ಟೀಮ್ ಇಂಡಿಯಾದಲ್ಲಿ ಅಬ್ಬರಿಸಲು ಹೊಸಬರ ನಡುವೆ ಪೈಪೋಟಿ ನಡೀತ ಇದೆ. ಒಬ್ಬರಿಗಿಂತ ಒಬ್ಬರು ಸಾಲೀಡ್ ಪರ್ಫೋರ್ಮೆನ್ಸ್ ನೀಡುತ್ತಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಏನೋ ಸಿಕ್ಕಾಪಟ್ಟೆ ಬಲಾಢ್ಯವಾಗುತ್ತಿದೆ.
ಇದೀಗ ಕನ್ನಡಿಗ ಕೆ.ಎಲ್ ರಾಹುಲ್ ಬರೀ ಬ್ಯಾಟಿಂಗ್ ನಲ್ಲಿ ಮಾತ್ರವಲ್ಲದೆ ವಿಕೆಟ್ ಕೀಪಿಂಗಲ್ಲೂ ಸಖತ್ ಪ್ರದರ್ಶನ ನೀಡುತ್ತಿದ್ದಾರೆ. ಇದು ಯುವ ಬ್ಯಾಟ್ಸ್ ಮನ್ ಗಳಿಗಿಂತ ವಿಕೆಟ್ ಕೀಪರ್ ಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಮುಖ್ಯವಾಗಿ ರಿಷಭ್ ಪಂತ್ ಗಂತೂ ಹೇಳಿಕೊಳ್ಳದ ತಲೆಬಿಸಿ ಶುರುವಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಪಂತ್ ಗಾಯಗೊಂಡಿದ್ದರಿಂದ ರಾಹುಲ್ ವಿಕೆಟ್ ಕೀಪಿಂಗ್ ಜವಬ್ದಾರಿಯನ್ನು ನಿಭಾಯಿಸಿದರು. ನ್ಯೂಜಿಲೆಂಡ್ ವಿರುದ್ಧ ಸದ್ಯ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲೂ ರಾಹುಲ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ನನಗೆ ಬ್ಯಾಟಿಂಗ್ ಮತ್ತು ಕೀಪಿಂಗ್ ಎರಡೂ ಇಷ್ಟ ಎನ್ನುವ ರಾಹುಲ್ , ರಿಷಬ್ ಪಂತ್ ಕಮ್ ಬ್ಯಾಕ್ ನನ್ನಲ್ಲಿಲ್ಲ ಎಂದಿದ್ದಾರೆ. ಕ್ಯಾಪ್ಟನ್ ಕೊಹ್ಲಿ ಕೂಡ ರಾಹುಲ್ ಅನ್ನು ಹಾಡಿ ಹೊಗಳುತ್ತಿದ್ದಾರೆ. ಹೀಗಾಗಿ ಪಂತ್ ಫುಲ್ ಟೆನ್ಷನ್ ನಲ್ಲಿದ್ದಾರೆ.