ನಿತ್ಯ ಭವಿಷ್ಯ : ಇಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ!

0
496

ನಿತ್ಯ ಭವಿಷ್ಯ : ಇಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ! ಉಳಿದ ರಾಶಿಗಳ ಫಲಾಫಲಗಳೇನು?

ಮೇಷ : ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿಗಳ ಆಗ್ರಹ ಭಿನ್ನಾಭಿಪ್ರಾಯಕ್ಕೆ ದಾರಿ ಮಾಡಿಕೊಡಲಿದೆ. ಪ್ರಯಾಣದಲ್ಲಿ ತೊಂದರೆ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.  ಆರ್ಥಿಕ ಸಮಸ್ಯೆ, ಹೆಚ್ಚು ಶ್ರಮ – ಕಡಿಮೆ ಲಾಭ. ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ.

ವೃಷಭ :  ಹುಡುಗಾಟಿಕೆ ಬಿಟ್ಟು ಬಿಡಿ. ಪವಾಡದಿಂದ ಎಲ್ಲವೂ ಸಾಧ್ಯವಾಗುವುದಿಲ್ಲ. ಸೃಜಾನತ್ಮಕ ಕೆಲಸದೆಡೆಗೆ ಆಸಕ್ತಿ, ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಷೇರುಗಳಲ್ಲಿ ಹೂಡಿಕೆಯಿಂದ ಲಾಭ. ಶುಕ್ರನನ್ನು ಭಕ್ತಿಯಿಂದ  ಸ್ಮರಿಸಿ.

ಮಿಥುನ  : ಆತ್ಮವಿಶ್ವಾಸ ಯಶಸ್ಸಿಗೆ ಕಾರಣವಾಗಲಿದೆ. ಆದರೆ, ಗುರುಹಿರಿಯರ ಕಡೆಗಣನೆ ಒಳ್ಳೆಯದಲ್ಲ.  ಉದ್ಯೋಗ – ವ್ಯವಹಾರಗಳಲ್ಲಿ ಜಯ ಮೊದಲಾದ ಫಲಗಳಿವೆ. ಸುಬ್ರಹ್ಮಣ್ಯ ದೇವರನ್ನು ಭಕ್ತಿಯಿಂದ  ಪೂಜಿಸಿ.

ಕರ್ಕಾಟಕ :  ಒಗಟು ಒಗಟಾಗಿ ಮಾತಾಡಬೇಡಿ. ಒಳಿತು ಕೆಡಕುಗಳ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದುಕೊಳ್ಳಿ. ಎದುರಾಳಿಗಳ ಟೀಕೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಸೂರ್ಯದೇವನನ್ನು ಅನನ್ಯಭಾವದಿಂದ ಪ್ರಾರ್ಥಿಸಿ.

ಸಿಂಹ : ನೆರೆಹೊರೆಯವರೊಂದಿಗೆ ಅನಗತ್ಯ ಜಗಳ. ನಿಮ್ಮ ಮಾತು ಕಲಹಕ್ಕೆ ದಾರಿಯಾಗಬಹುದು. ಅಪರಿಚಿತರೊಂದಿಗೆ ವ್ಯವಹರಿಸಬೇಡಿ. ಕುಜನನ್ನು ಭಕ್ತಿಯಿಂದ  ಪ್ರಾರ್ಥಿಸಿ, ಒಳ್ಳೆಯದಾಗುತ್ತದೆ.

ಕನ್ಯಾ :  ಹಗಲು ಕನಸು ಕಾಣಬೇಡಿ. ಕನಸು ಕಾಣಿ.. ಆ ಕನಸು ನನಸು ಮಾಡಿಕೊಳ್ಳಲು ಪ್ರಯತ್ನಿಸಿ. ಅದು ನನಸಾದಾಗ ಮಾತ್ರ ಹಣಕಾಸು ಸಿಗಲಿದೆ. ಕ್ಷೀರೋದ್ಯಮ, ಮತ್ಸೋದ್ಯಮ, ಕೃಷಿ ವಲಯಗಳಲ್ಲಿರುವವರು ಸ್ವಲ್ಪ ಜಾಗುರಕರಾಗಿರಿ. ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ.

ತುಲಾ :  ವಾಹನ ಖರೀದಿ ಯೋಗವಿದೆ. ಹಾಗಂತ ಅವಸರ ಒಳ್ಳೆಯದಲ್ಲ. ಬೇರೆಯವರು ಕೊಡು ಉಪಯೋಗವಿಲ್ಲದ ಸಲಹೆ ಸ್ವೀಕರಿಸಬೇಡಿ. ನಿಮಗೆ ಶುಭದಿನ ಇದಾಗಿದ್ದು, ಅಪೇಕ್ಷಿತ ಕೆಲಸ ಕಾರ್ಯಗಳಲ್ಲಿನ ಜಯವಿದೆ. ಪಿತೃದೇವತೆಗಳ ಆರಾಧನೆ ಮಾಡಿ.

 

ವೃಶ್ಚಿಕ :  ಗುರಿ ತಲುಪಲು ಹೆಚ್ಚಿನ ಅವಕಾಶಗಳು ಬರಲಿವೆ. ಎಲ್ಲರನ್ನು ನಂಬಿ ಮುನ್ನಡೆಯುವುದು ಒಳ್ಳೆಯದಲ್ಲ. ದುರ್ಬಲವಾಗಿದ್ದ ಸಂಬಂಧ ಮತ್ತೆ ಗಟ್ಟಿಯಾಗಲಿದೆ. ಕುಜ ಮತ್ತು ಬುಧನನ್ನು ಪ್ರಾರ್ಥಿಸಿ.

ಧನು : ಉತ್ಸಾಹ, ಶ್ರಮದಿಂದ ಕಾರ್ಯ ಸಿದ್ಧಿ. ನಿಮ್ಮ ಮಾನವೀಯತೆಗೆ ಗೆಲುವು ಸಿಗಲಿದೆ. ನಿಮ್ಮ ಸ್ಥಾನ, ಅಧಿಕಾರದ ಮಹತ್ವಾಕಾಂಕ್ಷೆ ವಿರೋಧಭಾಸಕ್ಕೆ ಕಾರಣವಾಗುತ್ತದೆ. ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ಕೊರತೆ ಕಾಣುತ್ತಿದೆ. ಕುಜನನ್ನು ಪ್ರಾರ್ಥಿಸಿ.

ಮಕರ :  ಷೇರು, ಭೂ ವ್ಯವಹಾರಗಳಲ್ಲಿ ಯಶಸ್ಸು. ಹೊಸ ಅನುಭವ ಮತ್ತು ಲಾಭದ ದಿನ  ಇದಾಗಲಿದೆ. ನೀವು ಮುಟ್ಟಿದ್ದೆಲ್ಲಾ ಚಿನ್ನ! ಎಲ್ಲಾ ಕ್ಷೇತ್ರದಲ್ಲೂ ಲಾಭ ಕಾಣಲಿದ್ದೀರಿ. ಕೃಷ್ಣ ಸ್ಮರಣೆ ಮಾಡಿ.

ಕುಂಭ : ಸೋಮಾರಿತನಕ್ಕೆ ಗುಡ್ ಬೈ ಹೇಳಿ, ಹೊಸ ಹುರುಪಿನಿಂದ ಕೆಲಸ ಮಾಡುತ್ತೀರಿ. ಇಂದು ದಿನವಿಡೀ ನೀವು ಬ್ಯುಸಿ ಆಗಿರುತ್ತೀರಿ. ಕುಟುಂಬ ಸದಸ್ಯರ ಬೆಂಬಲ ನಿಮಗೆ ಸಿಗಲಿದೆ. ಈಶ್ವರನನ್ನು ಪ್ರಾರ್ಥಿಸಿ.

ಮೀನ  :  ಗೆಳೆಯರಿಂದ ಹೊಸ ವಿಚಾರಗಳನ್ನು ತಿಳಿದುಕೊಳ್ಳುತ್ತೀರಿ. ಭೂ ಸಂಬಂಧ ವ್ಯವಹಾರದಲ್ಲಿ ಜಯ. ದಿನದಂತ್ಯದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ. ಅರ್ಧನಾರೀಶ್ವರನ ಪ್ರಾರ್ಥನೆ ಮಾಡಿ.

LEAVE A REPLY

Please enter your comment!
Please enter your name here