ಇದಪ್ಪಾ ಚಾಲೆಂಜ್ ಅಂದ್ರೆ..

0
43

ನಿನ್ನೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಹತ್ತು ವಿಕೆಟ್ ಗಳ ಗೆಲುವು ಸಾಧಿಸುವುದರ ಮೂಲಕ ಐಪಿಎಲ್ ನ ಇತರೆ ತಂಡಗಳ ಅಭಿಮಾನಿಗಳ ಬಾಯಿ ಮುಚ್ಚಿಸಿದೆ. ಇಷ್ಟು ವರ್ಷ ಆರ್ ಸಿಬಿಯನ್ನು ಟ್ರೋಲ್ ಮಾಡುತ್ತಿದ್ದ ಮಂದಿ ಆರ್ ಸಿಬಿ ಈ ಬಾರಿ ಸತತ 4ಗೆಲುವು ಸಾಧಿಸಿದ ನಂತರ ಸಾಮಾಜಿಕ ಜಾಲತಾಣದಿಂದ ಎಸ್ಕೇಪ್ ಆಗಿಬಿಟ್ಟಿದ್ದಾರೆ.

 

 

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಆಡಲಿದೆ. ಹೇಳಿಕೇಳಿ ಐಪಿಎಲ್ ನಲ್ಲಿ ಬೆಂಗಳೂರು ಮತ್ತು ಚೆನ್ನೈ ಸೆಣಸಾಟ ಎಂದರೆ ಎಲ್ಲರಿಗೂ ಹೆಚ್ಚಿನ ಕುತೂಹಲ ಮತ್ತು ಕ್ರೇಜ್ ಇರುತ್ತದೆ. ಹೀಗಾಗಿ ಎರಡೂ ತಂಡಗಳ ಅಭಿಮಾನಿಗಳು ಪಂದ್ಯ ಆರಂಭಕ್ಕೂ ಮುನ್ನವೇ ಭಾನುವಾರದ ಪಂದ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗಳನ್ನು ಮಾಡಲು ಆರಂಭಿಸಿದ್ದರು.

 

 

ಮೊನ್ನೆ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ತಂಡ 18 ರನ್ ಗಳ ಗೆಲುವು ಸಾಧಿಸಿದ ಬಳಿಕ ಚೆನ್ನೈ ಅಭಿಮಾನಿಗಳು ಭಾನುವಾರ ಇದೇ ಪರಿಸ್ಥಿತಿ ಆರ್ ಸಿಬಿ ತಂಡಕ್ಕೆ ಬರಲಿದೆ ಎಂದು ಟ್ರೋಲ್ ಮಾಡಿದ್ದರು. ಇದು ಜರುಗಿದ ಒಂದೇ ದಿನಕ್ಕೆ ಆರ್ ಸಿಬಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಹತ್ತು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಹೀಗಾಗಿ ಆರ್ ಸಿಬಿ ಅಭಿಮಾನಿಗಳು ಸಿಎಸ್ ಕೆ ಅಭಿಮಾನಿಗಳಿಗೆ ಮರು ಚಾಲೆಂಜ್ ಎಸೆದಿದ್ದಾರೆ. ಪುನೀತ್ ಅಭಿನಯದ ಯುವರತ್ನ ಚಿತ್ರದ ಸ್ಟಿಲ್ ಒಂದನ್ನು ಬಳಸಿ ಅದರಲ್ಲಿ ಆರ್ ಸಿ ಬಿ ಜೆರ್ಸಿ ಬಳಸಿ ಭಾನುವಾರ ನಿಮಗೂ ಇದೇ ಪರಿಸ್ಥಿತಿ ಬರಲಿದೆ ಕಾಯುತ್ತಾ ಇದ್ದೇವೆ ಬನ್ನಿ ಎಂದು ಓಪನ್ ಚಾಲೆಂಜ್ ಎಸೆದಿದ್ದಾರೆ ಆರ್ ಸಿಬಿ ಅಭಿಮಾನಿಗಳು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾನುವಾರ ನಡೆಯಲಿರುವ ಐಪಿಎಲ್ ಮಿನಿ ಯುದ್ಧಕ್ಕೆ ಆರ್ ಸಿಬಿ ಅಭಿಮಾನಿಗಳು ಆಹ್ವಾನ ನೀಡಿದ್ದಾರೆ.

LEAVE A REPLY

Please enter your comment!
Please enter your name here