No menu items!
10.8 C
Munich
Wednesday, April 29, 2026

ದೀಪಿಕಾಳನ್ನು ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿದ ರಣವೀರ್‍ಗೆ ಪ್ರಕಾಶ್ ಪಡುಕೋಣೆ ಹೇಳಿದ್ದೇನು..?

Must read

ಖ್ಯಾತ ಹಿಂದಿ ಚಲನಚಿತ್ರ ನಿರ್ದೇಶಕ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಸೀಸನ್-5 ಈಗಾಗಲೇ ಆರಂಭಗೊಂಡಿದ್ದು, ಮೊದಲ ಎಪಿಸೋಡ್‍ನಲ್ಲಿಯೇ ಸ್ಟಾರ್ ನಟ ಶಾರೂಕ್ ಹಾಗೂ ನಟಿ ಆಲಿಯಾ ಭಟ್ ಭರ್ಜರಿ ಓಪನಿಂಗ್‍ನಲ್ಲಿ ಮಿಂಚಿದ್ದರು. ಅದಾದ ನಂತರ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಕೆಲವು ಉಲ್ಲಾಸಕರ ಹೇಳಿಕೆಯನ್ನು ನೀಡಿ ಎಲ್ಲರನ್ನು ರಂಜಿಸಿದ್ದರು. ಇವೆಲ್ಲದಕ್ಕೂ ಮಿಗಿಲಾಗಿ ವೀಕ್ಷಕರ ಗಮನ ಸೆಳೆದಿದ್ದು ರಣಬೀರ್ ಕಪೂರ್ ಹಾಗೂ ರಣವೀರ್ ಸೀಂಗ್ ಎಪಿಸೋಡ್‍ನಲ್ಲಿ..
ಕಾಫಿ ವಿತ್ ಕರಣ್ ಶೋನಲ್ಲಿ ಪಾಲ್ಗೊಂಡಿದ್ದ ಇವರಿಬ್ಬರಿಗೆ ರ್ಯಾಪಿಡ್ ಫೈರ್ ಸುತ್ತಿನಲ್ಲಿ ರಣವೀರ್ ಸಿಂಗ್ ಬಳಿ ದೀಪಿಕಾ, ಕತ್ರೀನಾ ಮತ್ತು ಅನುಷ್ಕಾ ಈ ಮೂವರಲ್ಲಿ ನೀವು ಯಾರನ್ನು ಮದುವೆಯಾಗಲು ಇಷ್ಟ ಪಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ರಣವೀರ್ ಸಹಜವಾಗಿಯೆ ನಾನು ದೀಪಿಕಾಳನ್ನು ಮದುವೆಯಾಗಲು ಇಷ್ಟ ಪಡುತ್ತೇನೆ ಎಂದಿದ್ದಾರೆ. ಆದರೆ ಇದಕ್ಕೆ ದೀಪಿಕಾ ಇಲ್ಲಿಯವರೆಗೂ ಯಾವುದೇ ಉತ್ತರವನ್ನು ನೀಡಿಲ್ಲ. ಆದರೆ ಆಕೆಯ ತಂದೆ ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಪ್ರತಿಕ್ರಿಯೆ ನೀಡಿದ್ದು “ಅವರು ವಯಸ್ಕರರು ತಾವೇನು ಮಾಡುತ್ತಿದ್ದೇವೆ ಎಂಬ ಅರಿವು ಅವರಿಗಿದೆ. ತಂದೆಯಾಗಿ ನಾನು ದೀಪಿಕಾಳಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ನೀಡಿದ್ದೇನೆ. ಈ ವಿಷಯದಲ್ಲಿಯೂ ಕೂಡ ಆಕೆಗೆ ಏನು ಇಷ್ಟವೋ ಹಾಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಅವಳಿಗಿದೆ” ಎಂದು ಹೇಳಿದ್ದಾರೆ.

Like us on Facebook  The New India Times

POPULAR  STORIES :

ಜಿಯೋ ಸಿಮ್ ಗ್ರಾಹಕರಿಗೆ ಬಂಪರ್ ಆಫರ್.!

ಬಾಂಗ್ಲಾ ಕ್ರಿಕೆಟಿಗರು ಮಾಡಿದ ತಪ್ಪಿಗೆ ಸಿಕ್ತು ದೊಡ್ಡ ಶಿಕ್ಷೆ..!

ಒಬಿಸಿ ಪಟ್ಟಿಗೆ 15 ಹೊಸ ಜಾತಿ ಸೇರ್ಪಡೆ..!

ಇನ್ಮುಂದೆ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ : ಸುಪ್ರೀಕೋರ್ಟ್‍ನ ಮಹತ್ವದ ಆದೇಶ..!

ಯಶ್-ರಾಧಿಕಾ ಪಂಡಿತ್ ಎಂಗೇಜ್‍ಮೆಂಟ್ ವಿಡಿಯೋ ರಿಲೀಸ್.!

ಚಿನ್ನದ ಬೆಲೆ ದಿಢೀರ್ ಕುಸಿತ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article