No menu items!
17 C
Munich
Saturday, May 2, 2026

ಮನಕಲಕುವ ಘಟನೆ: ಜೀವಂತ ಆಕಳ ಕರುವನ್ನೇ ಹರಿದು ತಿಂದ ಬೀದಿನಾಯಿಗಳು!

Must read

ಮನಕಲಕುವ ಘಟನೆ: ಜೀವಂತ ಆಕಳ ಕರುವನ್ನೇ ಹರಿದು ತಿಂದ ಬೀದಿನಾಯಿಗಳು!

ಧಾರವಾಡ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಜೋರಾಗಿದೆ. ನಾಯಿಗಳ ಹಿಂಡು ಅವಳಿನಗರದ ಅನೇಕ ಕಡೆಗಳಲ್ಲಿ ಈಗಾಗಲೇ ಮಕ್ಕಳ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿವೆ. ಆದರೆ, ಮಹಾನಗರ ಪಾಲಿಕೆ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ನಾಯಿಗಳ ಹಿಂಡು ಈ ರೀತಿ ಜೀವಂತ ಆಕಳ ಕರುವನ್ನೇ ಹರಿದು ಮುಕ್ಕಿರುವ ಘಟನೆ ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿ ಜರುಗಿದೆ.

ಈಗಾಗಲೇ ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಅನೇಕರು ಪಾಲಿಕೆಗೆ ಮನವಿ ಮಾಡಿದ್ದಾರೆ. ಆದರೆ, ನಾಯಿಗಳ ನಿಯಂತ್ರಣ ಮಾತ್ರ ಇನ್ನೂ ಆಗಿಲ್ಲ. ದಿನೇ ದಿನೇ ಈ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಲೇ ಇದ್ದು, ಮುಂದೆ ಇದು ಗಂಭೀರ ಸ್ವರೂಪ ಪಡೆದುಕೊಳ್ಳುವ ಮುಂಚೆಯೇ ಮೇಯರ್ ಜ್ಯೋತಿ ಪಾಟೀಲ ಹಾಗೂ ಹಾಗೂ ಪಾಲಿಕೆ ಆಯುಕ್ತರು ಕ್ರಮ ಕೈಗೊಳ್ಳಬೇಕಿದೆ.

- Advertisement -spot_img

More articles

- Advertisement -spot_img

Latest article