KRS ಬೃಂದಾವನದಲ್ಲಿ ಚಿರತೆ ಸೆರೆ ಹಿಡಿಯದ ರಾಜ್ಯ ಸರ್ಕಾರಕ್ಕೆ ಸ್ಪಲ್ಪ ಕೂಡ ಜವಾಬ್ದಾರಿ ಇಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಮಾತ್ನಾಡಿದ ಅವರು, ಸ್ಥಳೀಯ ಅಧಿಕಾರಿಗಳಿಗೆ ಜವಾಬ್ದಾರಿ ಬಿಟ್ಟಿದ್ದಾರೆ. KRS ಒಂದು ಇಂಟರ್ ನ್ಯಾಷನಲ್ ಟೂರಿಸಂ ಪ್ಲೇಸ್. KRS ಬೃಂದಾವನ ಇಡೀ ವಿಶ್ವದ ಗಮನ ಸೆಳೆಯುತ್ತದೆ. ಸರ್ಕಾರ ತೀವ್ರವಾಗಿ ತೆಗೆದುಕೊಳ್ಳದಿದ್ದರೆ ತನಗೆ ತಾನೇ ಮೋಸ ಮಾಡ್ಕೊಳ್ಳುತ್ತೆ. KRS ಒಂದು ಸಲ ಇಮೇಜ್ ಹೋದ್ರೆ ಮತ್ತೆ ಸರಿ ಮಾಡಲು ಸಾಧ್ಯವಿಲ್ಲ. ಸಿರಿಯಸ್ ನೆಸ್ ಸರ್ಕಾರಕ್ಕೆ ಇಲ್ಲ, ಇದನ್ನ ಅಸೆಂಬ್ಲಿಯಲ್ಲಿ ಚರ್ಚೆ ಮಾಡ್ತೇನೆ. ಚಿರತೆಗಳು ಸಾಕಷ್ಟು ಆತಂಕ ಸೃಷ್ಟಿಸಿದ ಕ್ಷಣವೇ ಸರ್ಕಾರ ಕ್ರಮ ವಹಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ರು.