ತುಂಗಭದ್ರಾ ನದಿಯಲ್ಲಿ ನಡೆದ ದೋಣಿ ದುರಂತದಲ್ಲಿ 12 ಮಂದಿ ನೀರು ಪಾಲಾದ ಘಟನೆ ನಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹಾಡೋನಹಳ್ಳಿಯಲ್ಲಿ ಬುಧವಾರ ಸಂಭವಿಸಿದೆ. ಗಣೇಶ ವಿಸರ್ಜನೆಗೆಂದು ತೆರಳಿದ್ದ ಭಕ್ತರು ಕೇವಲ ಐದರಿಂದ ಆರು ಜನ ಪ್ರಯಾಣಿಸಬಲ್ಲ ತೆಪ್ಪದಲ್ಲಿ 20ಕ್ಕೂ ಅಧಿಕ ಜನ ತೆರಳಿದ್ದಾರೆ. ತೆಪ್ಪ ನದಿ ನಡು ಭಾಗದಲ್ಲಿ ಮುಳುಗಲು ಆರಂಭಿಸಿದೊಡನೆಯೇ ಪ್ರಾಣ ರಕ್ಷಣೆಗಾಗಿ ಕೆಲವರು ದೋಣಿಯಿಂದ ಜಿಗಿದಿದ್ದಾರೆ. ನೋಡು ನೋಡುತ್ತಿದ್ದಂತೆ ದೋಣಿ ನೀರಿನಲ್ಲಿ ಮುಳುಗಿ ಬಿಟ್ಟಿದೆ. ಕೆಲವರು ಈಜಿಕೊಂಡು ದಡ ಸೇರಿದರೆ ಇನ್ನೂ ಕೆಲವರು ನಡು ನೀರಿನಲ್ಲಿ ಮುಳುಗಿ ಹೋಗಿದ್ದಾರೆ. ಘಟನೆಯಲ್ಲಿ ಸುಮಾರು 12 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು ಈಗಾಗಲೇ 8 ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಉಳಿದ ಶವಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕೋಲಾರದ ನುರಿತ ಮುಳುಗು ತಜ್ಞರು ಸ್ಥಳಕ್ಕೆ ಆಗಮಿಸಿದ್ದು ಇಂದು ಮುಂಜಾನೆ ಮತ್ತೋರ್ವ ಮೃತ ದೇಹವನ್ನು ಹೊರ ತೆಗೆಯಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜನ ಸಾಗರವೇ ಹರಿದು ಬಂದಿದ್ದು, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
https://youtu.be/LiFS6mGmHSw
POPULAR STORIES :
ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!
ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!
ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್ಸಿ, ಡಿಜಿಲಾಕರ್ನಲ್ಲಿದ್ದರೆ ಸಾಕು..!