ಅಪ್ಪ, ಗಂಡನ ವಿರೋಧವನ್ನು ಲೆಕ್ಕಿಸದೆ ಆಟೋ ಡ್ರೈವರ್ ಆದ ಮಹಿಳೆ..!

Date:

`ಹುಟ್ಟಿದ್ರೆ ಗಂಡು ಮಕ್ಕಳೇ ಹುಟ್ಟಬೇಕು..! ವಯಸ್ಸಾದ ಮೇಲೆ ನಮ್ಮನ್ನು ನೋಡಿಕೊಳ್ಳೋರು ಗಂಡು ಮಕ್ಕಳೇ..’ ಅನ್ನೋ ಮನೋಭಾವ ನಮ್ಮಲ್ಲಿ ಕೆಲವರಿಗೆ ಇವತ್ತಿಗೂ ಇದೆ. ಹೆಣ್ಣುಮಕ್ಕಳು ಹೀಗೆ ಇರ್ಬೇಕು, ಹಾಗೇ ಇರ್ಬೇಕು, ಇದೇ ಕೆಲಸ ಮಾಡ್ಬೇಕು, ಅದೇ ಕೆಲಸ ಮಾಡ್ಬೇಕು.., ಇದು ಹೆಣ್ಮಕ್ಕಳು ಮಾಡೋ ಕೆಲಸ ಅಲ್ಲ..! ಅಂತೆಲ್ಲಾ ಏನೇನೋ ಕಟ್ಟು ಪಾಡುಗಳನ್ನು ಇವತ್ತಿಗೂ ಹೆಣ್ಣು ಮಕ್ಕಳ ಮೇಲೆ ಹೇರಲಾಗ್ತಾ ಇದೆ. ಯಾಕೆ ಸಾರ್, ಹೀಗೆ..? ಹೆಣ್ಣು ಮಕ್ಕಳು ಇವತ್ತು ಗಂಡು ಮಕ್ಕಳಿಗಿಂತ ಯಾವುದರಲ್ಲಿ ಕಡಿಮೆ ಇದ್ದಾರೆ..?! ಗಂಡು ಮಕ್ಕಳು ಮಾಡೋ ಕೆಲಸವನ್ನೆಲ್ಲಾ ಮಾಡ್ತಾ ಇದ್ದಾರೆ..! ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡೋದು ಬಿಟ್ಟಾಕಿ, ಬಸ್ ಡ್ರೈವರ್, ಕಂಡೆಕ್ಟರ್ ಆಗಿರೋ ಉದಾಹರಣೆ ಕೂಡ ಇದೆ. ಗಂಡು ಮಕ್ಕಳಿಗಿಂತ ಚೆನ್ನಾಗಿಯೇ ದುಡಿದು ಅಪ್ಪ ಅಮ್ಮನನ್ನು ನೋಡಿಕೊಳ್ಳೋ ಹುಡುಗಿಯರಿದ್ದಾರೆ..! ಗಂಡು ಮಕ್ಕಳೇ ನಮ್ಮನ್ನು ದುಡಿದು ಸಾಕೋ ಮಹಾನುಭಾವರು ಅನ್ನೋ ಧೋರಣೆ ಯಾರಲ್ಲಾದರೂ ಇದ್ದೆರೆ ಈ ಕೂಡಲೆ ಕಿತ್ತೆಸೆಯಿರಿ. ಈ ಸ್ಟೋರಿ ಓದಿದ ಮೇಲಾದ್ರೂ ಕೆಲವರ ಮನಸ್ಥಿತಿ ಬದಲಾದ್ರೆ ಅಷ್ಟು ಸಾಕು ಗುರೂ.., ಮತ್ತೇನು ಬೇಡ.
ಅವರು `ರೂಬಿ ಸಿಂಘಾಲ್’, ಮೂವತ್ತು ವರ್ಷ ವಯಸ್ಸಿನ ಬಡ ಮಹಿಳೆ. ಉತ್ತರ ಪ್ರದೇಶದವರು. ಮನೆಯಲ್ಲಿ ಸಿಕ್ಕಾಪಟ್ಟೆ ಹಣಕಾಸು ತೊಂದರೆ. ಏನೇ ಕೆಲಸ ಮಾಡಿದ್ರೂ ಹಣಕಾಸು ಸಮಸ್ಯೆ ಮಾತ್ರ ಬಗೆಹರಿಯುವ ತರ ಕಾಣ್ತಾ ಇಲ್ಲ..! ಮನೆಯಲ್ಲಿ ಯಾರು ಎಷ್ಟೇ ದುಡಿದರೂ ಬಿಡಿಗಾಸು ಉಳಿಸೋಕೆ ಆಗ್ತಾ ಇಲ್ಲ..! ಆಗ ರೂಬಿ ಸಿಂಘಾಲ್ ಒಂದು ನಿರ್ಧಾರಕ್ಕೆ ಬರ್ತಾರೆ..! ಆಕೆಯ ನಿರ್ಧಾರಕ್ಕೆ ಗಂಡ ಮತ್ತು ತಂದೆ ಇಬ್ಬರೂ ಕೂಡ ವಿರೋಧ ಮಾಡ್ತಾರೆ..! ರೂಬಿ ಮೇಲೆ ಅವರಿಬ್ಬರೂ ಕೋಪ ಮಾಡ್ಕೊಳ್ತಾರೆ..! ಆದ್ರೂ ಇವರು ಮಾತ್ರ ಇವರ ಅಚಲ ನಿರ್ಧಾರದಿಂದ ಹಿಂದೆ ಸರಿಯಲೇ ಇಲ್ಲ..! ಏನು ಮಾಡ್ಬೇಕು ಅಂತ ಅಂದಕೊಂಡಿದ್ರೂ ಅದನ್ನು ಸಾಧಿಸಿಯೇ ಬಿಡ್ತಾರೆ..! ತಂದೆ ಅಂತೂ `ನೀನು ಮನೆಗೆ ಬರಬೇಡ’ ಅಂತ ಬೈದು ಕಳುಹಿಸ್ತಾರೆ..! ನಾನು ಪುನಃ ಮನೆಗೆ ಬರಲ್ಲ..! ಆದರೆ ನನ್ನ ನಿರ್ಧಾರವನ್ನೂ ಬದಲಾಯಿಸಲ್ಲ..! ನನ್ನ ನಿರ್ಧಾರದಿಂದ ನನ್ನ ಕುಟುಂಬಕ್ಕೇ ಒಳ್ಳೆಯದಾಗುತ್ತೆ ಅಂತ ಸ್ಪಷ್ಟ ನಿಲುವನ್ನು ತಾಳ್ತಾರೆ..! ಅಪ್ಪ, ಗಂಡ ಸಪೋರ್ಟ್ ಮಾಡ್ದೇ ಇದ್ರೆ ಏನಂತೆ..?! ಈ ರೂಬಿ ಸಿಂಘಾಲ್ ಗೆ ಸಹೋದರ ಬೆಂಬಲ ಕೊಡ್ತಾರೆ..! ಸಹೋದರ ಹಣದ ಸಹಾಯವನ್ನು ಮಾಡಿದ್ದರಿಂದ ಆ ದುಡ್ಡಲ್ಲಿ ತಾನು ಇಷ್ಟಪಟ್ಟಂತೆ ಆಟೋ ರಿಕ್ಷಾ ತಗೊಂಡು ಆಟೋ ಚಾಲಕಿ ಆಗಿ ಬಿಡ್ತಾರೆ..! ಎಲ್ಲರೂ ನಿಬ್ಬೆರಗಾಗುವಂತೆ ಆಟೋ ಚಾಲಕಿ ಆಗಿಯೇ ಬಿಟ್ಟರು..!
ರೂಬಿ ಆಟೋ ಓಡಿಸೋದು ಅಪ್ಪ ಮತ್ತು ಗಂಡನಿಗೆ ಇಷ್ಟವಿರ್ಲಿಲ್ಲ..! ಆದ್ರೂ ರೂಬಿ ಫ್ಯಾಮಿಲಿ ಕಷ್ಟಕ್ಕೆ ನಾನೂ ಸಾಥ್ ನೀಡ್ಬೆಕು ಅಂತ ಆಟೋ ರಿಕ್ಷಾ ಇಟ್ಟಿದ್ದಾರೆ..! ಆರು ವರ್ಷದಿಂದ `ನೋಯ್ಡಾ ಮತ್ತು ಘಾಜಿಯಾಬಬಾದ್ನಲ್ಲಿ ಆಟೋರಿಕ್ಷವನ್ನು ಓಡಿಸ್ತಾ ಜೀವನ ಸಾಗಿಸ್ತಾ ಇದ್ದಾರೆ..! ಈ ಪ್ರದೇಶದಲ್ಲಿ ಆಟೋ ಓಡಿಸ್ತಾ ಇರೋ ಮೊಟ್ಟ ಮೊದಲ ಆಟೋರಿಕ್ಷಾ ಡ್ರೈವರ್ ಇವರು..! ಅವರೇ ಹೇಳುವಂತೆ ಇವತ್ತು ಅವರೇನು ಎಂಬುದನ್ನು ಸಾಭೀತು ಪಡಿಸಿದ್ದಾರೆ..! ಪ್ರತಿಯೊಬ್ಬ ಮಹಿಳೆಯೂ ಈ ರೀತಿ ಯೋಚನೆ ಮಾಡಿದ್ರೆ ಹಣಕಾಸಿನ ಸಮಸ್ಯೆಯಿಂದ ಹೊರ ಬರಬಹುದು ಅಂತಾರೆ ರೂಬಿ ಸಿಂಘಾಲ್..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಭಾರತದ ಕಿರಿಯ ಪಿ.ಎಚ್.ಡಿ. ಸ್ಟೂಡೆಂಟ್ `ಸುಷ್ಮಾ ವರ್ಮಾ..’! 15 ವರ್ಷದ ಈ ಬಾಲಕಿಯ ಅಪ್ಪ ದಿನಗೂಲಿ ಕಾರ್ಮಿಕರು ಇವಳು ಪಿ.ಎಚ್.ಡಿ. ಸ್ಟೂಡೆಂಟ್..!

ನೂರು ವರ್ಷದ ನಂತರ ಕನ್ನಡ ಹೇಗಿರುತ್ತೆ ಗೊತ್ತಾ..? ಕಿರಿಕ್ ಕೀರ್ತಿ ಸ್ಟೈಲಲ್ಲಿ ಅಆಇಈ ಕಲಿಕೆ..!

ಆಸ್ಟ್ರೇಲಿಯಾದ ಅಡಿಲೇಡ್ ನ ದೊಡ್ಡ ಸಾಫ್ಟ್ ವೇರ್ ಕಂಪನಿಯ ಕೆಲಸ ಬಿಟ್ಟು ಬಂದು ರೈತನಾದ..! ಅಷ್ಟಕ್ಕೂ ಸಾಫ್ಟ್ ವೇರ್ ಕೆಲಸ ಯಾಕೆ ಬಿಟ್ರು ಗೊತ್ತಾ..?

ತನಗಿಂತ ಮೂರು ವರ್ಷ ಚಿಕ್ಕವನಾದ ಹುಡುಗನ್ನು ಪ್ರೀತಿಸಿ ಮದುವೆಯಾದಳು..!

ಎರಡು ಮುಖವುಳ್ಳ ಮಾನವನನ್ನು ಕಂಡಿದ್ದೀರಾ..?

12,000 ಹುಡುಗಿಯರನ್ನು ಲೈಂಗಿಕ ಗುಲಾಮಗಿರಿಯಿಂದ ಕಾಪಾಡಿದ ತಾಯಿ..! ಇವರು ಕಟ್ಟಿದ `ತಾಯಿಮನೆ’ ಸಂತ್ರಸ್ತರ ತವರು ಮನೆ..!

ಅಂದು ಅಮ್ಮ ಇಲ್ಲದಿದ್ದರೆ ಹೇಗಿರುತ್ತಿತ್ತು ಗೊತ್ತಾ..? ಅಪ್ಪ ಎಂಬ ಗುಮ್ಮ ಕೊನೆಗೂ ಹೀರೋ ಆದ

ಹುಚ್ಚ ವೆಂಕಟನ ಈ ಇಂಟರ್ವ್ಯೂ ನೋಡಿದೀರಾ..? ಅಯ್ಯೋ ಸಖತ್ ಮಜಾ ಇದೆ.. ನೋಡಿ…

ನಿಮ್ಮ ಪ್ರಕಾರ ಬಿಗ್ ಬಾಸ್ ಗೆಲ್ಲೋರು ಯಾರು..? ಈಗಲೇ ಕಮೆಂಟ್ ಮಾಡಿ, ಓಟ್ ಮಾಡಿ..!

 ತಾಳಿ ಕಟ್ಟಿದ ಐದೇ ನಿಮಿಷಕ್ಕೆ ತಾಳಿ ಕಿತ್ತು ವಾಪಸ್ ಕೊಟ್ಟ ವಧು..! ಅಷ್ಟಕ್ಕೂ ಅವಳು ಆ ನಿರ್ಧಾರ ಮಾಡಿದ್ದು ಯಾಕೆ ಗೊತ್ತಾ..?

 ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ..

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...