ಮ್ಯೂಸೀಶಿಯನ್ ಕ್ರಿಕೆಟ್ ಕಪ್ 2024 ಕ್ಕೆ ಕ್ಷಣಗಣನೆ !

Date:

ಇತ್ತೀಚಿನ ದಿನಗಳಲ್ಲಿ ಈ ಕ್ರಿಕೆಟ್ ಲೀಗ್ ಗಳು ಸಾಕಷ್ಟು ನಡೆಯುತ್ತಿದ್ದು ಜನರ ಗಮನ ಸೆಳೆಯುತ್ತಿವೆ. ಈಗ ವಿಚಾರ ಏನಪ್ಪ ಅಂದ್ರೆ ಇಂಪಾದ ಸಂಗೀತದ ಮೂಲಕ ಜನ ಮಾನಸದಲ್ಲಿ ಮನೆಮಾಡಿದ ಮ್ಯೂಸಿಕ್ ಮಾಂತ್ರಿಕರು ಕ್ರೀಡಾಂಗಣದಲ್ಲಿ ಕ್ರಿಕೆಟ್ ನ ಸರಿಗಮ‌ ನುಡಿಸಲು ಸಜ್ಜಾಗಿದ್ದಾರೆ. ಮೇ 1 ಮ್ಯೂಸೀಷಿಯನ್ ಕ್ರಿಕೆಟ್ ಕಪ್ – 2024 ನಡೆಯುತ್ತಿದೆ.

ಎಸ್. ಇದು ಎರಡನೇ ವರ್ಷ ನಡೆಯುತ್ತಿರುವ ಪಂದ್ಯಾವಳಿಯಾಗಿದ್ದು, ಕನ್ನಡ ಚಲನಚಿತ್ರ ರಂಗದ ಮೊಟ್ಟ ಮೊದಲ ಸಂಗೀತ ನಿರ್ದೇಶಕರಾದ ಆರ್. ನಾಗೇಂದ್ರ ರಾವ್ ಅವರಿಗೆ ಈ ಪಂದ್ಯವನ್ನು ಸಮರ್ಪಿಸಲಾಗುತ್ತಿದೆ. ಇನ್ನೊಂದು ವಿಶೇಷವೆಂದರೆ ಡಾ.ರಾಜ್ ಕುಮಾರ್ ಹಾಗೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಹುಟ್ಟಿದ ತಿಂಗಳುಗಳ ಮಧ್ಯ ಈ ಪಂದ್ಯಾವಳಿಯನ್ನ ಏರ್ಪಡಿಸಲಾಗುತ್ತೆ.

ಈ ಪಂದ್ಯದಲ್ಲಿ ಸಂಗೀತ ಕ್ಷೇತ್ರದ ಎಲ್ಲಾ ವಿಭಾಗದ ಸಾಧಕರಿದ್ದು, 40 ಜನರು ಸೇರಿ ಒಟ್ಟು 3 ತಂಡಗಳನ್ನಾಗಿ ಮಾಡಿಕೊಂಡಿದ್ದಾರೆ. ಆಲೂರಿನ ಬಳಿ ಇರುವ ಸ್ಪಾಟ್ ಆ್ಯಂಡ್ ಕ್ರಿಕೆಟ್ ಟರೀನಾ ಅನ್ನೊ ಸ್ಥಳದಲ್ಲಿ ಈ ಪಂದ್ಯ ನಡೆಯುತ್ತಿದೆ. ಇಲ್ಲಿ 3 ಟೀಂಗಳು ಆಟವಾಡುತ್ತಿವೆ. ದಿ ಹಾಡ್ ಹಿಟ್ಟರ್ಸ್ ತಂಡವನ್ನ ಖ್ಯಾತ ಹಿನ್ನಲೆ ಗಾಯಕ ವ್ಯಾಸರಾಜ್ ಸೋಸಲೆ ಲೀಡ್ ಮಾಡ್ತಿದ್ದಾರೆ. ಹಾಗೇ ಬ್ಯೂಟಿ ಬೆಂಕೈತಿ ಮೂಲಕ ಕರ್ನಾಟಕದಲ್ಲಿ ಮಿಂಚಿನಂತೆ ತಮ್ಮ ಛಾಪು ಮೂಡಿಸಿದ ಕರಿಬಸವ ತಡಕಲ್ ಸ ರೆ ಗ ಮ ಸ್ಟ್ರೈಕರ್ ಟೀಂ ನ ಕ್ಯಾಪ್ಟನ್ ಆಗಿದ್ದಾರೆ. ಇನ್ನೂ ಕರುನಾಡ ಕಲಾಕಾರ್ ಟೀಂ ಅನ್ನೂ ಮನೋಜವಂ ಆತ್ರೇಯ ಮುನ್ನಡೆಸುತ್ತಿದ್ದಾರೆ.

ನಮ್ಮ TNIT ಜೊತೆ ಮಾತನಾಡಿದ ವ್ಯಾಸರಾಜ್ ಸೋಸಲೆ ಅವರು ಈ ಪಂದ್ಯಾವಳಿ ಆಯೋಜನೆ ಮಾಡಲು ಮುಖ್ಯ ಕಾರಣಗಳನ್ನ ತಿಳಿಸಿದರು. ” ನಾವು ಒಗ್ಗಟ್ಟಿನಿಂದ ಇರಬೇಕು. ಒಂದು ಸಾಂಗ್ ರೆಕಾರ್ಡಿಂಗ್ ಸಮಯದಲ್ಲಿ ಪರಸ್ಪರರ ಭೇಟಿ ಆಗುತ್ತೆ. ಬಿಟ್ಟರೆ ಯಾರೂ ಕೂಡ ಒಟ್ಟಿಗೆ ಸಿಗುವುದಿಲ್ಲ. ನಾವೆಲ್ಲ ಒಬ್ಬರಿಗೊಬ್ಬರು ಪರಸ್ಪರ ಅನ್ಯೋನ್ಯತೆಯಿಂದ ಇರುವ ಉದ್ದೇಶದಿಂದ ಈ ಪಂದ್ಯವನ್ನು ಆಯೋಜನೆ ಮಾಡಲಾಗಿದೆ” ಎಂದರು.

ಇತ್ತೀಚೆಗೆ ಕನ್ನಡ ಕಿರುತೆರೆ, ಹಿರಿತೆರೆ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ವು. ಈಗ ಸಂಗೀತ ಮಾಂತ್ರಿಕರ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವುದು ಖುಷಿಯ ವಿಚಾರ. ಇನ್ನೂ ಈ ಪಂದ್ಯಾವಳಿಯಲ್ಲಿ ಎಕ್ಸ್ ಕ್ಯೂಸ್ ಮಿ ಖ್ಯಾತಿಯ ಸುನೀಲ್, ಸಿಲ್ಲಿ ಲಲ್ಲಿ ಖ್ಯಾತಿಯ ರವಿಶಂಕರ್ , ನಟ ರಘು ಭಟ್ , ಗಾಯಕ ಸಂತೋಷ್ ವೆಂಕಿ ಸೇರಿದಂತೆ ಸಾಕಷ್ಟುಜನ ವಾದ್ಯ ವೃಂದದ ಕಲಾವಿದರು ಸಹ ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ನಾನು ಆತ್ಮಸಾಕ್ಷಿ ನಂಬಿದ್ದೇನೆ, ಆತ್ಮಸಾಕ್ಷಿಗೆ ತಕ್ಕಂತೆ ನಾವು ಕೆಲಸ ಮಾಡಬೇಕು: ಡಿ.ಕೆ. ಶಿವಕುಮಾರ್

ನಾನು ಆತ್ಮಸಾಕ್ಷಿ ನಂಬಿದ್ದೇನೆ, ಆತ್ಮಸಾಕ್ಷಿಗೆ ತಕ್ಕಂತೆ ನಾವು ಕೆಲಸ ಮಾಡಬೇಕು: ಡಿ.ಕೆ....

ಅಯೋಧ್ಯೆ ರಾಮಮಂದಿರದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಅಯೋಧ್ಯೆ ರಾಮಮಂದಿರದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ ಅಯೋಧ್ಯೆ: ಅಯೋಧ್ಯೆಯ ಭವ್ಯ...

ಚಳಿಗಾಲದಲ್ಲಿ ದೊಡ್ಡಪತ್ರೆ ಎಲೆಗಳ ಸೇವನೆಯಿಂದ ಎಷ್ಟು ಪ್ರಯೋಜನಗಳಿವೆ ಗೊತ್ತಾ..?

ಚಳಿಗಾಲದಲ್ಲಿ ದೊಡ್ಡಪತ್ರೆ ಎಲೆಗಳ ಸೇವನೆಯಿಂದ ಎಷ್ಟು ಪ್ರಯೋಜನಗಳಿವೆ ಗೊತ್ತಾ..? ಪ್ರಕೃತಿಯಲ್ಲಿ ನಮ್ಮ ಆರೋಗ್ಯಕ್ಕೆ...

ಬೆಳ್ಳಂಬೆಳಗ್ಗೆ ಬೆಂಗಳೂರು ಸೇರಿ ರಾಜ್ಯಾದ್ಯಂತ 10 ಕಡೆ ಲೋಕಾಯುಕ್ತ ದಾಳಿ

ಬೆಳ್ಳಂಬೆಳಗ್ಗೆ ಬೆಂಗಳೂರು ಸೇರಿ ರಾಜ್ಯಾದ್ಯಂತ 10 ಕಡೆ ಲೋಕಾಯುಕ್ತ ದಾಳಿ ಬೆಂಗಳೂರು: ರಾಜ್ಯದಲ್ಲಿ...