ಬೌಲರ್ ಎಸೆದ ಚೆಂಡು ಬ್ಯಾಟ್ಸ್ಮನ್ ಅನ್ನು ವಂಚಿಸಿ ವಿಕೆಟ್ಗೆ ತಾಗಿ ಬೌಲ್ಡ್ ಆಗಿಲ್ಲ..! ಪ್ಯಾಡ್ಗೆ ತಾಗಿ ಎಲ್ಬಿ ಬಲೆಗೆ ಬಿದ್ದಿಲ್ಲ..! ಕ್ಯಾಚ್ ನೀಡಿಲ್ಲ..! ಆದ್ರೂ ಬ್ಯಾಟ್ಸ್ಮನ್ ಔಟ್ ಅಂತ ಅಂಪೈರ್ ತೀರ್ಪು ನೀಡಿರೋ ವೀಡಿಯೋ ಈಗ ವೈರಲ್ ಆಗಿದೆ. ಯುವರಾಜ್ ಸಿಂಗ್ ಈ ವೀಡಿಯೋವನ್ನು ಇನ್ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ…!
ಈ ವೀಡಿಯೋ ಬಗ್ಗೆ ಕ್ರಿಕೆಟ್ ಅಂಕಿ-ಅಂಶ ತಜ್ಞ ಮೋಹನ್ ದಾಸ್ ಟ್ವೀಟ್ ಮಾಡಿದ್ದಾರೆ. ಇವರು ಹೇಳೋ ಪ್ರಕಾರ 2007ರಲ್ಲಿ ಧನ ಸಹಾಯಕ್ಕೆ ಅಂತ ಕ್ರಿಕೆಟ್ ಪಂದ್ಯವನ್ನು ನಡೆಸಲಾಗಿತ್ತು. ಆ ಪಂದ್ಯದಲ್ಲಿ ಬ್ಯಾಟ್ಸ್ಮನ್ ಸತತ 2 ಎಸೆತಗಳನ್ನು ಬ್ಯಾಟಿಗೆ ತಾಗಿಸದೇ ಇದ್ದರೆ ಔಟ್ ಎಂಬ ನಿಯಮ ಅಳವಡಿಸಲಾಗಿತ್ತಂತೆ. ಆ ನಿಯಮದ ಅನ್ವಯ ಬ್ಯಾಟ್ಸ್ಮನ್ ಔಟ್ ಎಂಬ ತೀರ್ಪನ್ನು ನೀಡಲಾಗಿತ್ತಂತೆ.