ಕುಮಾರಸ್ವಾಮಿಯವರು ಆರೋಗ್ಯವಂತರಾಗಿ ಬರಲಿ ಚರ್ಚೆ ಮಾಡೋಣ !

0
44

ಬೆಂಗಳೂರು: ಕುಮಾರಸ್ವಾಮಿಯವರಿಗೆ ಆರೋಗ್ಯ ಸರಿಯಿಲ್ಲ, ಶಸ್ತ್ರಚಿಕಿತ್ಸೆಗಾಗಿ ತೆರಳಿದ್ದಾರೆ, ಆವರು ಬೇಗ ಗುಣಮುಖರಾಗಲಿ ಅಂತ ಹಾರೈಸುತ್ತೇನೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರಿಗೆ ಆರೋಗ್ಯ ಸರಿಯಿಲ್ಲ, ಶಸ್ತ್ರಚಿಕಿತ್ಸೆಗಾಗಿ ತೆರಳಿದ್ದಾರೆ, ಆವರು ಬೇಗ ಗುಣಮುಖರಾಗಲಿ ಅಂತ ಹಾರೈಸುತ್ತೇನೆ ಎಂದ ಸುರೇಶ್ ಜೆಡಿಎಸ್ ನಾಯಕ ವಾಪಸ್ಸು ಬಂದ ಬಳಿಕ ರಾಜಕಾರಣದ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದರು.
ರಾಜಕೀಯದಲ್ಲಿ ಎದುರಾಳಿಗಳು ಪ್ರಬಲವಾಗಿರಬೇಕು ಆಗಲೇ ರಾಜಕಾರಣ ಆಸಕ್ತಿಕರ ಮತ್ತು ಕುತೂಹಲಕಾಗಿಯಾರುತ್ತದೆ, ಅವರ ಎಲ್ಲ ಪ್ರಶ್ನೆಗಳಿಗೆ ಸ್ವಾಗತ, ಕುಮಾರಸ್ವಾಮಿಯವರು ಆರೋಗ್ಯವಂತರಾಗಿ ಬರಲಿ ಚರ್ಚೆ ಮಾಡೋಣ ಎಂದು ಸುರೇಶ್ ಹೇಳಿದರು. ಹೆಚ್ ಡಿ ಕುಮಾರಸ್ವಾಮಿ ಎರಡು ದಿನಗಳ ಅವಧಿಯಲ್ಲಿ ಸುಮಾರು 4 ಲಕ್ಷ ಕುಕ್ಕರ್ ಗಳನ್ನು ಆರೋಪಿಸಿ ಪೋಟೋ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದ್ದರು.