ಡಿಸೆಂಬರ್ 16, ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಹುಟ್ಟುಹಬ್ಬ. ಈ ಬಾರಿಯ ಹುಟ್ಟುಹಬ್ಬದಂದು ಅವರ ಮಗ `ಜಾಗ್ವಾರ್’ನಲ್ಲಿ ಬರ್ತಾ ಇದ್ದಾರೆ..! ತಂದೆಯ ಹುಟ್ಟು ಹಬ್ಬದಂದು ಮಗನ `ಜಾಗ್ವಾರ್’ ಸವಾರಿ ಶುರುವಾಗಲಿದೆ..! ಕುಮಾರ್ ಸ್ವಾಮಿಯವರ ಪುತ್ರನ `ಜಾಗ್ವಾರ್’ ಬಗ್ಗೆ ಕಿರುಪರಿಚಯವಿಲ್ಲಿದೆ.
ಹೌದು, ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಜನಪ್ರಿಯ ಮತ್ತು ಜನಪರ ರಾಜಕಾರಣಿಯಾಗಿರೋ ಮಾನ್ಯ ಎಚ್.ಡಿ.ಕುಮಾರ್ ಸ್ವಾಮಿ ಅವರ ಮಗ ನಿಖಿಲ್ ಗೌಡ `ಜಾಗ್ವಾರ್’ ಏರಿ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ..! ಕುಮಾರಸ್ವಾಮಿ ಅವರ 57ನೇ ಜನ್ಮದಿನಾಚರಣೆಯಂದೇ ಮಗ ನಿಖಿಲ್ ಗೌಡ ಸಿನಿಮಾ ಕ್ಷೇತ್ರಕ್ಕೆ ಬರ್ತಾ ಇದ್ದಾರೆ. ಅವರ ಚೊಚ್ಚಲ ಸಿನಿಮಾ `ಜಾಗ್ವಾರ್’ದ ಮುಹೂರ್ತ ನಡೆಯಲಿದೆ. ಈ ಮೂಲಕ ಕನ್ನಡ ಸಿನಿಮಾಕ್ಕೆ ಹೊಸ ನಟನೊಬ್ಬನ ಪರಿಚಯವಾಗಲಿದೆ.
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಡಿ. 16ರಂದು `ಜಾಗ್ವರ್’ ಮುಹೂರ್ತ ನಡೆಯಲಿದ್ದು, ಅವತ್ತೇ ಸಿನಿಮಾದ ಟೀಸರ್ ಕೂಡ ಲಾಂಚ್ ಆಗಲಿದೆ.
ಸಂಜೆ 5ಗಂಟೆಗೆ ನೆರವೇರಲಿರುವ ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಸಿನಿಕಲಾವಿದರು, ತಂತ್ರಜ್ಞರು, ರಾಜಕೀಯ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರರಂಗದ ಹಿರಿಯ ಕಲಾವಿದೆಯರಾದ ಬಿ. ಸರೋಜಾದೇವಿ, ಲೀಲಾವತಿ, ಜಯಂತಿ ಮತ್ತು ಭಾರತಿ ವಿಷ್ಣುವರ್ಧನ್ ಅವರನ್ನು ಸನ್ಮಾನಿಸಲಾಗುತ್ತಿದೆ. ಈ ಸಮಾರಂಭಕ್ಕೆ ರೆಬಲ್ ಸ್ಟಾರ್ ಅಂಬರೀಷ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್ ಮೊದಲಾದ ಪ್ರಮುಖ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಸಿನಿಮಾರಂಗದ ಬಹುತೇಕ ಗಣ್ಯರು ಸಾಕ್ಷಿಯಾಗಲಿದ್ದಾರೆ..!
ಜಾಗ್ವಾರ್ ಬಿಗ್ ಬಜೆಟ್ ಚಿತ್ರವಾಗಿದ್ದು, ಇದಕ್ಕಾಗಿ ನಿಖಿಲ್ ವಿಶೇಷ ತರಬೇತಿಯನ್ನೂ ಪಡೆದಿದ್ದಾರೆ..! ಚಿತ್ರವನ್ನು ಮಹದೇವ್ ನಿರ್ದೇಶಿಸಲಿದ್ದಾರೆ.
ಎನಿವೇ ಅಪ್ಪನ ಹುಟ್ಟುಹಬ್ಬದಂದು `ಜಾಗ್ವಾರ್’ ಏರಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿರೋ ನಿಖಿಲ್ ಗೌಡರಿಗೆ ಹಾಗೂ ಇಡೀ ಜಾಗ್ವಾರ್ ತಂಡಕ್ಕೆ ಶುಭವಾಗಲಿ. ಹಾಗೆಯೇ ಕುಮಾರ ಸ್ವಾಮಿ ಅವರಿಗೂ..
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : [email protected]