No menu items!
12.3 C
Munich
Thursday, April 30, 2026

ಪ್ರಪಂಚ ಎಷ್ಟೊಂದು ವಿಸ್ಮಯಗಳ ಆಗರ..! ಇಲ್ಲೆಲ್ಲಾ ಒಂದ್ಸಲ ಆದ್ರೂ ಸುತ್ಬೇಕು ರೀ…!

Must read

ಪ್ರಪಂಚ ಎಷ್ಟೊಂದು ವಿಸ್ಮಯಗಳ ಆಗರ..! ಇಲ್ಲೆಲ್ಲಾ ಒಂದ್ಸಲ ಆದ್ರೂ ಸುತ್ಬೇಕು ರೀ…!

ಪ್ರಪಂಚವೇ ವಿಸ್ಮಯಗಳ ಆಗರ. ಎಷ್ಟೋ ವಿಸ್ಮಯ, ಅಚ್ಚರಿಯ ತಾಣಗಳು ನಮ್ಮ ನಡುವೆ ಇವೆ. ಅಂಥಾ ಕೆಲವು ತಾಣಗಳ ಪರಿಚಯ ಇಲ್ಲಿದೆ.

ಲಿವಿಂಗ್ ರೂಟ್ ಬ್ರಿಡ್ಜ್ : ನಮ್ಮ ಭಾರತದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾಗಿರುವ ಮೇಘಾಲಯ ರಾಜ್ಯದ ಚಿರಾಪುಂಜಿಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಸೇತುವೆ .. ! ಈ ಸೇತುವೆ ನಿಸರ್ಗ ನಿರ್ಮಿತ ..! ಇದನ್ನು ಲಿವಿಂಗ್​ ರೂಟ್​ ಬ್ರಿಡ್ಜ್​​ ಅಂತಾರೆ. ಈ ಲಿವಿಂಗ್ ಬ್ರಿಡ್ಜ್​ ಜಗತ್ತಿನಲ್ಲೆ ಅದ್ಭುತವಾದ ತಾಣವಾಗಿದೆ . ಮರದ ಬೇರುಗಳಿಂದ ತೂಗು ಸೇತುವೆಯ ಹಾಗೆ ತನ್ನಷ್ಟಕ್ಕೆ ತಾನೆ ನಿರ್ಮಾಣಗೊಂಡಿರುವ ಈ ಸೇತುವೆಯು ಇಂದಿಗೂ ಸುತ್ತಮುತ್ತಲಿನ ಹಳ್ಳಿಗಳ ಜನರಿಂದ ನಿರ್ಭಯವಾಗಿ ಬಳಸಲ್ಪಡುತ್ತದಂತೆ ..! ನೀವು ಇದುವರೆಗೆ ಅಲ್ಲಿಗೆ ಹೋಗದೇ ಇದ್ದಲ್ಲಿ ಒಮ್ಮೆ ಆದರೆ ಭೇಟಿ ನೀಡಿ ..!


ಬ್ಯಾಲೆನ್ಸಿಂಗ್ ಬಂಡೆ  : ತಮಿಳುನಾಡಿನ ಮಹಾಬಲಿಪುರಂ ಪಟ್ಟಣದಲ್ಲಿರುವ ಹೆಚ್ಚು ಕಡಿಮೆ ಗೋಲಾಕಾರದ ಈ ಬೃಹತ್ ಬಂಡೆಯು ನಮ್ಮ ಈ ಪ್ರಕೃತಿಯ ಮತ್ತೊಂದು ಆಶ್ಚರ್ಯಗಳಲ್ಲೊಂದು. ಕೃಷ್ಣನ ಬೆಣ್ಣೆಯುಂಡೆ ಎಂದೂ ಕೂಡ ಕರೆಯಲ್ಪಡುವ ಇದು ಮಹಾಬಲಿಪುರಂನ ಸಮುದ್ರ ದಂಡೆಯ ಶಿವ ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಮತ್ತೊಂದು ಪ್ರಮುಖ ಆಕರ್ಷಣೀಯ ಕೇಂದ್ರವೂ ಆಗಿದೆ .

ಅಮರನಾಥ ಮಂಜುಗಡ್ಡೆಯ ಶಿವಲಿಂಗ : ಹಿಂದೂಗಳಿಗೆ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಅಮರನಾಥಿನ ಶಿವಲಿಂಗವು ಒಂದು ಪ್ರಕೃತಿಯ ವಿಸ್ಮಯ. ಗುಹೆಯೊಂದರಲ್ಲಿ ಶಿವಲಿಂಗದ ರೂಪದಲ್ಲಿ ಈ ಒಂದು ಮಂಜುಗಡ್ಡೆಯ ಸ್ಟಾಲಗ್ಮೈಟ್ (ಗವಿಗಂಬ) ಪ್ರತಿ ವರ್ಷ ಮೇ ನಿಂದ ಅಗಸ್ಟ್ ಅವಧಿಯವರೆಗೆ ರೂಪಗೊಳ್ಳುತ್ತದೆ.

ಚುಂಬಕ ಗುಡ್ಡ: ಲಡಾಖ್ ಲೇಹ್-ಕಾರ್ಗಿಲ್-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಮೇಲೆ ಲಡಾಖ್ ನ ಲೇಹ್ ಬಳಿಯಲ್ಲಿ ಸುಮಾರು 50 ಕಿ.ಮೀ ದೂರದಲ್ಲಿ ಈ ವಿಸ್ಮಯಕಾರಿ ಚುಂಬಕ ಗುಡ್ಡವು ನೆಲೆಸಿದೆ. ಸುತ್ತಮುತ್ತಲಿನ ಭೂದೃಶ್ಯಾವಳಿಗಳಿಂದ ದೃಷ್ಟಿ ಭ್ರಮೆಯನ್ನು ಉಂಟು ಮಾಡುವ ಈ ಗುಡ್ಡ..ವಾಹನಗಳು ಮೇಲ್ಮುಖವಾಗಿ ತನ್ನಷ್ಟಕ್ಕೆ ತಾನೆ ಚಲಿಸುವಂತೆ ಗೋಚರಿಸುತ್ತವೆ.


ಉಲ್ಕಾಗುಂಡಿ: ಮಹಾರಾಷ್ಟ್ರ ರಾಜ್ಯದ ಬುಲ್ಡಾನಾ ಜಿಲ್ಲೆಯ ಲೋನಾರ್ ಎನ್ನುವಲ್ಲಿ ಈ ಉಲ್ಕಾಗುಂಡಿ ನಿರ್ಮಾಣಗೊಂಡಿದೆ. ಪ್ಲೀಯ್‍ಸ್ಟೊಸಿನ್ ಎಪೋಕ್ ಕಾಲಮಾನದಲ್ಲಿ ನಿರ್ಮಿತವಾದ ಈ ಕೆರೆಯು ಸಲೈನ್ ನೀರನ್ನು ಹೊಂದಿದೆ. ಕೆರೆಯ ಬಳಿಯಲ್ಲಿ ವಿಷ್ಣು ದೇವರ ದೈತ್ಯ ಸೂದನ ಮತ್ತು ಕಮಾಲಾ ಜಿ ದೇವಸ್ಥಾನಗಳನ್ನು ಕಾಣಬಹುದು.


ಬೊರ್‍ರಾ ಗುಹೆಗಳು: ಆಂಧ್ರಪ್ರದೇಶದ ಅನಂತಗಿರಿ ಪರ್ವತ ಶ್ರೇಣಿಯ ಅರಕು ಕಣಿವೆಯಲ್ಲಿ ಈ ಅಚ್ಚರಿ ಆಗರ ಪ್ರಾಕೃತಿಕ ಗುಹೆಗಳು ಇಲ್ಲಿವೆ. ಭಾರತದಲ್ಲಿ ಕಂಡುಬರುವ ಅತಿ ಆಳವಾದ ಗುಹೆ ಇದಾಗಿದ್ದು ಸುಮಾರು 80 ಮೀ. ಆಳವನ್ನು ತಲುಪುತ್ತದೆ.


ಬಿಸಿ ನೀರಿನ ಬುಗ್ಗೆಗಳು: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪಾರ್ವತಿ ಕಣಿವೆಯಲ್ಲಿರುವ ಮಣೀಕರಣವು ಒಂದು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವುದೂ ಅಲ್ಲದೆ ಪ್ರಾಕೃತಿಕವಾಗಿ ನಿರ್ಮಾಣಗೊಂಡ ಬಿಸಿ ನೀರಿನ ಬುಗ್ಗೆಗಳಿಗೆ ಮನೆಯೂ ಇದಾಗಿದ್ದು, ವಿಸ್ಮಯ ತಾಣಗಳಲ್ಲೊಂದು  .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article