ಕಲಾವಿದ ಮಂಡ್ಯ ರಮೇಶ್ ಅವರಿಗೆ ರಾಜ್ ಕುಮಾರ್ ಅವರನ್ನು ನೋಡಬೇಕೆಂಬ ಅದಮ್ಯ ಆಸೆಯಿತ್ತು. ಅವಕಾಶವು ಸಿಕ್ಕಿತ್ತು. ಅವತ್ತು ರಾಜ್ ಕುಮಾರ್ ತಮ್ಮ ಮನೆಯ ಅರಳಿಮರಕ್ಕೆ ನಮಸ್ಕರಿಸುತ್ತಾ ನಿಂತಿದ್ದರು. ಸೀದಾ ಅಲ್ಲಿಗೆ ಹೋದ ಮಂಡ್ಯ ರಮೇಶ್ ಏನು ಎತ್ತ ಯೋಚಿಸದೇ ಅವರ ಕಾಲಿಗೆ ಬಿದ್ದು ಬಿಟ್ಟಿದ್ದರು. ಇದ್ಯಾರಪ್ಪ ಎಂದು ರಾಜ್ ಕುಮಾರ್ ಸಾವರಿಸಿಕೊಳ್ಳುವಷ್ಟರಲ್ಲಿ, ಮಂಡ್ಯ ರಮೇಶ್ `ಅಣ್ಣಾ… ನಿಮ್ಮ ಕೈಯ್ಯನ್ನು ಒಂದೇ ಒಂದು ಸಲ ಮುಟ್ಲಾ..” ಎಂದು ಕೇಳಿದ್ರಂತೆ. `ಆಯ್ತು ಕಂದ..’ ಎಂದ ರಾಜ್ ಕುಮಾರ್ ಅವರ ಕೈಯ್ಯನ್ನು ಬಿಗಿಯಾಗಿ ಹಿಡಿದ ಮಂಡ್ಯ ರಮೇಶ್, `ಅಂಥದ್ದೊಂದು ಸ್ಪರ್ಶವನ್ನು ಇನ್ನು ನನ್ನ ಜೀವಿತದಲ್ಲೇ ಅನುಭವಿಸಲು ಸಾಧ್ಯವಿಲ್ಲ’ ಎನ್ನುತ್ತಾರೆ. ಅದೆಷ್ಟೋ ಜನರು, ಕೆಲ ಒಳ್ಳೇ ಗುಣಗಳನ್ನು ಹೆತ್ತವರಿಂದ, ಪುಸ್ತಕಗಳಿಂದ ಕಲಿಯದಿದ್ದರೂ ರಾಜ್ಕುಮಾರ್ ಅವರಿಂದ ಪ್ರಭಾವಿತರಾಗಿ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ.
ದಿವಂಗತ ಕೆ. ಎಸ್ ಅಶ್ವತ್. ಕನ್ನಡ ಚಿತ್ರರಂಗ ಕಂಡ ಮೇರುನಟ. ಈ ನಟ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜ್ ಕುಮಾರ್ ಜೊತೆ ನಟಿಸಿದ್ದಾರೆ. ರಾಜ್ ಕುಮಾರ್ ಜೊತೆ ಅಭಿನಯಿಸಿದ ಪ್ರತಿಯೊಂದು ಚಿತ್ರವೂ, ಅವರ ಜೊತೆ ಕಳೆದ ಪ್ರತಿಯೊಂದು ಕ್ಷಣವೂ ಅದ್ಭುತ ಎಂದಿದ್ದರು.
POPULAR STORIES :
ಸಂಸ್ಕಾರವಿಲ್ಲದ ಶಿಕ್ಷಣದಿಂದ ಸಮಾಜೋದ್ಧಾರ ಸಾಧ್ಯವೇ..?
`ಅಣ್ಣಾ, ಒಂದು ಸಾರಿ ಹುಟ್ಟಿ ಬಾ.. ಪ್ಲೀಜ್..!!!’ `ನಾನು ಸತ್ತ ಮೇಲೆ ಸುಟ್ಟು, ಬೆಳೆ ಬೆಳೆಯೋ ಜಾಗ ಹಾಳು ಮಾಡಬೇಡಿ..?
ಭಾರತದ ಮೇಲೆ ಪಾಕಿಸ್ತಾನವನ್ನು ಛೂ ಬಿಟ್ಟಿರೋದು ಚೀನಾ..!!? ಚೀನಾ, ಭಾರತ, ಜಪಾನ್- ಇವರಲ್ಲಿ ಯಾರು ಬಲಿಷ್ಠರು..!?
ಕಥೆಗಾರ `ಪ್ಲೀನಿ’ ಸೃಷ್ಟಿಸಿದ ದೆವ್ವಗಳ ಜಗತ್ತು..!! `ಭೂತವಿಲ್ಲ… ಪಿಶಾಚಿಯಿಲ್ಲ..!!’
ನೋ ಮೊಹಮ್ಮದ್.. ನೋ ಮೆಕ್ಕಾ..!! ಲೋಗೊವೇ ಲೋಕಾ..!!?
ನೀವು ಸಾಹಸಪ್ರಿಯರಾ..? ಧಮ್ ಇದ್ರೇ ಟ್ರೈ ಮಾಡಿ..!?
9,50,00,000 ಬೆಲೆಯ ಆ್ಯಪ್ ನ 4 ನಿಮಿಷದಲ್ಲಿ ಅಭಿವೃದ್ಧಿ ಪಡಿಸಿದ ಭಾರತೀಯ..!