ಪ್ರೆಸೆಂಟ್ ಸಾರ್..! ಕನ್ನಡದ ಕಿರುಚಿತ್ರ. ಈಗ ತಾನೇ ನೋಡಿ ಕಣ್ಣಲ್ಲಿ ನೀರು ತುಂಬಿದೆ. ಕನ್ನಡ ಶಾಲೆಗಳ ಪರಿಸ್ಥಿತಿ ಹೀಗಾಗಿಬಿಡ್ತಾ ಅಂತ ನೋವಾಗ್ತಿದೆ. ಕನ್ನಡ ಶಾಲೆಗಳ ಪರಿಸ್ಥಿತಿ, ದುಸ್ಥಿತಿಯ ಕುರಿತ ಒಂದು ಅದ್ಭುತ ಕಿರುಚಿತ್ರ ಅಂದ್ರೆ ಅತಿಶಯೋಕ್ತಿ ಅಲ್ಲ..! ಸುಮ್ಮನೆ ನೋಡಿಸಿಕೊಂಡು ಹೋಗೋ ಈ ಚಿತ್ರ ಕೊನೆಯಲ್ಲಿ ಕಣ್ಣಲ್ಲಿ ನೀರು ತುಂಬಿಸಿಬಿಡೋದ್ರಲ್ಲಿ ಅನುಮಾನವಿಲ್ಲ..! ಗಡಿನಾಡಿನ ಶಾಲೆಗಳು ಮಕ್ಕಳಿಲ್ಲದೇ ಹೇಗೆ ಮುಚ್ಚಲ್ಪಡುತ್ತಿವೆ ಅನ್ನೋದನ್ನು ತುಂಬ ಚೆನ್ನಾಗಿ ತೋರಿಸಿದ್ದಾರೆ ಆಕರ್ಶ ಕಮಲ. ಮೇಷ್ಟ್ರು ಪಾತ್ರದಲ್ಲಿ ಕಾಣಿಸಿಕೊಂಡಿರೋ ಗೋಪಾಲಕೃಷ್ಣ ದೇಶಪಾಂಡೆ ಅತ್ಯದ್ಭುತವಾಗಿ ನಟಿಸಿದ್ದಾರೆ. ನವೀನ್ ಸಾಗರ್ ಚಿತ್ರಕತೆ ಹಾಗೂ ಸಂಭಾಷಣೆ ನಿಜಕ್ಕೂ ಅದ್ಫುತವಾಗಿದೆ. ಗಾಯಕಿ ಸ್ಪರ್ಶ ಆರ್.ಕೆ ಅವರು ಈ ಚಿತ್ರದ ಸಹನಿರ್ದೇಶನದ ಕೆಲಸವನ್ನು ನವೀನ್ ಸಾಗರ್ ಜೊತೆ ಮಾಡೋದರ ಜೊತೆಗೆ ಅಲ್ಲಲ್ಲಿ ಕಿವಿಗೆ ಬೀಳೋ ಅವರ ಗಾಯನ ತುಂಬ ಕಾಡುತ್ತೆ..! ಕುಮಾರ್ ಗೌಡ ನಾಗವಾರ ಅವರ ಛಾಯಾಗ್ರಹಣ ಹಾಗೂ ವಿಕಾಸ್ ವಸಿಷ್ಠ ಅವರ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್. ಮೂಲ ಫ್ರೆಂಚ್ ಭಾಷೆಯ `ಲಾಸ್ಟ್ ಲೆಸನ್’ ಕಥೆಯನ್ನು ಕನ್ನಡಕ್ಕೆ ಅಚ್ಚುಕಟ್ಟಾಗಿ ತಂದಿದ್ದಾರೆ ಕೇಶವ ಮುಳಗಿಯವರು..! ಒಟ್ಟಾರೆ ಚಿತ್ರದಲ್ಲಿ ಎಲ್ಲವೂ ಇದೆ.. ಕನ್ನಡ ಅಭಿಮಾನ, ಕನ್ನಡ ಶಾಲೆಗಳ ಪರಿಸ್ಥಿತಿ, ಕನ್ನಡ ಶಿಕ್ಷಕನ ನೋವು, ಗಡಿನಡಿನಲ್ಲಿ ಕನ್ನಡದ ಪರಿಸ್ಥಿತಿ, ಎಲ್ಲವೂ..! ತಪ್ಪದೇ ನೋಡಿ.. ನೀವಿದನ್ನು ನೋಡಲೇಬೇಕು..!
Present Sir – (2015) | Kannada Short Film :
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!
ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!
ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….
ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!
ಇಂಗ್ಲೆಂಡಿನಲ್ಲಿ `ಇಮ್ರಾನ್ ಖಾನ್’ರನ್ನು ಹೊಗಳಿದ ನರೇಂದ್ರ ಮೋದಿ..! ಆ ಇಮ್ರಾನ್ ಖಾನ್ ಯಾರುಗೊತ್ತೇ..?!
ಕರ್ನಾಟಕ ಸರ್ಕಾರಕ್ಕೆ ಜನಸಾಮಾನ್ಯನ ಪ್ರಶ್ನೆಗಳು..! ಕನಿಷ್ಟ ಕಾಕತಾಳೀಯ ಅಂತಾದ್ರೂ ಹೇಳಿ..! ಸಮಾಧಾನ ಮಾಡ್ಕೋತೀವಿ..!
ಊಟಕ್ಕೆ ಆರ್ಡರ್ ಮಾಡಿದವಳು ಬೆಂಗಳೂರನ್ನೇ ಬಿಟ್ಟು ಹೋಗಿದ್ದೇಕೆ..?
ಕನ್ನಡ ನಾಡು, ನುಡಿಯ ಬಗ್ಗೆ ಗೊತ್ತೇ ಇಲ್ಲದವರು ಬೆಂಗಳೂರಲ್ಲೇ ಇದ್ದಾರೆ..! ವರನಟ ಡಾ.ರಾಜಕುಮಾರ್ ಅವರನ್ನೇ ಗುರುತಿಸದವರು