No menu items!
19.6 C
Munich
Tuesday, April 28, 2026

ಕೆಆರ್‌ಎಸ್ ಡ್ಯಾಂ ಕುರಿತು ಫೇಕ್ ನ್ಯೂಸ್ ಹರಡಿದರೆ ಕಾನೂನು ಕ್ರಮ ತೆಗೆದುಕೊಳ್ಳಿ: ಸಿ.ಟಿ. ರವಿ

Must read

ಕೆಆರ್‌ಎಸ್ ಡ್ಯಾಂ ಕುರಿತು ಫೇಕ್ ನ್ಯೂಸ್ ಹರಡಿದರೆ ಕಾನೂನು ಕ್ರಮ ತೆಗೆದುಕೊಳ್ಳಿ: ಸಿ.ಟಿ. ರವಿ

 

ಮೈಸೂರು: ಕೆಆರ್‌ಎಸ್ ಡ್ಯಾಂ ಕುರಿತು ಫೇಕ್ ನ್ಯೂಸ್ ಹರಡಿದರೆ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಕಿಡಿಕಾರಿದ್ದಾರೆ. ವಿಶೇಷವಾಗಿ ಡಾ. ಹೆಚ್.ಸಿ. ಮಹದೇವಪ್ಪ ಅವರ ಟಿಪ್ಪು ಸುಲ್ತಾನ್ ಸಂಬಂಧಿಸಿದ ಹೇಳಿಕೆಯನ್ನು ಅವರು ಖಂಡಿಸಿದ್ದಾರೆ.

ಕೆಆರ್‌ಎಸ್ ಜಲಾಶಯಕ್ಕೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದಾರೆ ಎಂಬ ಮಹದೇವಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ, “ಜ್ಯೂನಿಯರ್ ಡಾಕ್ಟರ್ ಯತೀಂದ್ರ ನಾಲ್ವಡಿಗಿಂತ ತಮ್ಮಪ್ಪನೇ ದೊಡ್ಡವರು ಎಂದಿದ್ದರು. ಈಗ ಸೀನಿಯರ್ ಡಾಕ್ಟರ್ ಮಹದೇವಪ್ಪ ಇತಿಹಾಸವನ್ನೇ ತಿರುವುಮಾಡಲು ಹೊರಟಿದ್ದಾರೆ,” ಎಂದು ವ್ಯಂಗ್ಯವಾಡಿದ್ದಾರೆ.

ಅವರ ಟೀಕೆ ಮುಂದುವರೆಸಿ, “1799ರಲ್ಲಿ ಟಿಪ್ಪು ಸತ್ತವರು, ಆದರೆ ಕೆಆರ್‌ಎಸ್ ನಿರ್ಮಾಣವು 1911ರಲ್ಲಿ ಆರಂಭವಾಗಿದೆ. ವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಇದ್ದಿದ್ದರಿಂದಲೇ ಜಲಾಶಯ ನಿರ್ಮಾಣ ಸಾಧ್ಯವಾಯಿತು. ಟಿಪ್ಪು ಕಾಲದಲ್ಲಿ ಡಿಪಿಆರ್ ಮಾಡಿದವರ ಹೆಸರು ಹೇಳಬಹುದಾ? ಯಾರೋ ಮುಲ್ಲಾ ಅಥವಾ ಮೌಲ್ವಿ ಮಾಡಿರಬೇಕಾಗಿತ್ತು ತಾನೇ?” ಎಂದು ಪ್ರಶ್ನಿಸಿದ್ದಾರೆ.

- Advertisement -spot_img

More articles

- Advertisement -spot_img

Latest article