ಆನೆಗುಂದಿ ಸಂಸ್ಥಾನದಲ್ಲಿ ನೈಸ್ಟಿಕ ಬ್ರಹ್ಮ ಚರ್ಯ ದೀಕ್ಷೆ !

0
22

ಉಡುಪಿ: ಉಡುಪಿಯ ಶ್ರೀ ಮತ್ತ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಪುಷ್ಪಕ್ ಆಚಾರ್ಯರವರಿಗೆ ನೈಷ್ಟಿಕ ಬ್ರಹ್ಮಚರ್ಯ ದೀಕ್ಷೆಯನ್ನು ನೀಡಿದರು. ನೂತನ ಗುರುಗಳಿಗೆ ಶ್ರೀ ರಾಜರಾಜೇಶ್ವರ ಚೈತನ್ಯ ಎಂಬ ತಕ್ಕಂತಹ ನೂತನ ನಾಮಕರಣವನ್ನು ನೀಡಿದರು.


ಸನ್ಯಾಸದ ಪೂರ್ವಭಾವಿಯಾಗಿ ನೈಷ್ಠಿಕ ಬ್ರಹ್ಮಚರ್ಯ ದೀಕ್ಷೆ ಕೊಡಲಾಯಿತು. 15-4-2024 ಸೋಮವಾರ ಪ್ರಾತಃಕಾಲದಲ್ಲಿ 8:30ಕ್ಕೆ ದೀಕ್ಷೆ ಕೊಡಲಾಯಿತು. ಉಡುಪಿ ಜಿಲ್ಲೆ ಪಡು ಕುತ್ತ್ಯಾರು ಗ್ರಾಮದಲ್ಲಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದಲ್ಲಿ ದೀಕ್ಷೆ ಕಾರ್ಯಕ್ರಮ ನೆರವೇತಿತು.

ಈ ಸಂದರ್ಭದಲ್ಲಿ ಶ್ರೀ ರಾಜರಾಜೇಶ್ವರಿ ಚೈತನ್ಯ ಗುರುಗಳ ಪೂರ್ವಾಶ್ರಮದ ತಂದೆ ತಾಯಿಗಳು ಸೇರಿದಂತೆ ಭಕ್ತಾದಿಗಳು ಭಾಗವಹಿಸಿದ್ದರು. ಆದಿ ಗುರು ಶಂಕರಾಚಾರ್ಯರ ಸಂಪ್ರದಾಯದಂತೆ ದೀಕ್ಷೆಯನ್ನು ಕೊಡಲಾಯಿತು. ಪ್ರಾತಃಕಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಮಠದಲ್ಲಿ ಗಣ ಹೋಮ ಹಾಗೂ ನವಗ್ರಹ ಹೋಮ ದಕ್ಷಿಣಾಮೂರ್ತಿ ಹೋಮ ಮೇಧಾ ಹೋಮ ನೆರವೇರಿಸಲಾಯಿತು.