No menu items!
11.7 C
Munich
Friday, May 1, 2026

ಇನ್ಮುಂದೆ ಬೆಡ್ ರೂಂ, ಮುತ್ತಿನ ದೃಶ್ಯ ಚಿತ್ರೀಕರಣ ಹೇಗೆ ? ಬಾಲಿವುಡ್ ಡೈರೆಕ್ಟರ್ ಹೀಗೊಂದು ಪ್ರಶ್ನೆ ಎತ್ತಿದ್ದೇಕೆ ..?

Must read

ಇನ್ಮುಂದೆ ಬೆಡ್ ರೂಂ, ಮುತ್ತಿನ ದೃಶ್ಯ ಚಿತ್ರೀಕರಣ ಹೇಗೆ ? ಬಾಲಿವುಡ್ ಡೈರೆಕ್ಟರ್ ಹೀಗೊಂದು ಪ್ರಶ್ನೆ ಎತ್ತಿದ್ದೇಕೆ ..?

ಕೊರೋನಾ ಎಂಬ ಮಹಾಮಾರಿ ಎಲ್ಲಾ ಕ್ಷೇತ್ರದವರನ್ನು ದಿಕ್ಕು ಕಾಣದಂತೆ ಮಾಡಿದೆ . ಈ ಉಪಟಳ ಎನ್ನೆಷ್ಟು ದಿನ , ಉದ್ಯೋಗ, ಉದ್ಯಮದ ಕಥೆ ಏನೆಂಬುದು ಎಲ್ಲರ ಚಿಂತೆ ..

ಕೊರೋನಾ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಇದೆ . ಈ ಲಾಕ್ ಡೌನ್ ನಿಂದ ಸಿನಿಮಾಗಳ ಚಿತ್ರೀಕರಣ ಕೂಡ ನಿಂತಿದೆ . ನಟ , ನಟಿಯರು, ನಿರ್ದೇಶಕರು ಸೇರಿದಂತೆ ಸಿನಿಮಾ ರಂಗದಲ್ಲಿ ದುಡಿಯುತ್ತಿರುವ ಎಲ್ಲರೂ ಸದ್ಯ ಮನೆಯಲ್ಲೇ ಇದ್ದಾರೆ .

ಈ ನಡುವೆ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಸಿಗ್ತಿದ್ದಾರೆ . ಹಾಗೆಯೇ ಬಾಲಿವುಡ್ ನ ಖ್ಯಾತ ನಿರ್ದೇಶಕ ಶೂಜಿತ್ ಸರ್ಕಾರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು , ಒಂದು ಪ್ರಮುಖ ಪ್ರಶ್ನೆಯನ್ನು ಸಿನಿರಂಗದವರಿಗೆ ಕೇಳಿದ್ದಾರೆ ..!

ವಿಕ್ಕಿ ಡೋನರ್ ,ಪಿಕು ಅಕ್ಟೋಬರ್ ಮೊದಲಾದ ಆಫ್ ಬೀಟ್ ಸಿನಿಮಾಗಳನ್ನು‌ ನಿರ್ದೇಶಿಸಿರುವ ಶೂಜಿತ್ ಸರ್ಕಾರ್ ಬಾಲಿವುಡ್ ಭರವಸೆ ನಿರ್ದೇಶಕ . ಪ್ರಸ್ತುತ ಗಿಲಾಬೋ ಸಿತಾಬೋ ಮತ್ತು ಸರ್ದಾರ್ ಉದ್ದಾಮ್ ಸಿಂಗ್ ಎಂಬ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದಾರೆ .

ಅವರೀಗ ಸಿನಿರಂಗದ ಮುಂದೊಂದು ಪ್ರಶ್ನೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇಟ್ಟಿದ್ದಾರೆ . ಅವರ ಪ್ರಶ್ನೆ ಸಿಲ್ಲಿ ಎನಿಸಿದರೂ ಅರ್ಥಗರ್ಭಿತ ಹಾಗೂ ಯೋಚನೆ ಮಾಡಬೇಕಾಗಿರುವುದೇ ?

ಕೊರೋನಾ ಹಾವಳಿ ಮುಗಿದ ನಂತರ ಸಿನಿಮಾಗಳ ಚಿತ್ರೀಕರಣ ಯಾವ ರೀತಿ ನಡೆಯಲಿದೆ . ಒಂದು ವೇಳೆ ಕಿಸ್ ಮಾಡುವ, ತಬ್ಬಿಕೊಳ್ಳುವ ಇಂಟಿಮೇಟ್ ದೃಶ್ಯಗಳಿದ್ದರೆ ಅವುಗಳ ಚಿತ್ರೀಕರಣ ಮಾಡುವುದು ಹೇಗೆ ಎಂದು ಶೂಜಿತ್ ಸರ್ಕಾರ್ ಪ್ರಶ್ನೆ ಮಾಡಿದ್ದಾರೆ .

ಅವರ ಪ್ರಶ್ನೆ ನಿಜಕ್ಕೂ ಚಿಂತನಾರ್ಹ. ನಟ – ನಟಿಯರ ಆರೋಗ್ಯ ದೃಷ್ಟಿಯಿಂದ ಇದೊಂದು ಗಂಭೀರ ಪ್ರಶ್ನೆಯಾಗಿದ್ದ, ನೆಟ್ಟಿಗರು ಈ ಪ್ರಶ್ನೆಗೆ ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ ..

ಕೆಲವರು 19 60 ಮತ್ತು 70 ರ ದಶಕದ ತಂತ್ರಗಳನ್ನು ಬಳಸಿ . ಹೂವುಗಳು ಒಂದಾಗುವ ದೃಶ್ಯಗಳನ್ನು ತೋರಿಸಿ ಎಂದು ಕಾಮೆಂಟ್ ಮಾಡಿದ್ದಾರೆ ‌. ಮತ್ತೆ ಕೆಲವರು ಶೂಟಿಂಗ್ ಗೆ ಮುನ್ನ ನಟ ನಟಿಯರನ್ನು ತಪಾಸಣೆ ಮಾಡಿ ಎಂದು ಸಲಹೆ ನೀಡಿದ್ದಾರೆ .

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?

ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!

ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?

ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!

ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!

ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!

2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!

ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article