ಸಿದ್ದು-ಡಿಕೆ ಎಂದಿಗೂ ಒಂದಾಗಲು ಸಾಧ್ಯವಿಲ್ಲ ….!

0
58

ಉತ್ತರ-ದಕ್ಷಿಣ ಕರ್ನಾಟಕ ಭಾಗದಲ್ಲಿ ಸಿದ್ದು-ಡಿಕೆಶಿ ಪ್ರಚಾರ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ . ಈ ಬಗ್ಗೆ ಚಾಮುಂಡಿ ದರ್ಶನ ಬಳಿಕ ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದ್ದು “ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಎಂದಿಗೂ ಒಂದಾಗಲು ಸಾಧ್ಯವಿಲ್ಲ . ಈಗಲೂ ಸಿದ್ದು ಮತ್ತು ಡಿಕೆಶಿ ಉತ್ತರ-ದಕ್ಷಿಣವಾಗಿಯೇ ಇದ್ದಾರೆ‌ .ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಎಂದಿಗೂ ಒಂದಾಗಲೂ ಸಾಧ್ಯವಿಲ್ಲ . ಅವರ ಪಕ್ಷದ ತಂತ್ರಗಾರಿಕೆಗೆ ಅನುಸಾರವಾಗಿ ರಾಜ್ಯ ಪ್ರವಾಸ ಮಾಡ್ತಿದಾರೆ ‌. ಈಗಾಗಲೇ ನಮ್ಮ ಪಕ್ಷದಿಂದಲೂ ಜನಸಂಕಲ್ಪ ಯಾತ್ರೆ ಮಾಡುತ್ತಿದ್ದೇವೆ . ವಿವಿಧ ಮೋರ್ಚಾಗಳ ಸಮಾವೇಶವನ್ನೂ ಆಯೋಜನೆ ಮಾಡ್ತಿದೇವೆ . ಈ ಮೂಲಕ ಮುಂದಿನ ಚುನಾವಣೆಗೆ ನಾವು ಕೂಡ ಸಿದ್ಧರಾಗುತ್ತಿದ್ದೇವೆ ಎಂದುಬ ಚಾಮುಂಡಿ ದರ್ಶನ ಬಳಿಕ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ .

LEAVE A REPLY

Please enter your comment!
Please enter your name here