ಸೀತೆ ಜಿಂಕೆ- ಹಸುವಿನ ಮಾಂಸವನ್ನ ತುಪ್ಪದಲ್ಲಿ ಹುರಿದು ತಿಂದಿದ್ದಾರೆ..! ವಿವಾದಾತ್ಮಕ ಹೇಳಿಕೆ ನೀಡಿದ ಕಲೈಸೆಲ್ವಿ..!!
ಒಬ್ಬರಾದ ಮೇಲೆ ಒಬ್ಬರಂತೆ ಹಿಂದು ಧರ್ಮದ ಆಚಾರ ವಿಚಾರಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನ ನೀಡುತ್ತ ಬರುತ್ತಿದ್ದಾರೆ.. ಈ ಹಿಂದೆ ರಾಮನ ಕುರಿತು ವಿವಾದಾತ್ಮಕ ಹೇಳಿಕೆ ಬೆನ್ನೆಲ್ಲೇ ಇದೀಗ ಪೆರಿಯರ್ವಾದಿ ಚಿಂತಕಿ ಕಲೈಸೆಲ್ವಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ..
ರಾಮನ ಸತಿ ಸೀತೆ ಅರಣ್ಯಕಾಂಡದಲ್ಲಿದ್ದಾಗ ದನದ ಮಾಂಸವನ್ನ ಹಸುವಿನ ತುಪ್ಪದಲ್ಲಿ ಹುರಿದು ತಿಂದಿದ್ದಾರೆ..ಆಕೆಗೆ ಜಿಂಕೆ ಮಾಂಸವೆಂದ್ರೆ ತುಂಬ ಇಷ್ಟ.. ಅವರೆಲ್ಲ ಈಗೇನಾದ್ರು ಇದ್ದಿದ್ರೆ ಕಾನೂನು ರೀತಿ ಅವರನ್ನ ಜೈಲಿಗೆ ಕಳುಹಿಸಬೇಕಿತ್ತು.. ಜಿಂಕೆ ಮಾಂಸ ತಿನ್ನುವುದು ಈಗ ಕಾನೂನು ಬಾಹಿರ.. ಹೀಗಾಗೆ ಅವರನ್ನ ಜೈಲಿಗೆ ಅಟ್ಟುತಿದ್ರು ಎಂದಿದ್ದಾರೆ..