No menu items!
17.6 C
Munich
Friday, April 24, 2026

ಬಡಪಾಯಿಗೆ ಬಂತು ಕೋಟಿ ಕೋಟಿ ಕರೆಂಟ್ ಬಿಲ್..! ಜಮ್ಮು-ಕಾಶ್ಮೀರದಲ್ಲೊಂದು ವಿಚಿತ್ರ ಘಟನೆ

Must read

ಒಂದು ಮನೆಯ ಎಲೆಕ್ಟ್ರಿಸಿಟಿ ಬಿಲ್ ಎಷ್ಟು ಬರಬಹುದು ಹೇಳಿ..? ಸಾವಿರ, ಎರಡು ಸಾವಿರ, ಮೂರು ಸಾವಿರ ಕೊನೆಗೆ 10 ಸಾವಿರ ಇರಬಹುದು. ಆದರೆ ಇಲ್ಲೊಬ್ಬ ಬಡಪಾಯಿಗೆ ಕೋಟಿಗಟ್ಟಲೇ ಕರೆಂಟ್ ಬಿಲ್ ಬಂದಿದ್ದು, ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ. ಇಂಥದ್ದೊಂದು ಅಚ್ಚರಿಯ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ.
ಯೆಸ್.. ಜಮ್ಮು ಕಾಶ್ಮೀರದ ಪುರಾಣ್ ನಗರ್ ಎಂಬ ಗ್ರಾಮದ ರಾಮ್ ಕ್ರಿಷನ್ ಎಂಬಾತನಿಗೆ ಬೃಹತ್ ಮೊತ್ತದ ವಿದ್ಯುತ್ ಬಿಲ್ ಬಂದಿದೆ. ಇದರಿಂದ ಕ್ರಿಷನ್ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಷ್ಟಕ್ಕೂ ಜಮ್ಮು ಕಾಶ್ಮೀರದ ವಿದ್ಯುತ್ ಇಲಾಖೆಯವರು ಕಳೆದ ಸೆಪ್ಟೆಂಬರ್ ನಲ್ಲಿ ಕ್ರಿಷನ್ ನ ಕುಟುಂಬ ಬರೋಬ್ಬರಿ 39 ಕೋಟಿ ರೂಪಾಯಿ ಮೊತ್ತದ ವಿದ್ಯುತ್ ಬಳಕೆ ಮಾಡಿದೆ ಎಂದು ಬೃಹತ್ ಬಿಲ್ ಕಳುಹಿಸಿದೆ..!
ಕರೆಂಟ್ ಬಿಲ್ ಕಂಡು ಹೌಹಾರಿದ ಕ್ರಿಷನ್ `ನಮ್ಮದು ತೀರಾ ಬಡ ಕುಟುಂಬ. ನಾವು ಬಳಸುವುದೇ ತೀರಾ ಕಡಿಮೆ ವಿದ್ಯುತ್. ಆದರೆ ನಮಗೆ ಸುಮಾರು 39 ಕೋಟಿ ಮೊತ್ತದ ವಿದ್ಯುತ್ ಬಿಲ್ ಬಂದಿದೆ. ಇಷ್ಟು ದೊಡ್ಡ ಬಿಲ್ ದೇಶದ ಯಾವುದೇ ಕುಟುಂಬ ಕೇವಲ ಒಂದು ತಿಂಗಳಲ್ಲಿ ಬಳಸಲು ಸಾಧ್ಯವಿಲ್ಲ’ ಎಂದು ಕ್ರಿಷನ್ ಹೇಳಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಎಚ್ಚೆತ್ತ ಪವರ್ ಡೆವಲಪ್ ಮೆಂಟ್ ಡಿಪಾರ್ಟ್ ಮೆಂಟ್ ನ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, `ಬಿಲ್ಲಿಂಗ್ ಸಾಫ್ಟ್ ವೇರ್ ಮತ್ತು ಕೆಲ ತಾಂತ್ರಿಕ ದೋಷಗಳಿಂದ ಹೀಗಾಗಿದೆ ಎಂದಿದೆ. ಅಲ್ಲದೇ ಬಿಲ್ಲಿಂಗ್ ಸಾಫ್ಟ್ ವೇರ್ ನಿಂದಾದ ಈ ತಪ್ಪನ್ನು ತಿದ್ದಿಕೊಳ್ಳುತ್ತೇವೆ ಮತ್ತು ಮುಂದೆಂದೂ ಈ ರೀತಿಯ ತಪ್ಪು ಸಂಭವಿಸದಂತೆ ಎಚ್ಚರ ವಹಿಸುತ್ತೇವೆ ಎಂದು ಹೇಳಿದೆ.
ಪವರ್ ಡೆವಲಪ್ ಮೆಂಟ್ ಡಿಪಾರ್ಟ್ ಮೆಂಟ್ ನ ಹೇಳಿಕೆ ಕೇಳಿದ ಕೂಡಲೇ ಕ್ರಿಷನ್ ಕುಟುಂಬ ಬದುಕಿದೆಯಾ ಬಡಪಾಯಿ ಎಂದು ನಿಟ್ಟುಸಿರುಬಿಟ್ಟಿದೆ. ಏನೇ ಆಗಲೀ ಪವರ್ ಡಿಪಾರ್ಟ್ ಮೆಂಟ್ ನ ಈ ತಪ್ಪಿನಿಂದಾಗಿ ಒಂದು ಕುಟುಂಬ ತೀರಾ ಸಂಕಷ್ಟಕ್ಕೆ ಸಿಲುಕಿದ್ದಂತೂ ಸುಳ್ಳಲ್ಲ.

  • ರಾಜಶೇಖರ ಜೆ

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಒಂದು ಕಾಲದಲ್ಲಿ ಆಕೆ ಬೀದಿ ಬೀದಿಗಳಲ್ಲಿ ಪತ್ರಿಕೆ ಸಂಗ್ರಹಿಸುತ್ತಿದ್ದಳು..! ಇಂದು ಕೋಟಿ ಕೋಟಿ ಆದಾಯಗಳಿಸುವ ಕಂಪನಿಯ ಮಾಲಿಕಳು..!

ಇದು ವೀರಯೋಧನ ವೀರಮರಣದ ಕಥೆ..! ಈ ವೀಡಿಯೋ ನೋಡಿದ ಮೇಲೆ ನೀವು ಶೇರ್ ಮಾಡದೇ ಇದ್ರೆ..!?

ವಿಶ್ವೇಶ್ವರ ಭಟ್ ಈಗ ವಿಶ್ವಾಕ್ಷರ ಭಟ್…! ಕನ್ನಡಕ್ಕೆ ಮತ್ತೊಂದು ದಿನಪತ್ರಿಕೆ ಹಾಗೂ ನ್ಯೂಸ್ ಚ್ಯಾನಲ್..!

ಚೆನ್ನೈನ 120 ರೂಪಾಯಿಗೂ, ಬೆಂಗಳೂರಿನ 480 ರೂಪಾಯಿಗೂ ಅಜಗಜಾಂತರ ವ್ಯತ್ಯಾಸ..!

ಮದುವೆಗೆ ಜಾಸ್ತಿ ಜನಕ್ಕೆ ಕರೆದರೆ ದಂಡ..! ಅದ್ದೂರಿ ಮದುವೆ ನಿಯಂತ್ರಣ ಕಾಯ್ದೆಯನ್ನು ಖಾಸಗಿಯಾಗಿ ವಿಧಾನ ಸಭೆಯಲ್ಲಿ ಮಂಡಿಸಿದ್ದಾರೆ.

ಈ ದೆಹಲಿ ಹುಡುಗನಿಗೆ ಗೂಗಲ್ ಕೊಟ್ಟ ಸಂಬಳ ಎಷ್ಟು ಗೊತ್ತಾ..? ಇದು ಕೋಟಿ ಸಂಬಳದ ಕಕ್ಕರ್ ಕಥೆ..!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article