No menu items!
4.9 C
Munich
Saturday, May 2, 2026

ಶಾಲಾ ವಾಹನಕ್ಕೆ ರೈಲು ಡಿಕ್ಕಿ, 13 ಮಕ್ಕಳ ದುರ್ಮರಣ

Must read

ಮಾನವ ರಹಿತ ಕ್ರಾಸಿಂಗ್ ನಲ್ಲಿ ರೈಲೊಂದು ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 13ಮಕ್ಕಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಖುಷಿ ನಗರ್ ಜಿಲ್ಲೆಯಲ್ಲಿಂದು ನಡೆದಿದೆ.
ಬೆಹ್ ಪುರ್ವ್ ಸಮೀಪ ಕ್ರಾಸಿಂಗ್ ಗೇಟ್ ಬಳಿ ಥಾವೆ-ಕಪತ್ ಗಂಜ್ ಪ್ರಯಾಣಿಕರ ರೈಲು ಶಾಲಾ ವ್ಯಾನ್ ಗೆ ಬಡಿದಿದ್ದು ಡಿವೈನ್ ಪಬ್ಲಿಕ್ ಶಾಲೆಯ 13ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವಿಷಯವನ್ನು ರೈಲ್ವೆ ವಕ್ತಾರ ವೇದ ಪ್ರಕಾಶ್ ತಿಳಿಸಿದ್ದಾರೆ.


ಮಕ್ಕಳೂ ಸೇರಿದಂತೆ ಈ ವ್ಯಾನ್ ನಲ್ಲಿ 25ಮಂದಿ ಮಕ್ಕಳಿದ್ದರು. ಬಹುತೇಕರು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ತಿಳಿದುಬಂದಿದೆ. ಘಟನೆಯಲ್ಲಿ 8 ಮಂದಿಗೆ ಗಾಯಗಳಾಗಿವೆ. ಸಿಎಂ ಯೋಗಿ ಆದಿತ್ಯನಾಥ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಗೆ ವಿಷಾಧಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಗೋರಖ್ ಪುರ್ ಆಯುಕ್ತರಿಗೆ ತನಿಖೆಗೆ ಆದೇಶಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article