No menu items!
12.4 C
Munich
Wednesday, April 29, 2026

ಮೂಗಿಗೆ ನಿಂಬೆ ರಸ ಹಾಕಿಸಿಕೊಂಡಿದ್ದಕ್ಕೆ ಶಿಕ್ಷಕ ಸಾವು?

Must read

ರಾಯಚೂರು: ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲ ದಿನಗಳ ಹಿಂದೆ ವೈರಲ್ ಆಗಿದ್ದ ಲಿಂಬೆ ಹಣ್ಣಿನ ಹನಿ ಕುರಿತಾದ ಸುದ್ದಿ ಕೇಳಿ ಜಿಲ್ಲೆಯ ಶಿಕ್ಷಕರೊಬ್ಬರು ಮೂಗಿನೊಳಗೆ ನಿಂಬೆಹಣ್ಣಿನ ಹನಿ ಬಿಟ್ಟುಕೊಂಡು ಇದೀಗ ಸಾವನ್ನಪ್ಪಿದ್ದಾರೆ.

ರಾಯಚೂರು ಜಿಲ್ಲೆ ಸಿಂಧನೂರು ನಗರದ ಶರಣಬಸವೇಶ್ವರ ಕಾಲೋನಿಯ ಶಾಲಾ ಶಿಕ್ಷಕ ಬಸವರಾಜ್ ಮೃತ ದುರ್ದೈವಿ. ಮೂಗಿನಲ್ಲಿ ನಿಂಬೆಹಣ್ಣಿನ ಹನಿ ಬಿಟ್ಟುಕೊಂಡರೆ ಕೊರೊನಾ ಬರುವುದಿಲ್ಲ ಎಂದುಕೊಂಡು ಬಸವರಾಜ್ ಅವರು ಬೆಳಗ್ಗೆ ಮೂಗಿಗೆ ನಿಂಬೆಹಣ್ಣಿನ ಹನಿ ಬಿಟ್ಟು ಕೊಂಡಿದ್ದರು. ನಂತರ ಕೆಲಸಮಯಗಳ ಬಳಿಕ ಬಸವರಾಜ್ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ ಕೂಡಲೇ ಸಂಬಂಧಿಕರು ಅಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆ ಮಾರ್ಗ ಮಧ್ಯದಲ್ಲೇ ಬಸವರಾಜ್ ಕೊನೆಯುಸಿರೆಳೆದಿದ್ದಾರೆ.

ಆರೋಗ್ಯದಿಂದಿದ್ದ ಬಸವರಾಜ್ ಅವರು ನಿಂಬೆಹಣ್ಣಿನ ರಸ ಮೂಗಿಗೆ ಬಿಟ್ಟು ಕೊಂಡ ಬಳಿಕ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದಾಗಿ ನಿಂಬೆ ಹಣ್ಣಿನ ರಸದಿಂದಾಗಿ ಸಾವನ್ನಪ್ಪಿರಬಹುದೆಂದು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಆರೋಗ್ಯದಿಂದಿದ್ದ ಬಸವರಾಜ್ ಅವರು ನಿಂಬೆಹಣ್ಣಿನ ರಸ ಮೂಗಿಗೆ ಬಿಟ್ಟು ಕೊಂಡ ಬಳಿಕ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದಾಗಿ ನಿಂಬೆ ಹಣ್ಣಿನ ರಸದಿಂದಾಗಿ ಸಾವನ್ನಪ್ಪಿರಬಹುದೆಂದು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article