ಗಲ್ಫ್ ರಾಷ್ಟ್ರಗಳಲ್ಲಿನ ಉದ್ಯೋಗ ಬಿಟ್ಟು ಕಾಶ್ಮೀರಿ ಯುವಕರು ಭಾರತೀಯ ಸೇನೆ ಸೇರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹೀಗೆ ಕಾಶ್ಮೀರಿ ಯುವಕರು ಸೇನೆಗೆ ಸೇರುತ್ತಿರೋದು ಯೋಧ ಔರಂಗಜೇಬ್ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು…!
ಹುತಾತ್ಮ ಯೋಧ ಔರಂಗಜೇಬ್ ಅವರ ಮಂದಾರ ಗ್ರಾಮದ ಸುಮಾರು 50 ಮಂದಿ ಯುವಕರು ತಮ್ಮ ಉದ್ಯೋಗಕ್ಕೆ ಖಾಯಂ ಗುಡ್ ಬೈ ಹೇಳಿ ಸೇನೆ ಸೇರಲು ಮುಂದಾಗಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.
ಔರಂಗಜೇಬ್ ಅವರ ಆತ್ಮೀಯ ಗೆಳೆಯರಾದ ಮಹಮ್ಮದ್ ಕಿರಾಮತ್, ಮಹಮದ್ ತಾಜ್ ಸೇರಿ 50ಕ್ಕೂ ಹೆಚ್ಚುಮಂದಿ ಸೇನೆ ಸೇರಲಿದ್ದಾರೆ ಎಂದು ಹೇಳಲಾಗಿದೆ.
ಜೂನ್ 14ರಂದು ಔರಂಗಜೇಬ್ ಹತ್ಯೆ ಸುದ್ದಿ ಕೇಳಿದ ಸ್ನೇಹಿತರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಸೇನೆ ಸೇರುವ ಶಪತ ಮಾಡಿದ್ದರು ಎಂದು ತಿಳಿದುಬಂದಿದೆ.