No menu items!
19.6 C
Munich
Tuesday, April 28, 2026

ಹಿಮಾಲಯದಲ್ಲಿ ಸಂಭವಿಸಲಿದೆ ಇತಿಹಾಸದಲ್ಲೇ ಕಂಡಿರದ ಭಾರಿ ಭೂಕಂಪ..?!

Must read

ಭಾರತದ ಇತಿಹಾಸದಲ್ಲಿಯೇ ಕಂಡಿರದ ಭಾರಿ ಭೂಕಂಪನ ವನ್ನು ಎದುರಿಸುವ ಕಾಲ ಸಮೀಪಿಸುತ್ತಿದೆ..! ಹಿಮಾಲಯ ಪರ್ವತದಲ್ಲಿ ಪ್ರಬಲ ಭೂಕಂಪ ಆಗುವ ಸಾಧ್ಯತೆ ದಟ್ಟವಾಗಿದೆ..! ಲಕ್ಷಗಟ್ಟಲೆ ಸಾವು ನೋವುಗಳು ಸಂಭವಿಸುತ್ತೆ..! ಇಡೀ ಭಾರತವನ್ನೇ ಈ ಭೂಕಂಪ ಬೆಚ್ಚಿ ಬೀಳಿಸುತ್ತೆ..! ನಾವು ನೀವೆಲ್ಲಾ ಈ ಕರಾಳದಿನಕ್ಕೆ ಸಾಕ್ಷಿ ಆಗುತ್ತೇವೆ ಅನ್ನೋದು ನಿಜಕ್ಕೂ ನೋವಿನ ಸಂಗತಿ..!

ಹೌದು, ಹಿಮಾಲಯದಲ್ಲಿ ಭಾರಿ ಭೂಕಂಪ ಸಂಭವಿಸಲಿದೆ..!? ವರ್ಷಾರಂಭದಲ್ಲೇ ಇಂಥಾ ಆಘಾತಕಾರಿ ಸುದ್ದಿ ಕೇಳಲ್ಪಟ್ಟಿದ್ದು ಜ್ಯೋತಿಷಿಗಳ ಬಾಯಿಯಿಂದಲ್ಲಾ..! ಒಂದುವೇಳೆ ಯಾರೋ ಪ್ರಚಾರ ಪ್ರಿಯ ಜ್ಯೋತಿಷಿಗಳು ಹೀಗೆಂದು ಹೇಳಿಕೆ ಕೊಟ್ಟು ಮಾಧ್ಯಮದ ಮುಂದೆ ಬಂದಿದ್ದರೆ ಅಯ್ಯೋ ಬಿಡಿ, ಜ್ಯೋತಿಷಿಗಳು ಹೇಳಿದ್ದೆಲ್ಲಾ ಸತ್ಯವಾಗುವಂತಿದ್ದರೆ ಇವತ್ತು ನಾವ್ಯಾರೂ ಹೀಗೆ ಇರ್ತಾ ಇರ್ಲಿಲ್ಲ ಅಂತ ಸುಮ್ಮನೇ ವಿಷಯವನ್ನು ತಾತ್ಸಾರ ಮಾಡ್ಬಹುದಿತ್ತು..! ಆದರೆ ಹಿಮಾಲಯದಲ್ಲಿ ಪ್ರಬಲ ಭೂಕಂಪ ಸಂಭವಿಸಿ ಲಕ್ಷ ಲಕ್ಷ ಜನ ಸಾಯ್ತಾರೆ ಅನ್ನೋ ವಿಷಯವನ್ನು ಸ್ವತಃ ಕೇಂದ್ರ ಗೃಹ ಸಚಿವಾಲಯದ ನೈಸರ್ಗಿಕ ಪ್ರಕೋಪ ತಜ್ಞರು..!

ಹ್ಞೂಂ ಸಾರ್, ಹಿಮಾಲಯದಲ್ಲಿ ಸಂಭವಿಸ ಬಹುದಾದ ಭೂಕಂಪದ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಎಚ್ಚರಿಕೆ ನೀಡಿದೆ..! ತಜ್ಞರ ಅಭಿಪ್ರಾಯದಂತೆ 8.2 ಅಥವಾ ಅದಕ್ಕೂ ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸಲಿದೆಯಂತೆ..! 2011ರಲ್ಲಿ ಸಿಕ್ಕಿಂ ನಲ್ಲಿ ಸಂಭಿಸಿದ 6.9 ತೀವ್ರತೆಯ ಭೂಕಂಪ, ಕಳೆದ ವರ್ಷ ಅಂದರೆ 2015ರ ಮೇ ತಿಂಗಳಲ್ಲಿ ನೇಪಾಳದಲ್ಲಿ ಸಂಭಂವಿಸಿದ 7.3 ತೀವ್ರತೆಯ ಭೂಕಂಪ ಮತ್ತು ಇದೇ ವರ್ಷದ ಆರಂಭದಲ್ಲಿ (2016 ಜನವರಿ4) ಮಣಿಪುರದಲ್ಲಿ ಸಂಭವಿಸಿದ 6.7 ತೀವ್ರತೆಯ ಭೂಕಂಪದಿಂದಾಗಿ ಹಿಮಾಲಯನ್ ಪ್ರಾಂತ್ಯದಲ್ಲಿ ನ ಭೂಗರ್ಭದಲ್ಲಿ ಟೆಕ್ಟಾನಿಕ್ ಪ್ಲೇಟ್ಗಳ ಘರ್ಷಣೆ ತೀವ್ರಗೊಂಡಿದೆಯಂತೆ..! ಇದು ಪ್ರಬಲ ಭೂಕಂಪಕ್ಕೆ ಕಾರಣವಾಗುವುದರಲ್ಲಿ ಸಂಶಯವೇ ಇಲ್ಲ ಅನ್ನೋದು ವೈಜ್ಞಾನಿಕ ಸತ್ಯವೂ ಹೌದು..!
ಸಂಭವಿಸಲಿರುವ ಭೂಕಂಪದಲ್ಲಿ ಹಿಮಾಲಯದ ರಾಜ್ಯಗಳಲ್ಲಿ ವಾಸಿಸುವ 8-9 ಲಕ್ಷ ಜನರ ಮಾರಾಣ ಹೋಮವೇ ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ..! ದೆಹಲಿಯ ಸುತ್ತಲಿನ 200 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಕಂಪನದ ಅನುಭವವಾಗಲಿದೆ ಎಂದು ವರದಿಯಾಗಿದೆ..!
ಯಾವಾಗ ಭೂಕಂಪ ಸಂಭವಿಸುತ್ತೆ ಅಂತ ನಿಖರವಾಗಿ ತಿಳಿದು ಬಂದಿಲ್ಲ..! ಸಧ್ಯದಲ್ಲೇ ಭಾರಿ ಭೂಕಂಪಕ್ಕೆ ಹಿಮಾಲಯ ರಾಜ್ಯಗಳು ತುತ್ತಾಗಲಿವೆ ಎಂಬ ಎಚ್ಚರಿಕೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ನೀಡಿದೆ.

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಪ್ರೀತಿ ಎಂಥವರನ್ನೂ ಬದಲಾಯಿಸುತ್ತೆ..! ಯಾರಿಂದಲೂ ಬದಲಾಗದ ಹುಡುಗರು ಹುಡುಗಿಯಿಂದ ಬದಲಾಗ್ತಾರೆ..!

ಒಂಟಿಕಾಲಲ್ಲೇ `ಮೌಂಟ್ ಎವರೆಸ್ಟ್’ ಏರಿದ ಸಾಹಸಿ..!

ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!

ಕನ್ನಡದವರು ಅಂದ್ರೆ ಏನಂದುಕೊಂಡಿದ್ದಾರೆ..? ಅಷ್ಟಕ್ಕೂ ಪರಿಸ್ಥಿತಿ ಯಾಕೆ ಹೀಗಾಗಿದೆ ಗೊತ್ತಾ..? ಈ ವೀಡಿಯೋ ನೋಡಿ..!

6ನೇ ಕ್ಲಾಸ್ ಫೇಲ್ ಆದವಳು ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಟಾಪ್ 2 ರ್ಯಾಂಕ್ ಪಡೆದಳು..!

ಕಳ್ಳನಿಂದ ಅಮ್ಮನನ್ನು ಕಾಪಾಡಿದ 13ರ ಪೋರ..! ಕೆಚ್ಚೆದೆಯ ಬಾಲಕನಿಗೆ ನ್ಯಾಷನಲ್ ಬ್ರೇವರಿ ಅವಾರ್ಡ್..!

ಹೆಂಡತಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಪತಿದೇವ..! ಇವರು ಕಳೆದ 59 ವರ್ಷದಿಂದಲೂ ಹೆಂಡತಿಯ ಸೇವೆ ಮಾಡ್ತಿದ್ದಾರೆ..!

ಕಿಲ್ಲಿಂಗ್ ವೀರಪ್ಪನ್ ಸಿನಿಮಾ ನೀವಿನ್ನೂ ನೋಡಿಲ್ವಾ..?

800 ವರ್ಷ ಇತಿಹಾಸ ಇರೋ ಮೊಬೈಲ್..! ನೀವಿನ್ನೂ 800 ವರ್ಷ ಇತಿಹಾಸದ ಮೊಬೈಲ್ ನೋಡಿಲ್ವಾ..?!

ರತನ್ ಟಾಟಾ ಹೇಳಿದರು ಅನ್ನದ ಪಾಠ ಜರ್ಮನಿಯಲ್ಲಿ ಪಾಠ ಕಲಿಸಿದ್ದಳಂತೆ ಓರ್ವ ಅಜ್ಜಿ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article