No menu items!
6.2 C
Munich
Wednesday, April 22, 2026

ಮಂಡ್ಯದಲ್ಲಿ ಮಳೆ ಅವಾಂತರ: ಜನಜೀವನ ತತ್ತರ

Must read

ಮಂಡ್ಯ : ಮಳೆರಾಯನ ಆರ್ಭಟಕ್ಕೆ ಸಕ್ಕರೆ ನಗರಿ ಎಂದೆ ಕರೆಸಿಕೊಳ್ಳುವ ಮಂಡ್ಯದಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ . ಮಂಡ್ಯ ಜನತೆ ಮಳೆಗೆ ತತ್ತರಿಸಿ ಹೋಗಿದ್ದು , ಜನಜೀವನ ಅಸ್ತವ್ಯಸ್ತಗೊಂಡಿದೆ . ಧಾರಾಕಾರ ಮಳೆಗೆ ಗುತ್ತಲು ಕೆರೆ ತುಂಬಿ ಕೋಡಿ ಬಿದ್ದಿದೆ .

ಕೆರೆ ಕೋಡಿ ಬಿದ್ದ ಪರಿಣಾಮ 4 ಮನೆಗಳು ಕುಸಿದು ಬಿದ್ದಿವೆ . ರಸ್ತೆಯನ್ನೆ ಕೊರೆದು ಮಳೆ ನೀರು ರಭಸವಾಗಿ ಹರಿದುಬಂದಿದೆ . ಗುತ್ತಲು ಬಡಾವಣೆಯ ಅರಕೇಶ್ವರ ನಗರ ಮಳೆ ನೀರಿನಿಂದ ಜಲಾವೃತಗೊಂಡಿದೆ . ಇನ್ನೂ ಮಂಡ್ಯ- ಕೆ.ಎಂ.ದೊಡ್ಡಿ ನಡುವೆ ಸಂಪರ್ಕ ಕಡಿತಗೊಂಡಿದೆ .

ಹೀಗೆ ಮಳೆಯಿಂದ ಮನೆ ಗೋಡೆ ಕುಸಿತ , ಬೆಳೆ ನಾಶದಿಂದ ಜನರು ಹಾಗೂ ರೈತರು ಕಂಗಾಲಾಗಿದ್ದು , ಸೂಕ್ತ ಪರಿಹಾರ ನೀಡುವಂತೆ ಮಂಡ್ಯ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ .

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article