No menu items!
26.3 C
Munich
Thursday, June 18, 2026

ಬಿಟ್ಬಿಡಿ ಅಂತ ಅಂಗಲಾಚುತ್ತಿರೋ ರೇಣುಕಾಸ್ವಾಮಿ ಫೋಟೋ ವೈರಲ್!

Must read

 

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಪೊಲೀಸ್ ಅಧಿಕಾರಿಗಳು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ ರೇಣುಕಾಸ್ವಾಮಿಗೆ ಹಿಂಸೆ ನೀಡಿರುವ ಫೋಟೋಗಳನ್ನ ಪೊಲೀಸರು ರಿಟ್ರೀವ್ ಮಾಡಿಕೊಂಡಿದ್ದು, ಅವುಗಳಲ್ಲಿ ಕೆಲವು ವೈರಲ್ ಆಗುತ್ತಿವೆ. ಕೊಲೆಗೂ ಮುನ್ನ ವಿನಯ್ ಮೊಬೈಲ್ನಲ್ಲಿ ಸೆರೆಯಾದ ರೇಣುಕಾಸ್ವಾಮಿ ಫೋಟೋಸ್ ಪತ್ತೆಯಾಗಿತ್ತು. ಆರೋಪಿ ವಿನಯ್ ಮೊಬೈಲ್ನಲ್ಲಿ ಫೋಟೋ ಕ್ಲಿಕ್ಕಿಸಿ ಡಿಲೀಟ್ ಮಾಡಿದ್ದನು. ಡಿಲೀಟ್ ಆದ ಫೋಟೋಗಳನ್ನ FSL ಟೀಂ ರಿಟ್ರೀವ್ ಮಾಡಿದೆ.
ಗಾಯಗೊಂಡ ರೇಣುಕಾಸ್ವಾಮಿ ಅಂಗಲಾಚ್ತಿರೋ ಫೋಟೋ ರಿಟ್ರೀವ್ ಬಳಿಕ ಸಿಕ್ಕಿದೆ. ತನ್ನ ಬಿಟ್ಟು ಬಿಡುವಂತೆ ಬೇಡಿಕೊಂಡತೆ ಫೋಟೋ ಕಾಣಿಸಿದೆ. ತಪ್ಪಾಯ್ತು ಎಂದು ಅಳುತ್ತಿರುವ ಮತ್ತು ಮೈಮೇಲೆ ಹಾಕಿದ್ದ ಆತನ ಬನಿಯನ್ ಸಹ ಕಿತ್ತು ಹಾಕಿರುವುದನ್ನು ಫೋಟೋಗಳಲ್ಲಿ ಕಂಡಿವೆ.
ಕಿಡ್ನಾಪ್ ಮಾಡಿದ ಬಳಿಕ ರೇಣುಕಾಸ್ವಾಮಿಯನ್ನ ಶೆಡ್ಗೆ ಕರೆತಂದಿದ್ದರು. ಆರೋಪಿಗಳಿಂದ ಆತನಿಗೆ ಕರೆಂಟ್ ಶಾಕ್ ಕೊಟ್ಟು ಹಲ್ಲೆ ಮಾಡಿದ್ದರು. ಪವನ್, ಧನರಾಜ್ ಮತ್ತು 5 ಮಂದಿಯಿಂದ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ. ಬಳಿಕ ಎಲೆಕ್ಟ್ರಿಕ್ ಮೆಗ್ಗರ್ನಿಂದ ಆತನ ಕೈಗಳಿಗೆ ಬರೆ ಹಾಕಿದ್ದಾರೆ. ಶೆಡ್ನಲ್ಲಿ ನಿಲ್ಲಿಸಿದ್ದ ವಾಹನಗಳ ಬಳಿ ಚೆನ್ನಾಗಿ ಹೊಡೆದು ಅಲ್ಲೇ ಬಿಸಾಡಿದ್ದಾರೆ ಎನ್ನಲಾಗುತ್ತಿದೆ.
ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ಚಿರಾಡಿದ್ದಾನಂತೆ. ಅದೇ ವೇಳೆ ಅಟ್ಟಹಾಸದಲ್ಲಿ ಆರೋಪಿಗಳು ಕೂಗಾಡಿದ್ದಾರಂತೆ. ಈ ವೇಳೆ ಗೇಟ್ ಹೊರಗಿದ್ದ ಸೆಕ್ಯೂರಿಟಿ ಒಳಗೆ ಬಂದಿದ್ದಾರೆ. ಹಲ್ಲೆ ಮಾಡಿದನ್ನ ಸೆಕ್ಯೂರಿಟಿ ಗಾರ್ಡ್ ಕಣ್ಣಾರೆ ನೋಡಿದ್ದಾರೆ. ಬಳಿಕ ತಕ್ಷಣ ವಿನಯ್ಗೆ ಫೋನ್ ಮಾಡಿದ್ದಾನೆ ಎನ್ನಲಾಗುತ್ತಿದೆ.

- Advertisement -spot_img

More articles

- Advertisement -spot_img

Latest article