ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ `ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರದಲ್ಲಿ ರಾಜ್ ಕುಮಾರ್ ಶಿವನ ಪಾತ್ರ ಮಾಡಿದ್ದರು. ಶಿವನ ಕೊರಳಿಗೆ ಡ್ಯೂಪ್ ಹಾವು ಬೇಡ, ಒರಿಜಿನಲ್ ಹಾವೇ ತರಿಸಿ ಎಂದರು ರಾಜ್ ಕುಮಾರ್. ರಾಜ್ ಕುಮಾರ್ ನಟನೆಯ ವಿಚಾರದಲ್ಲಿ ಒಂದ್ ಸಾರಿ ಕಮಿಟ್ ಆದರೆಂದರೇ, ದೂಸ್ರಾ ಮಾತೇ ಇರಲಿಲ್ಲ. ಒರಿಜಿನಲ್ ಹಾವನ್ನು ತರಿಸಿ ಅವರ ಕುತ್ತಿಗೆಗೆ ಸುತ್ತಲಾಯಿತು. ಆದರೆ ಇದರಿಂದ ನಿಜಕ್ಕೂ ಹೆದರಿದ್ದು ಪಾರ್ವತಿ ಪಾತ್ರಧಾರಿ ಗೀತಾ. ಹಾವು ಹೊರಡಿಸುತ್ತಿದ್ದ ಶಬ್ಧ, ಅದು ಕತ್ತನ್ನು ಆಚೀಚೆ ಹೊರಳಿಸುತ್ತಿದ್ದ ವೈಖರಿ ನೋಡಿ, ಚಿತ್ರೀಕರಣದುದ್ದಕ್ಕೂ ಅವರು ರಾಜ್ ಕುಮಾರ್ ಅವರಿಂದ ಗಾವುದ ಕಾಯ್ದುಕೊಂಡರು. ರಾಜ್ ಕುಮಾರ್ ಜೊತೆ ನಟಿಸಿದ ಅನೇಕ ಕಲಾವಿದರಿಗೆ ಇಂತಹ ಅನುಭವಗಳಾಗಿವೆ. ಅವರ ಜೊತೆ ಕಳೆದ ಪ್ರತಿಯೊಂದು ಕ್ಷಣಗಳೂ ಅದ್ಭುತ, ಅವರ ಜೊತೆ ನಟಿಸಲು ಅವಕಾಶ ಸಿಕ್ಕಿದ್ದು ಪುಣ್ಯ ಎಂದವರಿದ್ದಾರೆ.
POPULAR STORIES :
ಸಂಸ್ಕಾರವಿಲ್ಲದ ಶಿಕ್ಷಣದಿಂದ ಸಮಾಜೋದ್ಧಾರ ಸಾಧ್ಯವೇ..?
`ಅಣ್ಣಾ, ಒಂದು ಸಾರಿ ಹುಟ್ಟಿ ಬಾ.. ಪ್ಲೀಜ್..!!!’ `ನಾನು ಸತ್ತ ಮೇಲೆ ಸುಟ್ಟು, ಬೆಳೆ ಬೆಳೆಯೋ ಜಾಗ ಹಾಳು ಮಾಡಬೇಡಿ..?
ಭಾರತದ ಮೇಲೆ ಪಾಕಿಸ್ತಾನವನ್ನು ಛೂ ಬಿಟ್ಟಿರೋದು ಚೀನಾ..!!? ಚೀನಾ, ಭಾರತ, ಜಪಾನ್- ಇವರಲ್ಲಿ ಯಾರು ಬಲಿಷ್ಠರು..!?
ಕಥೆಗಾರ `ಪ್ಲೀನಿ’ ಸೃಷ್ಟಿಸಿದ ದೆವ್ವಗಳ ಜಗತ್ತು..!! `ಭೂತವಿಲ್ಲ… ಪಿಶಾಚಿಯಿಲ್ಲ..!!’
ನೋ ಮೊಹಮ್ಮದ್.. ನೋ ಮೆಕ್ಕಾ..!! ಲೋಗೊವೇ ಲೋಕಾ..!!?
ನೀವು ಸಾಹಸಪ್ರಿಯರಾ..? ಧಮ್ ಇದ್ರೇ ಟ್ರೈ ಮಾಡಿ..!?
9,50,00,000 ಬೆಲೆಯ ಆ್ಯಪ್ ನ 4 ನಿಮಿಷದಲ್ಲಿ ಅಭಿವೃದ್ಧಿ ಪಡಿಸಿದ ಭಾರತೀಯ..!