ಜೆಡಿಎಸ್ ಅನರ್ಹ ಶಾಸಕ ಎಚ್. ವಿಶ್ವನಾಥ್ ಅವರು ದೇವೇಗೌಡರ ಬಗ್ಗೆ ಮಾತನಾಡುತ್ತಾ, ನಾನು ಎಂದಿಗೂ ದೇವೇಗೌಡರನ್ನು ಮರೆಯೋ ಹಾಗಿಲ್ಲ ಯಾಕಂದ್ರೆ ನನ್ನನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ರು ಆದರೆ, ಪರಿಸ್ಥಿತಿ ಹಾಗೂ ಸನ್ನಿವೇಶದ ಹಿನ್ನಲೆ ಶಾಸಕ ಸ್ಥಾನ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು.
ನಾನು ರಾಜೀನಾಮೆ ನೀಡಿ ಹೊರ ಬಂದಿರಬಹುದು ಆದರೆ ನನ್ನ ಜೆಡಿಎಸ್ ನಡುವಿನ ಸಂಬಂಧ ಬಹಳ ಹಳೆಯದು ದೇವೇಗೌಡರಿಗೆ ನಾನು ಎಂದಿಗು ಚಿರಋುಣಿಯಾಗಿರುತ್ತೇನೆ ಹಾಗಾಗಿ ನಾನು ನನ್ನ ಮನೆಯ ದೇವರ ಕೋಣೆಯಲ್ಲಿ ದೇವೇಗೌಡರ ಫೋಟೋವನ್ನು ಇಟ್ಟಿದ್ದೇನೆ ಎಂದು ಹೇಳಿದ್ದರು .