ತುಮಕೂರಿನಲ್ಲಿ ಪಿಎಸ್ಐ ಆತ್ಮಹತ್ಯೆ…! ಡೆತ್ ನೋಟ್ ನಲ್ಲಿ ಕಾರಣ ರಿವೀಲ್
ತುಮಕೂರು: ತುಮಕೂರಿನ ದ್ವಾರಕಾ ಲಾಡ್ಜ್ನಲ್ಲಿ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜು (59) ನೇಣಿಗೆ ಶರಣಾಗಿದ್ದಾರೆ.ಅಪರಾಧ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು, ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣವೆಂದು ಡೆತ್ ನೋಟ್ನಲ್ಲಿ ಬರೆದಿದ್ದಾರೆ.“ಅಳಿಯ ನನ್ನ ಮಗನಷ್ಟೆ… ನನ್ನ ಮಗನಿಗೆ ಕೆಲಸ ಕೊಡಿ”, ಎಂಬ ಭಾವುಕ ಮಾತುಗಳು ಡೆತ್ ನೋಟ್ನಲ್ಲಿ ಸ್ಪಷ್ಟವಾಗಿದ್ದು,.ಘಟನೆಯ ಬಗ್ಗೆ ಶೀಘ್ರವೇ ತನಿಖೆ ಆರಂಭಿಸಿರುವ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.