ಒಂದೆಡೆ ಪೆಟ್ರೋಲ್ ದರ ಏರಿಕೆ, ಇನ್ನೊಂದೆಡೆ ಟ್ಯಾಂಕರ್ ಗಳ ಮುಷ್ಕರ. ಇದು ವಾಹನ ಸವಾರರ ತಲೆಕೆಡಿಸಿದೆ. ಮೂಲ ಸೌಕರ್ಯಗಳಿಗೆ ಒತ್ತಾಯಿಸಿ ತೈಲ ಸಾಗಣೆ ಟ್ಯಾಂಕರ್ಗಳ ಚಾಲಕರು ಮತ್ತು ಕ್ಲೀನರ್ ಗಳು ಧರಣಿ ಆರಂಭಿಸಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಪೆಟ್ರೋಲ್-ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇತ್ತೀಚೆಗಷ್ಟೆ ಲೀಟರ್ ಪೆಟ್ರೋಲ್ ಗೆ 3 ರೂಪಾಯಿ ಹೆಚ್ಚಿಸಿದ್ದ ಕೇಂದ್ರ ಸರ್ಕಾರ, ಮತ್ತೆ 2 ರೂಪಾಯಿ ಹೆಚ್ಚು ಮಾಡಿದೆಈ ಕಡೆ ರಾಜ್ಯ ಸಕರ್ಾರ ಪೆಟ್ರೋಲ್ ಮೇಲೆ ತೆರಿಗೆ ಹಾಕಿದೆ. ಕಳೆದ ಒಂದು ತಿಂಗಳಲ್ಲಿ ಪೆಟ್ರೋಲ್ ಬೆಲೆ ಏಳು ರೂಪಾಯಿ ಹೆಚ್ಚಾದಂತಾಗಿದೆ. ಇತ್ತ ಟ್ಯಾಂಕರ್ ಚಾಲಕರು ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟಿದ್ದಾರೆ. ಪೆಟ್ರೋಲಿಯಂ ಕಂಪನಿಗಳು ಪ್ರತಿ ಕಿಲೋಮೀಟರ್ ಟ್ಯಾಂಕರ್ ಬಾಡಿಗೆ ದರವನ್ನು ಹೆಚ್ಚಳ ಮಾಡಬೇಕು. ರಸ್ತೆ ದುರಸ್ತಿ, ರಸ್ತೆ ಆಧುನೀಕರಣಗೊಳಿಸಬೇಕು. ದೇವನಹಳ್ಳಿ ಮತ್ತು ಹೊಸಕೋಟೆಯಲ್ಲಿರುವ ಪೆಟ್ರೋಲ್ ಟ್ಯಾಂಕರ್ ಟರ್ಮಿನಲ್ ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಮಹಾನಗರಕ್ಕೆ ಪ್ರತಿದಿನ 600ರಿಂದ 700 ಟ್ಯಾಂಕರ್ ಪೆಟ್ರೋಲ್ ಮತ್ತು ಡೀಸೆಲ್ ಅಗತ್ಯವಿದೆ. ಆದರೆ ಏಪ್ರಿಲ್ 4 ರಂದು ಬಂದಿದ್ದು ಐವತ್ತರಿಂದ ಅರವತ್ತು ಟ್ಯಾಂಕರ್ ಇಂಧನ ಮಾತ್ರ. ಒಟ್ಟಿನಲ್ಲಿ ಪೆಟ್ರೋಲ್ ಟ್ಯಾಂಕರ್ ಮುಷ್ಕರದಿಂದ ಪೆಟ್ರೋಲ್ ಗೆ ಹಾಹಾಕಾರ ಶುರುವಾಗಿದೆ. ಕೇವಲ ಒಂದು ದಿನಕ್ಕೆ ಬೆಂಗಳೂರಿನ ಪೆಟ್ರೋಲ್ ಬಂಕ್ಗಳಲ್ಲಿ ಮೈಲುಗಟ್ಟಲೆ ಕ್ಯೂ, ಕ್ರೌಡ್ ಕಾಣಿಸಿಕೊಂಡಿದೆ. ಒಂದು ವೇಳೆ ವಾರಗಟ್ಟಲೇ ಬೆಂಗಳೂರಿನಲ್ಲಿ ಪೆಟ್ರೋಲ್ ಸಿಗದಿದ್ದರೇ ಏನಾಗಬಹುದು ಎಂಬ ಆತಂಕ ಮೂಡಿದೆ. ವಿವರವನ್ನು ನಾವು ಹೇಳುವುದಕ್ಕಿಂತ ನಮ್ಮ ಕೆಮೆರಾದಲ್ಲಿ ನಿನ್ನೆ ರಾತ್ರಿ ಸೆರೆಯಾದ ಈ ಫೋಟೋಗಳನ್ನು ನೋಡಿ.
- ರಾ ಚಿಂತನ್
POPULAR STORIES :
ಆರು ಪ್ರಶ್ನೆ ಪತ್ರಿಕೆಗಳು `ಲೀಕ್’, ಬೆಚ್ಚಿಬೀಳಿಸಿದ ಸಿಐಡಿ ತನಿಖೆ..!?
ಒಬಾಮಾ ಜೊತೆ ಡಿನ್ನರ್ ಗೆ ರೆಡಿ ಈ ನಟಿ..!
ಭಾರತದ ಮೇಲೆ ಗೂಬೆ ಕೂರಿಸಿದ ಪಾಕಿಸ್ತಾನ..!? ಈ ಜನ್ಮದಲ್ಲಿ ಇವ್ರಿಗೆ ಬುದ್ಧಿ ಬರಲ್ಲ ಬಿಡಿ..!!
ಅಶ್ಲೀಲ ಚಿತ್ರಗಳನ್ನು ನೋಡುವುದು ತಪ್ಪಲ್ಲ..!? ಲವ್ ಗೇಮ್ ಚಿತ್ರದಲ್ಲಿ ಅಂಥದ್ದೇನಿದೆ..?
ಸನ್ನಿಲಿಯೋನ್ ಮೇಲೆ ನೂರು ಕೋಟಿ ಮಾನನಷ್ಟ ಮೊಕದ್ದಮೆ..!? ಹಾಟ್ ಸುಂದರಿ ಮಾಡಿದ ತಪ್ಪೇನು..?
ATM ಎ ಟಿ ಎಂ- ಎನಿಟೈಂ ಮನಿ ಸಿಗಲ್ಲ…!
ಜಮ್ಮು-ಕಾಶ್ಮೀರದಲ್ಲಿ ಇಂದಿನಿಂದ `ಬೆಂಕಿ’ಯ ಆಟ..!
ವಿರಾಟ್ ಕೊಹ್ಲೀನಾ ಮದ್ವೆ ಆಗ್ತಾಳಂತೆ ಖಂಡಿಲ್..!? #Video
ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!