ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (KIOCL) 2021-22ನೇ ಸಾಲಿನ ನೇಮಕಾತಿ ಆರಂಭಿಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಆಗಸ್ಟ್ 23, 2021ರಂದು ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದು.
ಸಂಸ್ಥೆ ಹೆಸರು: ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (ಕೆಐಒಸಿಎಲ್)
ಒಟ್ಟು ಹುದ್ದೆಗಳು: ವಿವಿಧ
ಹೆಸರು: ಸರ್ವೇಯರ್, ಸಹಾಯಕ ಸರ್ವೇಯರ್
ಉದ್ಯೋಗ ಸ್ಥಳ : ಬೆಂಗಳೂರು, ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಆಗಸ್ಟ್ 23, 2021.
ವಿದ್ಯಾರ್ಹತೆ: ಅರ್ಜಿದಾರರು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ, ಬಿ.ಇ ಹಾಗೂ ಬಿ.ಟೆಕ್ ಪದವಿ. ಸಿವಿಲ್ ಇಂಜಿನಿಯರಿಂಗ್, ಪದವಿ ನಂತರ 2 ವರ್ಷಗಳ ಅನುಭವ, ಅಥವಾ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ಜೊತೆಗೆ 4 ವರ್ಷಗಳ ಅನುಭವ ಹೊಂದಿದ್ದರೆ ಆದ್ಯತೆ. ಇದಲ್ಲದೆ ಮಾನ್ಯತೆ ಪಡೆದ ತಾಂತ್ರಿಕೇತರ ವಿಶ್ವ ವಿದ್ಯಾಲಯದಿಂದ ಶೇ 60ರಷ್ಟು ಅಂಕಗಳೊಂದಿಗೆ ಪದವಿ ಜೊತೆಗೆ 7 ವರ್ಷಗಳ ಕಾರ್ಯ ಕ್ಷೇತ್ರಗಳ ಅನುಭವ ಹೊಂದಿದ್ದರೂ ಆದ್ಯತೆ ಸಿಗಲಿದೆ.
ಇದರ ಜೊತೆಗೆ ಗಣಿಗಾರಿಕೆ ಸರ್ವೇಯರ್ ಬಗ್ಗೆ ಜ್ಞಾನ, ಆಟೋ ಕ್ಯಾಡ್ ಬಗ್ಗೆ ತಿಳುವಳಿಕೆ, ಸ್ಥಳೀಯ ಭಾಷಾ ಜ್ಞಾನ ಇರುವವರಿಗೆ ಆದ್ಯತೆ. ಸಂಬಳ ವಿವರ: 40,000 ರಿಂದ 50,000/-ರು ಪ್ರತಿ ತಿಂಗಳು.
ಸರ್ವೇಯರ್: 50,000ರು
ಸಹಾಯಕ ಸರ್ವೇಯರ್: 40, 000ರು
ವಯೋಮಿತಿ: ಗರಿಷ್ಠ ವಯಸ್ಸು 35 ವರ್ಷ(ಜೂನ್ 30, 2021ರಂತೆ)
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 03 ವರ್ಷ ಹಾಗೂ ಎಸ್ ಸಿ ಹಾಗೂ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ತನಕ ವಿನಾಯಿತಿ ಇರುತ್ತದೆ.
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ
ನೇಮಕಾತಿ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಆಯ್ಕೆ. ಆಯ್ಕೆಯಾದ ಅಭ್ಯರ್ಥಿಗಳು ಮೂರು ವರ್ಷಗಳ ಗುತ್ತಿಗೆ ಆಧಾರಿತ ನೇಮಕಾತಿಗೆ ಸಹಿ ಹಾಕಬೇಕಾಗುತ್ತದೆ.
ಪ್ರಮುಖ ದಿನಾಂಕ:
ವಾಕ್ ಇನ್ ಸಂದರ್ಶನ ದಿನಾಂಕ: 23/08/2021.
ಸಮಯ: ಬೆಳಗ್ಗೆ 9.30 ರಿಂದ 10.30 ರ ವೇಳೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ಸಂದರ್ಶನಕ್ಕೆ ಆಗಮಿಸುವುದಕ್ಕೂ ಮುನ್ನ ಅಗತ್ಯ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಹಾಜರಾಗತಕ್ಕದ್ದು.
ಹೋಟೆಲ್ ಪಿಬಿಎಸ್ ಗ್ರ್ಯಾಂಡ್,
ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಎದುರು
ಪಟೇಲ್ ನಗರ
ಹೊಸಪೇಟೆ- 583201