ಮಹಾರಾಷ್ಟ್ರದಲ್ಲಿ ಮತ್ತೆ ಬಾಲ ಬಿಚ್ಚಿದ MES ಪುಂಡರು

0
55

ಮಹಾರಾಷ್ಟ್ರದಲ್ಲಿ ಎಂಇಎಸ್​ ಪುಂಡರ ಹಾವಳಿ ಮತ್ತೆ ಹೆಚ್ಚಾಗಿದೆ. ಮುಂಬೈನಿಂದ ಕಲಬುರಗಿಗೆ ಬರುತ್ತಿದ ಕರ್ನಾಟಕ ಸಾರಿಗೆ ಬಸ್ ತಡೆದ ಪುಂಡರು, ಬಸ್​ಗೆ ಕಪ್ಪು ಮಸಿ ಬಳೆದು, ಬಸ್ ಮುಂಭಾಗದಲ್ಲಿ ಎಂಇಎಸ್ ಧ್ವಜ ನೆಟ್ಟಿದ್ದಾರೆ. ನಂತರ ಚಾಲಕನ ಕೈಗೆ ಎಂಇಎಸ್ ಧ್ವಜ ಕೊಟ್ಟು ಜೈ ಶಿವಾಜಿ ಅಂತ ಬಲವಂತವಾಗಿ ಘೋಷಣೆ ಕೂಗಿಸಿದ್ದಾರೆ.

ಅಲ್ಲದೆ ಕೆಲ ಬಸ್​ಗಳ ಮೇಲೆ ಜೈ ಮಹಾರಾಷ್ಟ್ರ, ಕನ್ನಡ ನಿಷೇಧ ಅಂತೆಲ್ಲಾ ಬರೆದಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಜಗಳ ಮತ್ತೆ ಮುಂದುವರಿಕೆಯನ್ನು ಪಡೆದುಕೊಂಡಿದ್ದು, ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳೆಯುವ ಮೂಲಕ ಈ ಹಿಂದೆ ಕರ್ನಾಟಕದ ಬಾವುಟವನ್ನು ಮಹಾರಾಷ್ಟ್ರದಲ್ಲಿ ಸುಟ್ಟು ಹಾಕಿದ್ದರ ಸೇಡನ್ನು ಕನ್ನಡಿಗರು ತೀರಿಸಿಕೊಂಡಿದ್ದರು. ಇದೀಗ ಕರ್ನಾಟಕ ಬಸ್ ಗೆ ಮಸಿ ಬಳಿದು ಕಿಡಿಗೇಡಿತನ ಮೆರೆದಿರುವ ಮಹಾರಾಷ್ಟ್ರಕ್ಕೆ ಕರ್ನಾಟಕದಲ್ಲಿ ಸಿಕ್ಕುವ ವಾಹನಗಳನ್ನು ತಡೆದು ಕನ್ನಡಿಗರು ಮಸಿ ಬಳಿದು ಉತ್ತರ ನೀಡುವುದು ಕಟ್ಟಿಟ್ಟ ಬುತ್ತಿ.

LEAVE A REPLY

Please enter your comment!
Please enter your name here