ರೈಲಿನಲ್ಲಿ ವ್ಯಕ್ತಿಯ ವರ್ತನೆಯಿಂದ ಹೆದರಿ ಟ್ವೀಟ್ ಮಾಡಿದಳು..! , ಅವಳ ಸಹಾಯಕ್ಕೆ ರೈಲ್ವೆ ಸಚಿವರು ಬಂದರು..!

0
73

ನೀವೊಬ್ಬ ಮಹಿಳೆಯಾಗಿದ್ದು, ಒಬ್ಬರೇ ರೈಲಿನಲ್ಲಿ ಪ್ರಯಾಣ ಮಾಡ್ತೀರಿ..! ಆಗ ಬೇರೊಬ್ಬ ಪ್ರಯಾಣಿಕನನ್ನು ನೋಡಿ ನಿಮಗೆ ಭಯ ಆಗುತ್ತೆ..! ಆತ ನಿಮಗೇನಾದರೂ ಮಾಡುತ್ತಾನೇನೋ ಅನ್ನೋ ಆತಂಕ ನಿಮಗೆ ಕಾಡುತ್ತೆ..! ಆಗ, ಕೆಲವರು ಹೆದರಿಕೊಂಡೇ ಸುಮ್ಮನೇ ಕೂರಬಹದು..! ಕೆಲವರು ಬೇರೆ ಬೇರೆ ಮಾರ್ಗಗಳನ್ನೂ ಅನುಸರಿಸಲೂ ಬಹುದು..! ಆದರೆ ಯಾರಾದರೂ ನೇರವಾಗಿಯೇ ರೈಲ್ವೆ ಸಚಿವರಿಂದ ಆ ಸಂದರ್ಭದಲ್ಲಿ ಸಹಾಯಕ್ಕೆ ಮೊರೆ ಹೋಗಿ, ಸಹಾಯ ಪಡೆಯುತ್ತಾರೆಯೇ..?!
ಹೀಗೂ ಸಹಾಯ ಪಡೆಯಲು ಸಾಧ್ಯವಿದೆಯೆಂದು ನರ್ಮತಾ ಮಹಾಜನ್ ತೋರಿಸಿಕೊಟ್ಟಿದ್ದಾರೆ..! ನರ್ಮತಾಗೆ ರೈಲಿನಲ್ಲಿ ಒಬ್ಬಂಟಿಯಯಾಗಿ ಪ್ರಯಾಣಿಸುತ್ತಿರುವಾಗ ಸಹ ಪ್ರಯಾಣಿಕನೊಬ್ಬನನ್ನು ನೋಡಿ ಭಯವಾಗುತ್ತೆ..! ಆಗ ಅವರು ಬೇರೆ ಯಾರ ಸಹಾಯವನ್ನೂ ಪಡೆಯೊಲ್ಲ..! ನೇರವಾಗಿ ರೈಲ್ವೇ ಸಚಿವರಾದ ಸುರೇಶ್ ಪ್ರಭು ಅವರ ಸಹಾಯವನ್ನೇ ಪಡೆಯುತ್ತಾರೆ..!
ಹೌದು, ಗುರುವಾರ ಸಂಜೆ ನರ್ಮತಾ ಒಬ್ಬರೇ ಮಹರಾಷ್ಟ್ರದ ಔಟ್ಸ್ಟೇಷನ್ ರೈಲಿನಲ್ಲಿ ಒಬ್ಬರೇ ಪ್ರಯಾಣ ಬೆಳೆಸ್ತಾ ಇರ್ತಾರೆ..! ಅದು ಶೇಗಾನ್ ರೈಲ್ವೇ ಸ್ಟೇಷನ್ನಲ್ಲಿ ಹಾದು ಹೋಗುವಾಗ ಅವರಿಗೆ ಸಹ ಪ್ರಯಾಣಿಕನನ್ನು ನೋಡಿ ಹೆದರಿಕೆ ಆಗುತ್ತೆ..! ಆತನ ಹಾವಭಾವ, ನೋಟ, ಬಾಡಿಲಾಂಗ್ವೇಜ್ ನೋಡಿದಾಗ ಅವನು ಸಭ್ಯನಂತೆ ಕಾಣ್ತಾ ಇರ್ಲಿಲ್ಲ..! ಆದ್ದರಿಂದ ಅವರಿಗೆ ಭಯವಾಗುತ್ತೆ..!

ತಕ್ಷಣವೇ ನರ್ಮತಾ ರೈಲ್ವೇ ಸಚಿವರಿಗೆ ಟ್ವೀಟ್ ಮಾಡುತ್ತಾರೆ..!

1

 

ನರ್ಮತಾ ಮಹಜನ್
ಪ್ಲೀಸ್ ಪ್ಲೀಸ್ ಸಾಹಯ ಮಾಡಿ. ಟ್ರೈನ್ ನಂ 18030ನಲ್ಲಿ ಪುರುಷ ಪ್ರಯಾಣಿಕನೊಬ್ಬ ಶೇಗನ್ ಬಳಿಯಲ್ಲಿ ನನಗೆ ಕಿರುಕುಳ ಕೊಡ್ತಾ ಇದ್ದಾನೆ. ನಾನು ಭಯಭೀತಳಾಗಿದ್ದೇನೆ.

ಹಿರಿಯ ಅಧಿಕಾರಿ ವೇದಪ್ರಕಾಶ್ ಈ ಟ್ವೀಟ್ ಅನ್ನು ಗಮನಿಸಿ ನನ್ನನ್ನು ಸಂಪರ್ಕಿಸಿ ಆಕೆಗೆ ಸಹಾಯ ಮಾಡುವಂತೆ ಹೇಳಿದರೆಂದು ಕೇಂದ್ರ ರೈಲ್ವೆ ಮುಖ್ಯ ಪಿ.ಆರ್.ಓ ನರೇಂದ್ರ ಪಾಟೀಲ್ ತಿಳಿಸಿದ್ದಾರೆ.
ನರ್ಮತಾ ಅವರಿದ್ದ ರೈಲಿನ ಸಂಪೂರ್ಣ ವಿವರವನ್ನು ಕೊಟ್ಟಿರ್ಲಿಲ್ಲ..!
ಇಲ್ಲಿ ರೈಲ್ವೆ ಸಚಿವಾಲಯ ಮತ್ತು ನರ್ಮತಾ ರ ನಡುವಿನ ಟ್ವೀಟ್ ಸಂಭಾಷಣೆಯಿದೆ.

ನರ್ಮತಾ ಮಹಜನ್
ಪ್ಲೀಸ್ ಪ್ಲೀಸ್ ಸಾಹಯ ಮಾಡಿ. ಟ್ರೈನ್ ನಂ 18030ನಲ್ಲಿ ಪುರುಷ ಪ್ರಯಾಣಿಕನೊಬ್ಬ ಶೇಗನ್ ಬಳಿಯಲ್ಲಿ ನನಗೆ ಕಿರುಕುಳ ಕೊಡ್ತಾ ಇದ್ದಾನೆ. ನಾನು ಭಯಭೀತಳಾಗಿದ್ದೇನೆ.

ರೈಲ್ವೆ ಸಚಿವಾಲಯ

ದಯಮಾಡಿ ಭದ್ರತಾ ಸಹಾಯವಾಣಿ 182 ನ್ನು ಸಂಪರ್ಕಿಸಿ. ಹಾಗೆಯೇ ನಿಮ್ಮ ಪಿಎನ್ಆರ್ ವಿವರವನ್ನು ಕಳುಹಿಸಿ.

ರೈಲ್ವೆ ಸಚಿವಾಲಯ
ದಯವಿಟ್ಟು, ನಿಮ್ಮ ಪಿಎನ್ಆರ್ ತಕ್ಷಣವೇ ಕೊಡಿ

2

ರೈಲ್ವೆ ಸಚಿವಾಲಯ ತಕ್ಷಣವೇ ಪ್ರತಿಕ್ರಿಯಿಸಿತು
3

ರೈಲ್ವೆ ಸಚಿವಾಲಯ
ನಾವು ಮಾಹಿತಿ ನೀಡಿದ್ದೇವೆ. ಆದಷ್ಟು ಬೇಗ ಅಲ್ಲಿಗೆ ಯಾರಾದರೂ ಬರುತ್ತಾರೆ.

ರೈಲು ನಲವತ್ತು ನಿಮಿಷದಲ್ಲಿ ಬುಷವಲಾ ನಿಲ್ದಾಣವನ್ನು ತಲುಪಿದ ಕೂಡಲೇ ನರ್ಮತಾ ಇದ್ದಲ್ಲಿ ಆರ್.ಪಿ.ಎಫ್.    ಹಾಜರಿದ್ದರು.

ನಿರಾಳರಾದ ನರ್ಮತಾ ಸಹಾಯಕರನ್ನು ಕಳುಹಿಸಿದ್ದಕ್ಕಾಗಿ ಮಂತ್ರಿಗಳಿಗೆ ಧನ್ಯವಾದ ಹೇಳ್ತಾರೆ.

 

ರೈಲ್ವೆ ಸಚಿವಾಲಯ
ನಾವು ಮಾಹಿತಿ ನೀಡಿದ್ದೇವೆ. ಆದಷ್ಟು ಬೇಗ ಅಲ್ಲಿಗೆ ಯಾರಾದರೂ ಬರುತ್ತಾರೆ

4
ನರ್ಮತಾ ಮಹಜನ್
ಸರ್, ನನಗೆ ಸಹಾಯ ದೊರೆತಿದೆ. ಬಹಳ, ಬಹಳ ಧನ್ಯವಾದಗಳು.
ನಂತರ ಅಲ್ಲಿದ್ದ ವ್ಯಕ್ತಿಯನ್ನು ಬೇರೆ ಕೋಚ್ಗೆ ಸ್ಥಳಾಂತರಿಸಲಾಯಿತು…!

ಹೀಗೆ ರೈಲ್ವೆ ಸಚಿವಾಲಯ ಮಹಿಳೆಯ ಸಹಾಯಕ್ಕೆ ಬಂತು..! ಪರೋಕ್ಷವಾಗಿ ಸಚಿವರಾದ ಸುರೇಶ್ ಪ್ರಭು ಕೂಡ.

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ವೈ-ಫೈ ಗಿಂತ ೧೦೦ ಪಟ್ಟು ವೇಗವಾಗಿ ಅಂತರ್ಜಾಲವನ್ನು ಒದಗಿಸೋ ಲಿ-ಫೈ

ಭಿಕ್ಷೆ ಬೇಡ್ತಾ ಇದ್ದ ಅಜ್ಜಿಗೆ ತಿನ್ನಲು ಕೊಡುವಾಗ, ವ್ಯಾಪಾರಿ ಕೊಡಬೇಡಿ ಅಂದಿದ್ದೇಕೆ..?!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

44 ವರ್ಷದ ನಂತರ ಜೈಲಿನಿಂದ ಹೊರಬಂದ ವ್ಯಕ್ತಿಯ ಪ್ರತಿಕ್ರಿಯೆ..!

ಇಡೀ ಜೀವನವನ್ನೇ ತಮ್ಮಂದಿರಿಗಾಗಿ ಮುಡಿಪಾಗಿಟ್ಟ ಅಣ್ಣ..!

ಕರ್ನಾಟಕದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋ ಲೋಕಾಯುಕ್ತವೇ ನಿರ್ನಾಮವಾಗುತ್ತಾ..? ಜನರೇ ನಿಮ್ಮ ಧ್ವನಿಯೆತ್ತಿ.! ಇಲ್ಲವಾದ್ರೆ ನಾಳೆ ನಮಗೇ ಕಷ್ಟ..!

ವಯಸ್ಸಾದ ಅಪ್ಪ ಬೆಂಗಳೂರಲ್ಲಿ ಒಬ್ಬಂಟಿ, ಮಗ ಹೆಂಡತಿ ಮಕ್ಕಳೊಡನೆ ಅಮೇರಿಕಾದಲ್ಲಿ..!

ರಾಹುಲ್ ಗಾಂಧಿ ಇಂದು ಮೇಕ್ ಇನ್ ಇಂಡಿಯಾ ವರ್ಕ್ ಆಗ್ತಿಯಾ ಅಂತ ಕೇಳಿದ್ರು..! ಬೆಂಗಳೂರು ಹುಡುಗೀರು ಏನಂದ್ರು ಗೊತ್ತಾ..?!

ಅಭಿಷೇಕ್ ಗೆ ಗೂಗಲ್ ನೀಡುತ್ತೆ 20000000 ರೂಪಾಯಿಗಳ ಸಂಬಳ..! ಐಐಟಿ ವಿದ್ಯಾರ್ಥಿಗೆ ಕೋಟಿ ಕೋಟಿ ಸಂಬಳದ ಆಫರ್ ..!

ಫೇಸ್ ಬುಕ್ ಜನಪ್ರಿಯತೆಯಲ್ಲಿ ಮೊದಲನೇ ಸ್ಥಾನದಲ್ಲಿ ಯಾರಿದ್ದಾರೆ ಗೊತ್ತಾ..?! ಈ ಪಟ್ಟಿಯನ್ನು ನೋಡಿದ್ರೆ, ನಿಮಗೆ ಖಂಡಿತಾ ಆಶ್ಚರ್ಯವಾಗುತ್ತೆ..!

LEAVE A REPLY

Please enter your comment!
Please enter your name here