No menu items!
12.4 C
Munich
Saturday, May 30, 2026

ಸಾಲ ಮಾಡುವುದೇ ಸಿದ್ದರಾಮಯ್ಯನವರ ಮೂಲ ಉದ್ದೇಶವಾಗಿದೆ: ಜಗದೀಶ್‌ ಶೆಟ್ಟರ್‌

Must read

ಸಾಲ ಮಾಡುವುದೇ ಸಿದ್ದರಾಮಯ್ಯನವರ ಮೂಲ ಉದ್ದೇಶವಾಗಿದೆ: ಜಗದೀಶ್‌ ಶೆಟ್ಟರ್‌

ಹುಬ್ಬಳ್ಳಿ: ಸಾಲ ಮಾಡುವುದೇ ಸಿದ್ದರಾಮಯ್ಯನವರ ಮೂಲ ಉದ್ದೇಶವಾಗಿದೆ ಎಂದು ಬಿಜೆಪಿ ಸಂಸದ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಾಲ ಮಾಡುವುದೇ ಸಿದ್ದರಾಮಯ್ಯನವರ ಮೂಲ ಉದ್ದೇಶವಾಗಿದೆ.
ಬರೋಬ್ಬರಿ 7.50 ಲಕ್ಷ ಕೋಟಿ ರೂ.ನಷ್ಟು ಅಗಾಧ ಮೊತ್ತದ ಸಾಲದ ಹೊರೆಯನ್ನು ರಾಜ್ಯದ‌ ಜನರ ಮೇಲೆ ಹೇರಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಈ ಬಾರಿಯ ಬಜೆಟ್‌ನಲ್ಲಿ ಹಿಂದೂಗಳಿಗೆ ದ್ರೋಹ ಮಾಡಿದ್ದಾರೆ. ಹಿಂದೂಗಳು ಈ ರಾಜ್ಯದಲ್ಲಿ ತೆರಿಗೆಯನ್ನೇ ಕಟ್ಟುವುದಿಲ್ಲವೇನೋ ಎಂಬಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರ ವರ್ತಿಸುತ್ತಿದೆ. ಇನ್ನೆಷ್ಟು ದಿನ ಕಾಂಗ್ರೆಸ್‌ನವರು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಾರೆ..?” ಎಂದು ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.

- Advertisement -spot_img

More articles

- Advertisement -spot_img

Latest article