ಈ ಚಿಕ್ಕ ಕುಟುಂಬ ಕರುಣಾಜನಕ ಸ್ಟೋರಿ ಕೇಳಿದ್ರೆ ಎಂಥಾ ಕಲ್ಲು ಹೃದಯವೂ ಕರಗುತ್ತೆ..! ಫ್ರೆಂಡ್ಸ್, ನಿಜವಾಗಿಯೂ ಹೇಳ್ತಾ ಇದ್ದೇನೆ.. ಈ ಸ್ಟೋರಿನ ತಿಳಿದು ಬರೆಯಲೇ ಬೇಕೆಂದು ಕುಳಿತಿರೋ ನನ್ನ ಮನಸ್ಸು ಭಾರವಾಗಿದೆ..! ಇವರ ಸ್ಥಿತಿ ನೋಡಿ ಅಕ್ಷರಗಳನ್ನು ಟೈಪ್ ಮಾಡಲು ಎರಡೂ ಕೈಗಳೂ ನಡುಗುತ್ತಿವೆ..! ಸಾರ್.., ನಿಜಕ್ಕೂ ಇಂಥಹಾ ಕಷ್ಟ ಯಾರಿಗೂ ಬರಬಾರ್ದು ಕಣ್ರೀ..! ದೇವರು ಕಷ್ಟಕೊಟ್ಟು, ಪರೀಕ್ಷಿಸಿ ಮತ್ತೆ ಒಳ್ಳೆಯದನ್ನು ಮಾಡ್ತಾನಂತೆ..! ಇಲ್ಲ ಸಾರ್.. ದೇವರಿಗೆ ಕರುಣೆಯೇ ಇಲ್ಲ..! ದೇವರು ತುಂಬಾ ಕ್ರೂರಿ..! ಆತನ ಮನಸ್ಸು ಕರಗುವುದೇ ಇಲ್ಲ..! ಕಷ್ಟದಲ್ಲಿದ್ದವರಿಗೆ ಸಾಯೋ ತನಕವೂ ಕಷ್ಟವನ್ನು ಕೊಡ್ತಾನೇ ಇರ್ತಾನೆ..! ಈ ಸ್ಟೋರಿ ಓದ್ತಾ ಓದ್ತಾ ನಿಮಗೆ ದುಃಖ ಆಗಿಯೇ ಆಗುತ್ತೆ..! ನಿಮ್ಮ ಕಣ್ಣಲ್ಲಿ ನೀರು ಹಾಕಿಸ್ತಾ ಇರುವುದಕ್ಕೆ ಕ್ಷಮಿಸಿ..! ಇವರ ಸ್ಟೋರಿ ಎಲ್ಲರಿಗೂ ತಿಳಿಸೋ ಮೂಲಕವಾದ್ರೂ.. ಯಾರಾದ್ರೂ ಪುಣ್ಯಾತ್ಮರು ಈ ಕುಟುಂಬಕ್ಕೆ ಊರುಗೋಲು ಆಗುತ್ತಾರೇನೋ ಅನ್ನೋ ಸಣ್ಣ ಆಸೆ..!
ಅದು ಜೈಪುರದಿಂದ 40 ಕಿಲೋಮೀಟರ್ ದೂರವಿರುವ ಅಚರೋಲ್ ಎಂಬ ಪುಟ್ಟ ಹಳ್ಳಿ..! ಅಲ್ಲೊಂದು ಸಣ್ಣ ಕುಟುಂಬವಿದೆ..! ಗಂಡ, ಹೆಂಡತಿ ಮತ್ತು ಒಬ್ಬನೇ ಒಬ್ಬ ಮಗ..! ಕುಟುಂಬದ ಯಜಮಾನ ಕೇದುರಾಂ ರವರಿಗೆ ಎಂಬತ್ತು ವರ್ಷ..! ಇವರ ಹೆಂಡತಿ ರತ್ನ ದೇವಿಯವರಿಗೆ 75 ವರ್ಷ..! ಯೌವನಕ್ಕೆ ಬಂದಿರುವ ತಿಲಕ್ ಎಂಬ ಮಗನಿದ್ದಾನೆ..! ಆದ್ರೆ ಈ ಮಗ “ನಿರ್ಜೀವ” ವ್ಯಕ್ತಿ..! ಪಾಪ, ಇವರು ಎಲ್ಲಾ ಕೆಲಸಕ್ಕೂ ಬೇರೆಯವರನ್ನು ಆಶ್ರಯಿಸಲೇ ಬೇಕು..! ವಯಸ್ಸಿಗೆ ಬಂದಿದ್ದಾರೆ..ಆದರೆ ಮಗುವಿನಂತೆ.. ಏನೂ ಗೊತ್ತಾಗೋದಿಲ್ಲ..! ದೇಹ ನಿಷ್ಕ್ರೀಯವಾಗಿದೆ..!
ವಯಸ್ಸಾದ ದಂಪತಿಗಳು.. ಬದುಕಿದ್ದರೂ ನಿರ್ಜೀವವಾಗಿರೋ ಮುಗ್ದಜೀವ..! ಈ ಮೂವರೇ ಒಂದು ಕುಟುಂಬ..! ಎಂಬತ್ತು ವರ್ಷದ ಕೇದುರಾಂ ಹೊರಗಡೆ ಕೆಲಸಕ್ಕೆ ಹೋಗಲಿಕ್ಕೆ ಆಗಲ್ಲ..! ಮನೆಯಲ್ಲೇ ಉಳಿದು ಕೊಂಡಿದ್ದಾರೆ..! ಇನ್ನು ಅವರ ಹೆಂಡತಿಗೂ ವಯಸ್ಸಾಗಿದೆ ಅವರಾದರೂ ಎಷ್ಟು ಅಂತ ದುಡಿಯುತ್ತಾರೆ..?! ಮಗ ತಿಲಕ್ ಯಾವುದೇ ರೀತಿಯಲ್ಲೂ ಕುಟುಂಬ ನೆರವಾಗಲು ಸಾದ್ಯವೇ ಇಲ್ಲ..! ಅಪ್ಪ-ಅಮ್ಮನನ್ನು ನೋಡಿಕೊಳ್ಳಬೇಕಾಗಿದ್ದ ಆತನನ್ನೇ ಆ ದೇವರು ಮೂಲೆಯಲ್ಲಿ ಕೂರಿಸಿದ್ದಾನೆ..! ಏನೇನೂ ಗೊತ್ತೇ ಆಗಲ್ಲ..!
ಕೆದುರಾಂ ರವರು ಬೆಳಿಗ್ಗೆ 5ಗಂಟೆಗೇ ಎದ್ದು ಅಡುಗೆ ತಯಾರು ಮಾಡಿಟ್ಟು ಬಿಡುತ್ತಾರೆ..! ರಾತ್ರಿ ಆಗುವಷ್ಟರಲ್ಲಿ ಇವರ ಕಣ್ಣು ಕಾಣುವುದಿಲ್ಲ. ಆದ್ದರಿಂದ ಮೂರು ಹೊತ್ತಿಗೂ ಸೇರಿಸಿ ಒಮ್ಮೆಲ್ಲೇ ಅಡುಗೆ ಮಾಡಿಟ್ಟು ಬಿಡ್ತಾರೆ..!
ಇಷ್ಟೇ ಅಲ್ಲಾ..ಇವರು ಸುಮಾರು ಒಂದುವರೆ ವರ್ಷದಿಂದ ವಿದ್ಯುತ್ ಇಲ್ಲದೆ ಕತ್ತಲೆಯಲ್ಲೇ ಕಾಲಕಳೆಯುತ್ತಿದ್ದಾರೆ..! ವಿದ್ಯುತ್ ಬಿಲ್ ಪಾವತಿಸಿಲ್ಲವೆಂದು ಇವರ ಮನೆಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ..! ಇವರಿಗೆ 1750ರೂಪಾಯಿಯಷ್ಟು ವೃದ್ಧಾಪ್ಯ ಪಿಂಚಣಿ ಬರುವುದಿದೆ..! ಅದು ಕೂಡ ಬಂದಿಲ್ಲವಂತೆ..! ಕಳೆದ ನಾಲ್ಕು ತಿಂಗಳುಗಳಿಂದಲೂ ನಿತ್ಯವೂ ಪೋಸ್ಟ್ ಮ್ಯಾನ್ ಬಳಿ ವಿಚಾರಿಸ್ತಾ ಇದ್ದಾರೆ..! ಅವನಿಂದಲೂ ದಿನಾ ಒಂದೇ ಉತ್ತರ “ಇಲ್ಲ ಯಾವುದೇ ಪಿಂಚಣಿ ಬಂದಿಲ್ಲ”ಎಂಬುದು..!
ಈ ವೃದ್ಧರದ್ದು ದುಡಿದು ತಿನ್ನುವ ವಯಸ್ಸಲ್ಲ..! ದುಡಿದು ಸಾಕಬೇಕಾಗಿದ್ದ ಮಗನೂ ಹಾಸಿಗೆ ಹಿಡಿದಿದ್ದಾನೆ..!ಪಿಂಚಣಿ ಹಣ ಕೂಡ ಸರಿಯಾಗಿ ಬರ್ತಾ ಇಲ್ಲ..! ಹೀಗಾದರೆ ಈ ಬಡಕುಟಂಬ ಮೂರು ಜನರು ಬದುಕುವುದಾದರೂ ಹೇಗೆ..?!
ಈ ಎಲ್ಲಾಕಡೆ ತಲುಪುವಂತೆ ನೋಡಿಕೊಳ್ಳಿ..! ಯಾರದರೂ ಇವರಿಗೆ ಸಹಾಯ ಮಾಡುವಂತಾಗಲಿ..!
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : [email protected]
POPULAR STORIES :
ಆ ನಾಯಿಯಿಂದ ಅವನಿಗೆ ಅವನ ಹುಡುಗಿ ಸಿಕಿದ್ಲು..! ಈ ನಾಯಿ ಅದೆಂತಾ ಐನಾತಿ ಗೊತ್ತಾ..?
ಗಂಡ ಸತ್ತರೂ ಅವನ ಮೇಲೆ “ವರದಕ್ಷಿಣೆ ಕಿರುಕುಳದ” ಆರೋಪ..! ಐಪಿಸಿ ಸೆಕ್ಷನ್ 498ಎ ಮಿಸ್ ಯೂಸ್ ಆಗ್ತಿದೆಯೇ..?
ಆ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 20 ವರ್ಷ..! ಇಪ್ಪತ್ತು ವರ್ಷದ ನಂತರ ಶಾರುಖ್-ಕಾಜೋಲ್ ಮಾತುಕತೆ..
ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!
ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..
ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!
ಇತಿಹಾಸದಲ್ಲಿ ಇಂತಹ ಕ್ರೂರ ಹೆಣ್ಣು ಎಲ್ಲೂ ಇಲ್ಲ..!
ಈ ನಮ್ಮ ಕನ್ನಡದ ಆಟೋಡ್ರೈವರ್ “ಪ್ರಾಮಾಣಿಕ” ಶ್ರೀಮಂತ..! ಕನ್ನಡದ ಈ ಆಟೋಡ್ರೈವರ್ ಗೊಂದು ದೊಡ್ಡ ಸಲಾಂ..!
ಸುಖ-ದುಃಖಗಳನ್ನು ಹಂಚಿಕೊಳ್ಳುವುದರಲ್ಲೇ ಸಂತೋಷವಿದೆ..! ಸಣ್ಣ ವೀಡಿಯೋ ಹೇಳುವ ದೊಡ್ಡ ಕಿವಿಮಾತು..!
`ಫೋರ್ಬ್ಸ್’ ನಿಯತಕಾಲಿಕೆ ಬಿಡುಗಡೆ ಮಾಡಿರೋ “ಯೂಟ್ಯೂಬ್” ಶ್ರೀಮಂತರು..!
ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ..! ಈ ವೀಡಿಯೋ ನೋಡಿದ್ರೆ ನೀವು ಖಂಡಿತಾ ಅನ್ನವನ್ನು ವೇಸ್ಟ್ ಮಾಡಲ್ಲ..!
ಚಿಕ್ಕ ಹುಡುಗ ಕಾಲಿಗೆ ಬಿದ್ರೂ ಚಿಲ್ಲರೆ ಕೊಡಲ್ಲ..! ಆದ್ರೆ ಹುಡುಗಿ ತಂದ ಖಾಲಿ ಡಬ್ಬಕ್ಕೆ ನೋಟ್ ಹಾಕ್ತಾರೆ..!
ಕನ್ನಡದ ಸ್ಟಾರ್ಸ್ ಅಂದ್ರೆ ಇವರಿಗೆ ಲೆಕ್ಕಕ್ಕೇ ಇಲ್ವಾ..? ಕರ್ನಾಟಕದಲ್ಲಿ ಬಿಸ್ನೆಸ್, ಕನ್ನಡದ ಸ್ಟಾರ್ಸ್ ಅಂದ್ರೆ ಕೇರ್ ಲೆಸ್..!
ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?
ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!
ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!