ಅಪ್ಪ-ಅಮ್ಮ ನಿಧನರಾದಾಗಲೂ ಇಷ್ಟು ನೋವಾಗಿರಲಿಲ್ಲ

Date:

ನಮ್ಮ ನಿಮ್ಮೆಲ್ಲರ ನೆಚ್ಚಿನ ಅಪ್ಪು ನಮ್ಮ ಜತೆಯಲ್ಲಿಲ್ಲ ಎಂಬುದು ಸತ್ಯ. ನಮ್ಮನ್ನೆಲ್ಲ ಅಗಲಿರುವುದನ್ನು ಒಪ್ಪಿಕೊಂಡು ಸಾಗಲೇಬೇಕಾಗಿದೆ ಎಂದು ಸಹೋದರ, ನಟ ರಾಘವೇಂದ್ರ ರಾಜ್‍ಕುಮಾರ್ ಭಾವುಕರಾಗಿ ನುಡಿದರು.

ಅಪ್ಪ-ಅಮ್ಮನನ್ನು ಕಳೆದುಕೊಂಡಾಗಲೂ ಇಷ್ಟೊಂದು ದುಃಖವಾಗಿರಲಿಲ್ಲ. ಅವರಿಗೆ ವಯಸ್ಸಾಗಿತ್ತು, ನಮ್ಮನ್ನು ಅಗಲಿದರು. ಆದರೆ, ಅಪ್ಪು ಅಗಲಿಕೆ ನಮ್ಮನ್ನೆಲ್ಲ ಹೆಚ್ಚಾಗಿ ಕಾಡುತ್ತಿದೆ. ಎಲ್ಲರೂ ದುಃಖವನ್ನು ಸಹಿಸಿಕೊಳ್ಳಬೇಕು ಎಂದರು.

ನಮ್ಮ ಕುಟುಂಬಕ್ಕಷ್ಟೆ ಅಲ್ಲ, ರಾಜ್ಯದ ಜನತೆಯನ್ನು ಕಾಡಿದೆ. ಅಪ್ಪುಗೆ ಏನಾಯಿತು, ಹೇಗಾಯಿತು ಎಂದು ಯೋಚಿಸುತ್ತಾ ಕುಳಿತರೆ ಪ್ರಯೋಜನವಿಲ್ಲ. ಇಂಥ ಕೆಟ್ಟ ಗಳಿಗೆ ಬರಬಾರದಿತ್ತು ಎಂದು ನೊಂದು ನುಡಿದರು.

ಪವರ್‍ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೃದಯ ಸ್ತಂಭನದಿಂದ ನಿಧನರಾಗಿ ನಾಲ್ಕು ದಿನಗಳಾದರೂ ದೊಡ್ಮನೆ ಕುಟುಂಬ, ಬಂಧುಗಳು, ಅಭಿಮಾನಿಗಳು ಈ ಅಘಾತದಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...