ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಯಲಿದ್ದು, ಕಂದಾಯ ಸಚಿವ ಆರ್ ಅಶೋಕ್ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ಧಾರೆ. ಬೆಳಗ್ಗೆ ಸಿಎಂ ನಿವಾಸದಲ್ಲಿ ಸುದೀರ್ಘ ಮೀಟಿಂಗ್ ನಡೆಸಿದ್ದು, ಮಧ್ಯಾಹ್ನ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ. ಗಣೇಶೋತ್ಸವಕ್ಕೆ ಅವಕಾಶ ನೀಡಬಹುದಾ, ಅವಕಾಶ ನೀಡಿದ್ರೆ ಎಷ್ಟು ದಿನ ಅವಕಾಶ ಕೊಡ್ಬೇಕು, ಮೈದಾನದ ಯಾವ ಭಾಗದಲ್ಲಿ ಪ್ರತಿಷ್ಠಾಪನೆಗೆ ಅವಕಾಶ.
. ಉತ್ಸವದ ರೂಪು ರೇಷೆ ಹೇಗಿರಬೇಕು, ಭದ್ರತೆ ಹೇಗಿರಬೇಕು.. ಈ ಎಲ್ಲಾ ವಿಚಾರಗಳ ಬಗ್ಗೆ ಅಶೋಕ್ ಸಮಾಲೋಚನೆ ಮಾಡಲಿದ್ಧಾರೆ. ಸಚಿವ ಅಶೋಕ್ ಜತೆ ಸಂಸದ ಪಿ.ಸಿ.ಮೋಹನ್ ಜತೆ ಆಗಮಿಸಿದ್ದು, ಪಶ್ಚಿಮ ವಿಭಾಗ DCP ಲಕ್ಷ್ಮಣ್ ನಿಂಬರಗಿ ಮತ್ತಿತರರು ಭೇಟಿ ನೀಡಿದ್ಧಾರೆ.