ಮಂಡ್ಯ ಸಂಸದೆ ಸುಮಲತಾ ಮೇಲೆ ನೆಟ್ಟಿಗರು ಗರಂ

0
40

ಮಂಡ್ಯ : ಮಳವಳ್ಳಿಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ‌ ನಡೆದು ಸಾಕಷ್ಟು ಚರ್ವೆಗೆ ಗ್ರಾಸವಾಗಿದೆ . ಇಷ್ಟೇಲ್ಲಾ ಹೇಯ ಕೃತ್ಯ ನಡೆದ್ರೂ ಮಂಡ್ಯಕ್ಕೆ ಸಂಸದೆ ಸುಮಲತಾ ಭೇಟಿ ನೀಡಿಲ್ಲ . ಇದರಿಂದ ಮಂಡ್ಯ ಸಂಸದೆ ಸುಮಲತಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ . ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ದ ಕಾಮೆಂಟ್ ಗಳ ಸುರಿಮಳೆಯನ್ನೆ ನೋಡಬಹುದು .

‘ಕಾಣೆಯಾದ ಸುಮಕ್ಕ’ ‘ಅಣ್ಣ ನಮ್ಮವನಾದರು ಅತ್ತಿಗೆ ನಮ್ಮವಳೆ’..!?
ಚುನಾವಣೆ ಸಂದರ್ಭದಲ್ಲಿ ಸೆರಗೊಡ್ಡಿ ಮತ ಭಿಕ್ಷೆ ಬೇಡಿದ ನೀವು, ಈ ಮಣ್ಣಿನ ಹೆಣ್ಣು ಮಕ್ಕಳಿಗೆ ಕೊಟ್ಟ ಕೊಡುಗೆ ಇದೇನಾ..? ಫೇಸ್ಬುಕ್ ಪೋಸ್ಟ್ಗೆ ಸೀಮಿತವಾದ ಸಂಸದೆ ಸುಮಲತಾ ಅಂಬರೀಶ್ . ಹೀಗೆ ಕಮೆಂಟ್ ಮಾಡುತ್ತಿದ್ದಾರೆ . ಇನ್ನೂ ಈ ಘಟನೆ ನಡೆದ ತಕ್ಷಣ ಘಟನೆಯನ್ನ ಖಂಡಿಸಿ ಪೋಸ್ಟ್ ಹಾಕಿ ಸುಮಲತಾ ಅವರು ಮಂಡ್ಯದಿಂದ ದೂರ ಉಳಿದಿದ್ದಾರೆ .

ಇನ್ನೂ ಅವರ ಪೋಸ್ಟ್ ನಲ್ಲಿ ಸುಮಲತಾ ಅವರು ” ಈ ಅಮಾನುಷ ಕೃತ್ಯ ಎಸಗಿದ ಅಪರಾಧಿಗೆ ಯಾವ ಶಿಕ್ಷೆ ಕೊಟ್ರೂ ಕಡಿಮೆಯೇ . ಪೊಲೀಸ್ ಹಾಗೂ ನ್ಯಾಯಾಂಗ ತೆಗೆದುಕೊಳ್ಳುವ ಕ್ರಮಕ್ಕೆ ನಾನು ಬದ್ಧ . ಈ ವಿಕೃತಿ ನನ್ನ ಮನಸ್ಸನ್ನು ಛಿದ್ರಗೊಳಿಸಿದೆ ” ಎಂದು ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ . ಪೋಸ್ಟ್ ಬೆನ್ನಲ್ಲೇ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ .

LEAVE A REPLY

Please enter your comment!
Please enter your name here