲಿ ಜನರೇಟರ್ ಬ್ಯಾಕಪ್ ಇದೆ. ಕರೆಂಟ್ ಹೋದ್ರೆ ಪಟ್ ಅಂತ ಜನರೇಟರ್ ಆನ್ ಆಗೋದು..! ಆದ್ರೆ ಈಗ ಅದೂ ಇಲ್ಲ. ದಿನಕ್ಕೆ 4-5 ಗಂಟೆ ಕರೆಂಟ್ ಹೋದ್ರೆ ನಾವೇನು ಮಾಡೋಕಾಗುತ್ತೆ ಅಂತ ಓನರ್ ಕೇಳ್ತಾರೆ..! ಕರೆಂಟ್ ಇಲ್ಲದೇ ಲಿಫ್ಟ್ ಆಫ್ ಆಗಿದ್ರೆ, ಮೂರನೇ ಫ್ಲೋರ್ ನಲ್ಲಿರೋ ತುಂಬುಗರ್ಭಿಣಿ ಬೆಳಗ್ಗೆ ಪಾಪ ಕಷ್ಟಪಟ್ಟು ಮೆಟ್ಟಿಲು ಇಳಿಯುವಾಗ ಬೈಕೊಂಡೇ ಇಳೀತಾರೆ.! ಬೆಳಗ್ಗೇನೇ ಕರೆಂಟ್ ಹೋಗೋದ್ರಿಂದ ಹಿಂದಿನ ರಾತ್ರಿಯ ಅನ್ನ ಚಿತ್ರಾನ್ನ ಆಗ್ತಿದೆ. ದೋಸೆ ಇಡ್ಲಿ ಮಾತು ದೂರ ಆಗಿದೆ. ಚಟ್ನಿ ಸ್ವಲ್ಪ ದಿನಕ್ಕೆ ಮರೆತೇ ಹೋಗುತ್ತೆ..!ಸರ್ಕಾರದ ಪಾಲಿಗೆ ಲೋಡ್ ಶೆಡ್ಡಿಂಗ್ ಅಷ್ಟೆ, ಜನಸಾಮಾನ್ಯರ ಪಾಲಿಗೆ ದಿನನಿತ್ಯದ ಬದುಕಿಗಾದ ಕತ್ತಲೆ..!
ಇದು ನನ್ನ ಸುತ್ತಮುತ್ತಲ ಸ್ಟೋರಿ. ಹೀಗೆ ಅದೆಷ್ಟೋ ಸ್ಟೋರಿಗಳಿವೆ..! ಎಷ್ಟೋ ಜನ ಆಫೀಸಿಗೆ ಹೊರಡುವಾಗ ಕರೆಂಟ್ ಇಲ್ಲದ ಕಾರಣಕ್ಕೆ, ತಣ್ಣೀರಲ್ಲಿ ಸ್ನಾನ ಮಾಡೋಕಾಗದೇ ಸ್ನಾನ ಮಾಡದೇ ಹೋಗಿರ್ತಾರೆ..! ಯಾರದೇ ಬಟ್ಟೆ ಐರನ್ ಆಗಿಲ್ಲ ಅಂದ್ರೆ, ಅವರನ್ನು ನೋಡಿ `ಆಫೀಸಿಗೆ ಹೆಂಗೆ ಬರಬೇಕು ಅಂತ ಗೊತ್ತಾಗಲ್ವಾ..?’ ಅಂತ ಕೇಳಬೇಡಿ. ಅವರ ಮನೇಲೂ ಬೆಳಗ್ಗೆ ಕರೆಂಟ್ ಇರಲಿಲ್ಲ ಅಂತ ಅರ್ಥ ಮಾಡ್ಕೊಳಿ..! ಐಸ್ ಕ್ರೀಮ್ ಅಂಗಡಿಗೆ ಹೋಗಿ ಐಸ್ ಕ್ರೀಮ್ ತಿನ್ನುವಾಗ` ಯಾಕಪ್ಪಾ, ಐಸ್ ಕ್ರೀಮ್ ನೀರಾಗಿದೆ’ ಅಂತ ಕೇಳಬೇಡಿ. ಅವರ ಅಂಗಡಿ ಕರ್ನಾಟಕದಲ್ಲಿದೆ ಅಂತ ಅರ್ಥ ಮಾಡ್ಕೊಳಿ..! ಯಾರಿಗೋ ಫೋನ್ ಮಾಡಿ ಸ್ವಿಚ್ ಆಫ್ ಅಂತ ಬಂದ್ರೆ, `ಕಿತ್ತೋದ್ ನನ್ ಮಗ ಸ್ವಿಚ್ ಆಫ್ ಮಾಡಿದ್ದಾನೆ’ ಅಂತ ಬೈಕೋಬೇಡಿ..! ಕರೆಂಟ್ ಇಲ್ಲದಿದ್ರೆ ಹೆಂಗೆ ಚಾರ್ಜ್ ಮಾಡ್ಕೊಳೋಕೆ ಸಾಧ್ಯ ಅಂತ ಅರ್ಥ ಮಾಡ್ಕೊಳಿ..! ಕಟಿಂಗ್ ಶಾಪಿಗೆ ಹೋದ್ರೆ ಟ್ರಿಮ್ ಮಾಡಪ್ಪ ಅಂತ ಹೇಳೋಕೆ ಮುಂಚೆ ಸಾವಿರ ಸಲ ಯೋಚಿಸಿ. ಟ್ರಿಮ್ ಮಾಡುವಾಗ ಕರೆಂಟ್ ಹೋದ್ರೆ ಮುಂದಿನ ಒಂದೆರೆಡು ಗಂಟೆ ಅಲ್ಲೇ ಕೂತಿರಬೇಕು. ಅಥವಾ ಕ್ಲೀನ್ ಶೇವ್ ಮಾಡಿಸಬೇಕು..! ಹೀಗೇ ಏನೇನೋ ಇದೆ. ಸದ್ಯಕ್ಕಿಷ್ಟು ಸಾಕು..! ಅಷ್ಟಕ್ಕೂ ಸರ್ಕಾರಕ್ಕಿದು ಬರಿಯ ಲೋಡ್ ಶೆಡ್ಡಿಂಗ್, ನಮಗೆ ನಿಮಗೆ ಡೈಲಿ ಲೈಫ್ ಶೆಡ್ಡಿಂಗ್ ಎಂಬ ಕತ್ತಲೆ..!
ಕರ್ನಾಟಕದ ಹೊಸ ನಾಡಗೀತೆ ಹೀಗೆ ಬರೆಯಬಹುದು…! `ಬರುವಾಗ ಕತ್ತಲೆ, ಹೋಗುವಾಗ ಕತ್ತಲೆ, ಬಂದು ಹೋಗುವ ನಡುವೆಯೂ ಬರೀ ಕತ್ತಲೆ..!’

—————

POPULAR  STORIES :

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

1 COMMENT

LEAVE A REPLY

Please enter your comment!
Please enter your name here